<p><strong>ನಕಲಿ ಜಾತಿ ಪ್ರಮಾಣಪತ್ರಪ್ರಕರಣಗಳು ಸಿಒಡಿ ತನಿಖೆಗೆ<br />ಬೆಂಗಳೂರು, ಆ. 18– </strong>ಬೆಂಗಳೂರು ನಗರ ಜಿಲ್ಲೆಯಲ್ಲಿ ಸುಳ್ಳು ಜಾತಿ ಪ್ರಮಾಣಪತ್ರಗಳ ಮೂಲಕ ಪರಿಶಿಷ್ಟ ವರ್ಗದ ಸವಲತ್ತು ಪಡೆಯಲು ಯತ್ನಿಸಿರುವ 1,130 ಪ್ರಕರಣಗಳನ್ನು ಸಿಒಡಿ ತನಿಖೆಗೆ ಒಪ್ಪಿಸಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ರಮೇಶ ಸಿ. ಜಿಗಜಿಣಗಿ ಇಂದು ಇಲ್ಲಿ ತಿಳಿಸಿದರು.</p>.<p>ಖೋಟಾ ದಾಖಲೆಗಳನ್ನು ಸೃಷ್ಟಿಸಿ ಸಮಾಜ ಕಲ್ಯಾಣ ಇಲಾಖೆಯ ವಿವಿಧ ಯೋಜನೆಗಳಡಿ ಅನುಕೂಲ ಪಡೆಯಲು ಯತ್ನಿಸಿರುವ ಈ ಪ್ರಕರಣಗಳು ಅರ್ಜಿಗಳ ಪರಿಶೀಲನಾ ಸಮಯದಲ್ಲಿ ಪತ್ತೆಯಾಗಿವೆ. ಆದರೆ, ಇಂಥ ಪ್ರಕರಣಗಳು ರಾಜ್ಯದ ಇತರ ಜಿಲ್ಲೆಗಳಲ್ಲಿ ನಡೆದಿರುವ ಬಗ್ಗೆ ವರದಿ ಆಗಿಲ್ಲ ಎಂದು ಅವರು ಹೇಳಿದರು.</p>.<p><strong>ಕರಡು ಕೃಷಿ ನೀತಿಗೆಸಂಪುಟ ಅಂಗೀಕಾರ<br />ಬೆಂಗಳೂರು, ಆ. 18– </strong>ಕೃಷಿಗೆ ಕೈಗಾರಿಕೆಯ ಸ್ಥಾನಮಾನ ನೀಡಿಕೆ, ಕೃಷಿ ಕ್ಷೇತ್ರದಲ್ಲಿ ಸಾರ್ವಜನಿಕ ಮತ್ತು ಖಾಸಗಿ ಬಂಡವಾಳ ಹೂಡಿಕೆಗೆ ಉತ್ತೇಜನ ನೀಡಬೇಕೆಂಬ ಪ್ರಮುಖ ಶಿಫಾರಸು ಒಳಗೊಂಡ ಕರಡು ಕೃಷಿ ನೀತಿಯನ್ನು ಸಚಿವ ಸಂಪುಟ ಸಭೆ ಇಂದು ಅಂಗೀಕರಿಸಿತು.</p>.<p>ವಿಧಾನ ಮಂಡಲದ ಉಭಯ ಸದನಗಳಲ್ಲಿ ಈಗಾಗಲೇ ಕರಡು ನೀತಿಯನ್ನು ಮಂಡಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಕಲಿ ಜಾತಿ ಪ್ರಮಾಣಪತ್ರಪ್ರಕರಣಗಳು ಸಿಒಡಿ ತನಿಖೆಗೆ<br />ಬೆಂಗಳೂರು, ಆ. 18– </strong>ಬೆಂಗಳೂರು ನಗರ ಜಿಲ್ಲೆಯಲ್ಲಿ ಸುಳ್ಳು ಜಾತಿ ಪ್ರಮಾಣಪತ್ರಗಳ ಮೂಲಕ ಪರಿಶಿಷ್ಟ ವರ್ಗದ ಸವಲತ್ತು ಪಡೆಯಲು ಯತ್ನಿಸಿರುವ 1,130 ಪ್ರಕರಣಗಳನ್ನು ಸಿಒಡಿ ತನಿಖೆಗೆ ಒಪ್ಪಿಸಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ರಮೇಶ ಸಿ. ಜಿಗಜಿಣಗಿ ಇಂದು ಇಲ್ಲಿ ತಿಳಿಸಿದರು.</p>.<p>ಖೋಟಾ ದಾಖಲೆಗಳನ್ನು ಸೃಷ್ಟಿಸಿ ಸಮಾಜ ಕಲ್ಯಾಣ ಇಲಾಖೆಯ ವಿವಿಧ ಯೋಜನೆಗಳಡಿ ಅನುಕೂಲ ಪಡೆಯಲು ಯತ್ನಿಸಿರುವ ಈ ಪ್ರಕರಣಗಳು ಅರ್ಜಿಗಳ ಪರಿಶೀಲನಾ ಸಮಯದಲ್ಲಿ ಪತ್ತೆಯಾಗಿವೆ. ಆದರೆ, ಇಂಥ ಪ್ರಕರಣಗಳು ರಾಜ್ಯದ ಇತರ ಜಿಲ್ಲೆಗಳಲ್ಲಿ ನಡೆದಿರುವ ಬಗ್ಗೆ ವರದಿ ಆಗಿಲ್ಲ ಎಂದು ಅವರು ಹೇಳಿದರು.</p>.<p><strong>ಕರಡು ಕೃಷಿ ನೀತಿಗೆಸಂಪುಟ ಅಂಗೀಕಾರ<br />ಬೆಂಗಳೂರು, ಆ. 18– </strong>ಕೃಷಿಗೆ ಕೈಗಾರಿಕೆಯ ಸ್ಥಾನಮಾನ ನೀಡಿಕೆ, ಕೃಷಿ ಕ್ಷೇತ್ರದಲ್ಲಿ ಸಾರ್ವಜನಿಕ ಮತ್ತು ಖಾಸಗಿ ಬಂಡವಾಳ ಹೂಡಿಕೆಗೆ ಉತ್ತೇಜನ ನೀಡಬೇಕೆಂಬ ಪ್ರಮುಖ ಶಿಫಾರಸು ಒಳಗೊಂಡ ಕರಡು ಕೃಷಿ ನೀತಿಯನ್ನು ಸಚಿವ ಸಂಪುಟ ಸಭೆ ಇಂದು ಅಂಗೀಕರಿಸಿತು.</p>.<p>ವಿಧಾನ ಮಂಡಲದ ಉಭಯ ಸದನಗಳಲ್ಲಿ ಈಗಾಗಲೇ ಕರಡು ನೀತಿಯನ್ನು ಮಂಡಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>