ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ನಾರೀಕೇಳಾ

ADVERTISEMENT

ಕಾವ್ಯ ಎನ್ನುವ ಎಲ್ಲ ಕಾಲದ ಸಖ

ಕಾವ್ಯವೆನ್ನುವುದು ಹೆಣ್ಣಿಗೆ ಗಂಡಿಗಿಂತಲೂ ಹೆಚ್ಚು ಮುಖ್ಯವೆ, ಭಿನ್ನವೆ ಎನ್ನುವ ಮಾತನ್ನು ಕೇಳಿದರೆ ಇದು ಏನು ಅತಿರೇಕ–ಅಬದ್ಧ ಎಂದು ಕೆರಳಿ ಯುದ್ಧವನ್ನೇ ಕಾದುವ ಕಾವ್ಯದ ವೀರಯೋಧರಿಗೇನೂ ಕಡಿಮೆಯಿಲ್ಲ. ಆದರೆ, ನಿರ್ದೇಶಿತ ಬದುಕು ಮತ್ತು ವ್ಯಕ್ತಿತ್ವವನ್ನು ದಾಟುವಲ್ಲಿ ಹೆಣ್ಣಿಗೆ ಭಾಷೆ ಎನ್ನುವುದು ಎಂಥ ಬಿಡುಗಡೆಯ ದಾರಿಯಾದೀತು ಎನ್ನುವುದನ್ನು ಅರ್ಥಮಾಡಿಕೊಳ್ಳಲು ನಿರಾಕರಿಸುವವರು ಮಾತ್ರ ಹೂಡುವ ಯುದ್ಧ ಇದು.
Last Updated 16 ಜೂನ್ 2018, 9:11 IST
fallback

ಹುಚ್ಚಲ್ಲ, ಅರಿವಿನ ಆಸ್ಫೋಟ

ಹೆಣ್ಣಿಗೂ ಹುಚ್ಚಿಗೂ ಇರುವ ಮತ್ತು ಕಟ್ಟಲಾಗಿರುವ ಸಂಬಂಧಗಳ ಅಧ್ಯಯನವೇ ಒಂದು ರೋಮಾಂಚಕಾರಿ ಅನುಭವ. ಪಿತೃ ಸಂಸ್ಕೃತಿಯೆನ್ನುವುದು ಅದೆಷ್ಟು ಮಹತ್ವಾಕಾಂಕ್ಷೆಯಲ್ಲಿ ಮತ್ತು ಕೊನೆಯಿಲ್ಲದ ಮಹತ್ವಾಕಾಂಕ್ಷೆ ಹಾಗೂ ಅಧಿಕಾರ ಲಾಲಸೆಗೆ ಮಾತ್ರ ಸಾಧ್ಯವಾಗಬಹುದಾದ ಕ್ರೌರ್ಯದಲ್ಲಿ ಕಟ್ಟಿದ ವ್ಯವಸ್ಥೆ ಎನ್ನುವುದು ನಮ್ಮ ಅರಿವಿಗೆ ದಕ್ಕಬೇಕೆಂದರೆ ಹುಚ್ಚು ಮತ್ತು ಹೆಣ್ಣಿನ ನಡುವಿರುವ ಅನಾದಿಯೋ ಎನಿಸುವಷ್ಟು ಸತತವಾಗಿರುವ ಸಖ್ಯವನ್ನು ನೋಡಬೇಕು.
Last Updated 16 ಜೂನ್ 2018, 9:11 IST
ಹುಚ್ಚಲ್ಲ, ಅರಿವಿನ  ಆಸ್ಫೋಟ

ಕವಡೆ ಮತ್ತು ಕೌಶಲ

ಹೊಸ ಹೆಣ್ಣು ಎನ್ನುವವಳು ಅನಾವರಣವೂ ಹೌದು, ಪಲ್ಲಟದ ದೃಷ್ಟಿಯೂ ಹೌದು. ಆದ್ದರಿಂದಲೇ ಈ ‘ಆಗುವಿಕೆ’ಯನ್ನು ಸಾವಯವ ಪ್ರಕ್ರಿಯೆ ಎಂದು ಕರೆಯುವುದು. ಇದೊಂದು ಸೃಷ್ಟಿಕ್ರಿಯೆಯ ಸಂಭ್ರಮದಷ್ಟೇ, ಪೊರೆ ಕಳಚಿಕೊಳ್ಳುವ ಅನಿವಾರ್ಯತೆಯಷ್ಟೇ, ರೂಪಾಂತರದ ಮತ್ತು ಆಯ್ಕೆಯ ದ್ವಂದ್ವದಷ್ಟೇ ಕಷ್ಟದ ಪ್ರಕ್ರಿಯೆಯೂ ಹೌದು. ಹೆಣ್ಣಿನ ಒಳ ಹೊರಗುಗಳೆರಡೂ ಅಪಾರ ತನ್ಮಯತೆಯಲ್ಲಿ ತೊಡಗಿಕೊಳ್ಳಬೇಕಾದ ಈ ಕ್ರಿಯೆ ಅನೇಕ ಬಾರಿ ಹೋಗುತ್ತ ಕೊಯ್ಯುವ ಬರುತ್ತ ಕೊಯ್ಯುವ ಮೂಲಭೂತ ಪಲ್ಲಟದ ನೆಲೆಯದ್ದು.
Last Updated 16 ಜೂನ್ 2018, 9:11 IST
fallback

ಸುಬ್ಬಮ್ಮ ಸೋಲುವುದಿಲ್ಲ...

ಪ್ರತಿರೋಧದ ಮಾದರಿಗಳಲ್ಲೆಲ್ಲ ಅತ್ಯಂತ ಸಂಕೀರ್ಣವಾದ ಬಹುಮುಖಿಯಾದ ಮಾದರಿಯೆಂದರೆ ಹೆಣ್ಣಿನದೇ. ಇದರ ಸಂಕೀರ್ಣತೆಯ ಒಂದು ಪ್ರಧಾನ ನೆಲೆಯೆಂದರೆ ಅಮೂರ್ತತೆಯದ್ದು.
Last Updated 16 ಜೂನ್ 2018, 9:11 IST
ಸುಬ್ಬಮ್ಮ ಸೋಲುವುದಿಲ್ಲ...

ಪಿತೃಸಂಸ್ಕೃತಿಯ ಸ್ವಯಂದತ್ತ ಧಿಮಾಕು ಧಿಕ್ಕರಿಸುತ್ತ...

ಈಶಾನ್ಯ ಭಾರತದಲ್ಲಿ ಮಹಿಳೆಯರ ಮೇಲಿನ ಆಕ್ರಮಣ ವಿರೋಧಿಸಿ ಉಪವಾಸ ಕೂತರೆ, ಹಿರಿಯ ಮಿಲಿಟರಿ ಅಧಿಕಾರಿ ಅವರನ್ನು ಕರೆಸಿ, ‘what do you think you are? after all a pair of breasts and a vagina?’ ಎಂದನಂತೆ. ನಾಗರಿಕತೆ ಯನ್ನು, ಮಾನವ ಘನತೆಯನ್ನು ಹೆಣ್ಣಿನ ಮಟ್ಟಿಗೆ ನಿರೀಕ್ಷಿಸುವುದೇ ಅಪರಾಧವೆ?
Last Updated 16 ಜೂನ್ 2018, 9:11 IST
fallback

ಮುಕ್ತಛಂದದ, ಮುಕ್ತ ಲಯದ ಅಮೃತ ಪತಾಕೆಗಳು

ಸಾಹಿತ್ಯದಿಂದ ಶುರುವಾದ ‘ನಾರೀಕೇಳಾ’ದ ಈ ಪ್ರಯಾಣ ಸಂಗೀತ, ಚಿತ್ರಕಲೆಯ ಕಡೆಗೂ ಸಾಗುತ್ತಿರುವುದು ಕಲೆಯ ಮೂಲಸ್ವರೂಪ ಮತ್ತು ಏಕತೆಯ ಸಂಕೇತದಂತೆಯೇ ಕಾಣಿಸುತ್ತಿದೆ. ಒಂದು ಇನ್ನೊಂದಕ್ಕೆ ಪೂರಕವಾಗುವ, ಒಂದು ಇನ್ನೊಂದನ್ನು ಬೆಳೆಸುವ ಮತ್ತು ಬೆಳಗುವ ಪರಿ ಕಲೆಯನ್ನು ಕುರಿತ ನಮ್ಮ ಪ್ರೀತಿ ಮತ್ತು ನಂಬಿಕೆಯನ್ನು ಹೆಚ್ಚಿಸುತ್ತದೆ. ಸುಬ್ಬುಲಕ್ಷ್ಮಿಯಾಗಲಿ, ಅಮೃತಾ ಆಗಲಿ, ನಮ್ಮೆದುರಿಗೆ ವ್ಯಕ್ತಿತ್ವಗಳಾಗಿರುವಂತೆಯೇ, ಅಪ್ರತಿಮ ಪಾತ್ರಗಳೂ ಆಗಿವೆ, ನಮ್ಮೆದುರಿಗಿರುವ ಮಾದರಿಗಳೂ ಆಗಿವೆ. ಮಹಿಳಾ ಸಂಕಥನದ ಬೇರು ಮತ್ತು ಹೂವುಗಳೆಂದೇ ಇವರನ್ನು ಇಲ್ಲಿ ಚರ್ಚಿಸುವ ಅಗತ್ಯವಿದೆ.
Last Updated 16 ಜೂನ್ 2018, 9:11 IST
fallback

ನಮ್ಮೆಲ್ಲರ ಆತ್ಮಸಖಿ ರಾಧೆ

ರಾಧೆ ಎನ್ನುವವಳು ಏನಲ್ಲ? ಏನೆಲ್ಲಾ? ಭಾರತೀಯ ಮನಸ್ಸು ಗಂಡು ಹೆಣ್ಣೆನ್ನದೆ ಕೃಷ್ಣನಷ್ಟೇ ರಾಧೆಯನ್ನೂ ತನ್ನ ಮನೋದರ್ಪಣದಲ್ಲಿ ಸದಾ ಕಾಣುತ್ತಲೇ ಬಂದಿದೆ. ರಾಧೆ ಒಂದು ರೂಪಕವೆ? ಕನಸೆ? ಮಾದರಿಯೆ? ಪ್ರತಿನಿಧಿಯೆ? ಅಪ್ರತಿಮ ಭಕ್ತಳೆ? ಲೋಕೋತ್ತರ ಸಖಿಯೆ? ಕಾಲಾತೀತ ಪ್ರೇಮಿಕೆಯೆ?
Last Updated 16 ಜೂನ್ 2018, 9:11 IST
fallback
ADVERTISEMENT

ಸರಳ ಸತ್ಯ ಮತ್ತು ಅಸಹಜ ಭಯ

ಇದೊಂದು ತೀರಾ ಸರಳವಾದ ಕಥೆ. ಇದನ್ನು ಕಥೆ ಎನ್ನುವುದೂ ತಪ್ಪು. ಇದು ಎಲ್ಲ ಹೆಣ್ಣುಗಳ ಕನಸು, ಕನವರಿಕೆ. ಹೆಣ್ಣುಮಕ್ಕಳು ಅದರಲ್ಲೂ ಸ್ತ್ರೀವಾದಿಗಳು ಎಲ್ಲವನ್ನೂ ಭೂತಕನ್ನಡಿಯಲ್ಲಿ ನೋಡುತ್ತಾ ಅತಿ ಮಾಡುತ್ತಾರೆ, ಕಾಲ ಬದಲಾಗಿಲ್ಲವೆ, ಗಂಡೂ ಬದಲಾಗಿಲ್ಲವೆ? ಎಲ್ಲ ಅವಕಾಶಗಳು ಅವರಿಗೂ ಸಿಗುತ್ತಿಲ್ಲವೆ? ಇನ್ನೇನು ಗುನುಗು ಎನ್ನ್ನುವವರು ಅಲ್ಲಿ ಇಲ್ಲಿ ಅಲ್ಲ, ನಮ್ಮ ಮನೆಯಲ್ಲೇ ಇರುತ್ತಾರಲ್ಲ. ಅವರೆಲ್ಲ ಸುಮ್ಮನೆ ಅವರ ಏಕಾಂತದಲ್ಲಿ ಓದಿ, ಅವರನ್ನು, ಅವರ ನಿಜದಲ್ಲಿ ನೋಡಿಕೊಳ್ಳಬಹುದಾದ ಕನ್ನಡಿಯ ಹಾಗಿದೆ ಈ ಕಥೆ.
Last Updated 16 ಜೂನ್ 2018, 9:11 IST
fallback

ಕೇಳುವುದಿಲ್ಲ ನಾನು ಅದೃಷ್ಟವನು, ಅಧಿಕಾರವನ್ನು...

ಆಕೆಯೊಬ್ಬ ಅಪೂರ್ವ ಸುಂದರಿ. ಅವಳ ಹೊರ ಮತ್ತು ಒಳ ಸೌಂದರ್ಯಗಳು ಅವಳ ವ್ಯಕ್ತಿತ್ವಕ್ಕೆ ಲೋಕೋತ್ತರವೆನಿಸುವ ಘನತೆಯನ್ನು, ಶೋಭೆಯನ್ನು ತಂದಿದ್ದವು. ಈ ಗುಣಗಳಿಗೆ ಮುಕುಟವೆನಿಸುವಂತೆ ಅವಳಲ್ಲಿ ಕವಿಪ್ರತಿಭೆಯೂ ಇತ್ತು. ಅದನ್ನು ಲೋಕ ಮೆಚ್ಚಲಿ ಎನ್ನುವ ಸಹಜ ಬಯಕೆಯೂ ಇತ್ತು. ಅವಳ ಅಪ್ಪನೋ ಶುದ್ಧ ಅಥವಾ ಕರ್ಮಟ ಎನ್ನುವುದೇ ವಾಸಿಯೇನೋ ಎನ್ನುವಷ್ಟು ಧಾರ್ಮಿಕ ವ್ಯಕ್ತಿ.
Last Updated 16 ಜೂನ್ 2018, 9:11 IST
fallback

ಕುಸುಮ–ಕಠೋರ ‘ಶಕುಂತಲೆ’

ಶಕುಂತಲೆ ಎನ್ನುವ ಹೆಸರೇ ನಮ್ಮಲ್ಲಿ ರಮ್ಯವಾದ ಚಿತ್ರವೊಂದನ್ನು ಕಟ್ಟುತ್ತದೆ. ಇನ್ನಿವಳಿಗಿಂತ ಸುಂದರಿ, ಸುಕೋಮಲೆ ಇರುವುದು ಸಾಧ್ಯವೇ ಇಲ್ಲವೇನೋ ಎನಿಸುವಂಥ ಬೆರಗಿನ ಪ್ರತಿಮೆಯೊಂದು ನಮ್ಮಲ್ಲಿ ಮೂಡುತ್ತದೆ.
Last Updated 16 ಜೂನ್ 2018, 9:11 IST
fallback
ADVERTISEMENT