ಕುವೆಂಪು, ಗಂಗೂಬಾಯಿ, ಎಸ್ಸೆನ್ರಿಗೆ ‘ನಾಡೋಜ’
ಬೆಂಗಳೂರು, ಜ. 11– ಕನ್ನಡಿಗರ ಹೆಮ್ಮೆಯ ಕೂಸಾದ ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ‘ನಾಡೋಜ’ ಗೌರವ ಡಾಕ್ಟರೇಟ್ ಪ್ರಶಸ್ತಿಯು ರಾಷ್ಟ್ರಕವಿ ಕುವೆಂಪು, ಮುತ್ಸದ್ದಿ, ಮಾಜಿ ಮುಖ್ಯಮಂತ್ರಿ ಸಿದ್ದನಹಳ್ಳಿ ನಿಜಲಿಂಗಪ್ಪ ಮತ್ತು ಖ್ಯಾತ ಹಿಂದೂಸ್ತಾನಿ ಗಾಯಕಿ ಗಂಗೂಬಾಯಿ ಹಾನಗಲ್ ಅವರಿಗೆ ಲಭಿಸಿದೆ.