ಕರ್ನಾಟಕ ಸಮತಾ ಸೈನಿಕ ದಳ ಇಂದು ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಫೂಲನ್, ದೇಶದ ರಾಜಕೀಯ ವ್ಯವಸ್ಥೆಯ ವಿರುದ್ಧ ಕಿಡಿಕಾರಿದರು. ‘ಗರೀಬರು, ದಲಿತರು ಈ ದೇಶದಲ್ಲಿ ಕ್ರಿಮಿಕೀಟಗಳಿಗೆ ಸಮ. ದಲಿತರು, ಮಹಿಳೆಯರ ಮೇಲೆ ಪ್ರತಿದಿನ ಅತ್ಯಾಚಾರ ನಡೆಯುತ್ತಿದೆ. ಪೊಲೀಸರು ಮತ್ತು ಶ್ರೀಮಂತರು ನಮ್ಮನ್ನು ಬದುಕಲು ಬಿಡುತ್ತಿಲ್ಲ’ ಆಕೆಯ ಮಾತು ನೇರ.