ಶುಕ್ರವಾರ, 31 ಅಕ್ಟೋಬರ್ 2025
×
ADVERTISEMENT

ನಾರೀಕೇಳಾ

ADVERTISEMENT

ಕಂಗೊಳಿಸುವ ಕೆಂಪು ಮುಂದೆ, ಕಂಗೆಡಿಸುವ ಮಂಜು ಹಿಂದೆ

ತ್ರಿವೇಣಿ ಕನ್ನಡದಲ್ಲಿ ವಿಶಿಷ್ಟವಾದ ಹೆಸರು. ಕಾದಂಬರಿಯನ್ನು ಜನಪ್ರಿಯ ಪ್ರಕಾರವಾಗಿ ಮಾಡಿದ್ದು, ಕಾದಂಬರಿಗೂ ಲೇಖಕಿಯರಿಗೂ ಜನ್ಮಜನ್ಮಾಂತರದ ಸಂಬಂಧವೇನೋ ಎನ್ನುವ ಛಾಪು ಮೂಡಿಸಿದ್ದು ತ್ರಿವೇಣಿ. ಅಷ್ಟೇಕೆ, ಕನ್ನಡದಲ್ಲಿ ಅಸಂಖ್ಯಾತ ಕಾದಂಬರಿಕಾರ್ತಿಯರು ಹುಟ್ಟಿದ್ದರ ಹಿಂದೆ ತ್ರಿವೇಣಿಯವರ ದಟ್ಟ ಪ್ರಭಾವವಿದೆ.
Last Updated 16 ಜೂನ್ 2018, 9:11 IST
fallback

ಕಾವ್ಯ ಎನ್ನುವ ಎಲ್ಲ ಕಾಲದ ಸಖ

ಕಾವ್ಯವೆನ್ನುವುದು ಹೆಣ್ಣಿಗೆ ಗಂಡಿಗಿಂತಲೂ ಹೆಚ್ಚು ಮುಖ್ಯವೆ, ಭಿನ್ನವೆ ಎನ್ನುವ ಮಾತನ್ನು ಕೇಳಿದರೆ ಇದು ಏನು ಅತಿರೇಕ–ಅಬದ್ಧ ಎಂದು ಕೆರಳಿ ಯುದ್ಧವನ್ನೇ ಕಾದುವ ಕಾವ್ಯದ ವೀರಯೋಧರಿಗೇನೂ ಕಡಿಮೆಯಿಲ್ಲ. ಆದರೆ, ನಿರ್ದೇಶಿತ ಬದುಕು ಮತ್ತು ವ್ಯಕ್ತಿತ್ವವನ್ನು ದಾಟುವಲ್ಲಿ ಹೆಣ್ಣಿಗೆ ಭಾಷೆ ಎನ್ನುವುದು ಎಂಥ ಬಿಡುಗಡೆಯ ದಾರಿಯಾದೀತು ಎನ್ನುವುದನ್ನು ಅರ್ಥಮಾಡಿಕೊಳ್ಳಲು ನಿರಾಕರಿಸುವವರು ಮಾತ್ರ ಹೂಡುವ ಯುದ್ಧ ಇದು.
Last Updated 16 ಜೂನ್ 2018, 9:11 IST
fallback

ಕವಡೆ ಮತ್ತು ಕೌಶಲ

ಹೊಸ ಹೆಣ್ಣು ಎನ್ನುವವಳು ಅನಾವರಣವೂ ಹೌದು, ಪಲ್ಲಟದ ದೃಷ್ಟಿಯೂ ಹೌದು. ಆದ್ದರಿಂದಲೇ ಈ ‘ಆಗುವಿಕೆ’ಯನ್ನು ಸಾವಯವ ಪ್ರಕ್ರಿಯೆ ಎಂದು ಕರೆಯುವುದು. ಇದೊಂದು ಸೃಷ್ಟಿಕ್ರಿಯೆಯ ಸಂಭ್ರಮದಷ್ಟೇ, ಪೊರೆ ಕಳಚಿಕೊಳ್ಳುವ ಅನಿವಾರ್ಯತೆಯಷ್ಟೇ, ರೂಪಾಂತರದ ಮತ್ತು ಆಯ್ಕೆಯ ದ್ವಂದ್ವದಷ್ಟೇ ಕಷ್ಟದ ಪ್ರಕ್ರಿಯೆಯೂ ಹೌದು. ಹೆಣ್ಣಿನ ಒಳ ಹೊರಗುಗಳೆರಡೂ ಅಪಾರ ತನ್ಮಯತೆಯಲ್ಲಿ ತೊಡಗಿಕೊಳ್ಳಬೇಕಾದ ಈ ಕ್ರಿಯೆ ಅನೇಕ ಬಾರಿ ಹೋಗುತ್ತ ಕೊಯ್ಯುವ ಬರುತ್ತ ಕೊಯ್ಯುವ ಮೂಲಭೂತ ಪಲ್ಲಟದ ನೆಲೆಯದ್ದು.
Last Updated 16 ಜೂನ್ 2018, 9:11 IST
fallback

ಶಿಕ್ಷಣದ ಬೆಳಕಿಂಡಿಯಲಿ ಸ್ವಪ್ರಜ್ಞೆಯ ಜಾಗೃತಿ

ಅಕ್ಷರವೆನ್ನುವುದು ದಮನಿತರ ಪಾಲಿಗೆ ಸ್ಪರ್ಶಮಣಿಯ ಹಾಗೆ. ಅವರ ಇಡೀ ವ್ಯಕ್ತಿತ್ವವನ್ನೇ ಅದು ಬದಲಿಸಿಬಿಡುತ್ತದೆ. ಅವರೊಳಗಿನ ದ್ವಂದ್ವ, ಕೀಳರಿಮೆಗಳನ್ನೆಲ್ಲ ಕಳೆದು, ಆರೋಪಿತ ವ್ಯಕ್ತಿತ್ವದ ವೇಷ, ಭಾರವನ್ನೆಲ್ಲ ಕಳೆದ, ಆತ್ಮಪ್ರಭೆಯಿಂದಲೇ ಬೆಳಗುವ ವ್ಯಕ್ತಿತ್ವದ ಸಾಕ್ಷಾತ್ಕಾರಕ್ಕೆ ಇರುವ ಅರಿವಿನ ದಾರಿ ಇದು.
Last Updated 16 ಜೂನ್ 2018, 9:11 IST
fallback

ಸುಬ್ಬಮ್ಮ ಸೋಲುವುದಿಲ್ಲ...

ಪ್ರತಿರೋಧದ ಮಾದರಿಗಳಲ್ಲೆಲ್ಲ ಅತ್ಯಂತ ಸಂಕೀರ್ಣವಾದ ಬಹುಮುಖಿಯಾದ ಮಾದರಿಯೆಂದರೆ ಹೆಣ್ಣಿನದೇ. ಇದರ ಸಂಕೀರ್ಣತೆಯ ಒಂದು ಪ್ರಧಾನ ನೆಲೆಯೆಂದರೆ ಅಮೂರ್ತತೆಯದ್ದು.
Last Updated 16 ಜೂನ್ 2018, 9:11 IST
ಸುಬ್ಬಮ್ಮ ಸೋಲುವುದಿಲ್ಲ...

ಸ್ತ್ರೀವಾದಿ ವ್ಯಾಖ್ಯಾನ–ಆಖ್ಯಾನದ ‘ಸಖೀಗೀತ’

ಕನ್ನಡದ ಕೆಲವು ಸ್ತ್ರೀಮಾದರಿಗಳ ಜೊತೆಗೆ ಕೆಲವು ಭಾರತೀಯ ಮಾದರಿಗಳನ್ನೂ ಕೆಲವು ಯುರೋಪಿಯನ್ ಮಾದರಿಗಳನ್ನೂ ಚರ್ಚಿಸುವ ನನ್ನ ಇರಾದೆಗೆ ಒಂದು ಸ್ಪಷ್ಟ ಉದ್ದೇಶವಿದೆ. ಹೆಣ್ಣಿನ ಜಾಗತಿಕವೆನ್ನಬಹುದಾದ ಚಹರೆಯನ್ನು ಗುರುತಿಸಬಹುದು ಎನ್ನುವುದು. ಏಳು ಸಮುದ್ರಗಳಾಚೆ, ಏಳು ಬೆಟ್ಟಗಳಾಚೆ ಈಚೆ ಇರುವ ಹೆಣ್ಣು ಒಂದೇ ಅಲ್ಲವೆ ಎನ್ನುವುದನ್ನು ಮತ್ತೊಮ್ಮೆ ಮಗದೊಮ್ಮೆ ಕಂಡುಕೊಳ್ಳುವ ಪ್ರಯತ್ನ ಇದು. ಬಿ.ಎಂ.ಶ್ರೀ ತಮ್ಮ ಇಂಗ್ಲಿಷ್ ಗೀತೆಗಳ ಪ್ರಯೋಗವನ್ನು ಸಮರ್ಥಿಸಿಕೊಳ್ಳುವ ಕವನ ‘ಕಾಣಿಕೆ’ಯಲ್ಲಿ–
Last Updated 16 ಜೂನ್ 2018, 9:11 IST
fallback

ಕುಸುಮ–ಕಠೋರ ‘ಶಕುಂತಲೆ’

ಶಕುಂತಲೆ ಎನ್ನುವ ಹೆಸರೇ ನಮ್ಮಲ್ಲಿ ರಮ್ಯವಾದ ಚಿತ್ರವೊಂದನ್ನು ಕಟ್ಟುತ್ತದೆ. ಇನ್ನಿವಳಿಗಿಂತ ಸುಂದರಿ, ಸುಕೋಮಲೆ ಇರುವುದು ಸಾಧ್ಯವೇ ಇಲ್ಲವೇನೋ ಎನಿಸುವಂಥ ಬೆರಗಿನ ಪ್ರತಿಮೆಯೊಂದು ನಮ್ಮಲ್ಲಿ ಮೂಡುತ್ತದೆ.
Last Updated 16 ಜೂನ್ 2018, 9:11 IST
fallback
ADVERTISEMENT

ನಾನು ‘ಅರ್ಧ ಹೆಣ್ಣು’ ಎಂದ ಗಾಂಧೀಜಿ

ವಿಕ್ರಮ ಮತ್ತು ಬೇತಾಳನ ಕತೆಗೂ ಸ್ತ್ರೀವಾದಿಗಳ ನಿರಂತರ ಪ್ರಯತ್ನಗಳಿಗೂ ರೂಪಕದ ನೆಲೆಯಲ್ಲಿ ಒಂದು ಸಾಮ್ಯವಿದೆ. ವಿಕ್ರಮ ತನ್ನೆಲ್ಲ ಶಕ್ತಿ, ಪ್ರತಿಭೆ, ಪ್ರಾಮಾಣಿಕತೆ ಎಲ್ಲವನ್ನೂ ಬಳಸಿ ಕಥೆ ಹೇಳುತ್ತಲೇ ಹೋದರೂ ಬೇತಾಳ ಏನೋ ಒಂದು ನೆವ ತೆಗೆದು ವಾಪಸ್ ಹೋಗಿ ಮರಕ್ಕೆ ನೇತು ಹಾಕಿಕೊಳ್ಳುವಂತೆ ನಮ್ಮ ಮೌಲ್ಯವ್ಯವಸ್ಥೆ ಸ್ತ್ರೀವಾದದ ಜೊತೆ ನಡೆದುಕೊಳ್ಳುತ್ತಿರುತ್ತದೆ.
Last Updated 16 ಜೂನ್ 2018, 9:11 IST
fallback

ಕೇಳುವುದಿಲ್ಲ ನಾನು ಅದೃಷ್ಟವನು, ಅಧಿಕಾರವನ್ನು...

ಆಕೆಯೊಬ್ಬ ಅಪೂರ್ವ ಸುಂದರಿ. ಅವಳ ಹೊರ ಮತ್ತು ಒಳ ಸೌಂದರ್ಯಗಳು ಅವಳ ವ್ಯಕ್ತಿತ್ವಕ್ಕೆ ಲೋಕೋತ್ತರವೆನಿಸುವ ಘನತೆಯನ್ನು, ಶೋಭೆಯನ್ನು ತಂದಿದ್ದವು. ಈ ಗುಣಗಳಿಗೆ ಮುಕುಟವೆನಿಸುವಂತೆ ಅವಳಲ್ಲಿ ಕವಿಪ್ರತಿಭೆಯೂ ಇತ್ತು. ಅದನ್ನು ಲೋಕ ಮೆಚ್ಚಲಿ ಎನ್ನುವ ಸಹಜ ಬಯಕೆಯೂ ಇತ್ತು. ಅವಳ ಅಪ್ಪನೋ ಶುದ್ಧ ಅಥವಾ ಕರ್ಮಟ ಎನ್ನುವುದೇ ವಾಸಿಯೇನೋ ಎನ್ನುವಷ್ಟು ಧಾರ್ಮಿಕ ವ್ಯಕ್ತಿ.
Last Updated 16 ಜೂನ್ 2018, 9:11 IST
fallback

ಬಹುರತ್ನಾ ವಸುಂಧರಾ...

ಕನ್ನಡದ ಈ ಅಪೂರ್ವ ಕವಿಯ ಮೇಲೆ ಬರೆಯಬೇಕೆಂದು ಎಂದಿನಿಂದಲೂ ಮನಸಿನಲ್ಲಿದ್ದರೂ ಬರೆಯುವುದು ತಡವಾಯಿತು. ಕಲಾವಿದರ ನಿಜವಾದ ಸಾಧ್ಯತೆಗಳ ಶೋಧಗಳು ಆಗಿರುವುದೇ ಇಲ್ಲ. ಅಥವಾ ಅವರ ಇನ್ನಿತರ ಆಯಾಮಗಳೇ ಮುನ್ನೆಲೆಗೆ ಬಂದು ಅವರ ಇತರ ಅಷ್ಟೇ ಮುಖ್ಯವಾದ ನೆಲೆಗಳು ನೇಪಥ್ಯದಲ್ಲೇ ಉಳಿದು ಬಿಟ್ಟಿರುತ್ತವೆ.
Last Updated 16 ಜೂನ್ 2018, 9:11 IST
fallback
ADVERTISEMENT
ADVERTISEMENT
ADVERTISEMENT