<p><strong>ಎನ್ರಾನ್ ಒಪ್ಪಂದ ರದ್ದು: ಮಹಾರಾಷ್ಟ್ರ ನಿರ್ಧಾರ</strong></p>.<p><strong>ಮುಂಬೈ, ಆ. 3 (ಪಿಟಿಐ, ಯುಎನ್ಐ)–</strong> ವಿವಾದಾತ್ಮಕ ಧಾಬೋಲ್ ವಿದ್ಯುತ್ ಸ್ಥಾವರ ನಿರ್ಮಾಣಕ್ಕಾಗಿ ಅಮೆರಿಕದ ಬಹುರಾಷ್ಟ್ರೀಯ ಸಂಸ್ಥೆ ಎನ್ರಾನ್ ಪವರ್ ಕಾರ್ಪೊರೇಷನ್ಗೆ ನೀಡಿದ್ದ ಅನುಮತಿಯನ್ನು ಮಹಾರಾಷ್ಟ್ರ ಸರ್ಕಾರ ಇಂದು ರದ್ದುಗೊಳಿಸಿತು.</p>.<p>‘ಹಿಂದಿನ ಕಾಂಗೈ ಸರ್ಕಾರ ಎನ್ರಾನ್ ಜತೆ ಮಾಡಿಕೊಂಡ ಒಪ್ಪಂದದಲ್ಲಿ ಆತ್ಮಗೌರವದ ಲವಲೇಶವೂ ಇರಲಿಲ್ಲ. ಬೌದ್ಧಿಕ ದಿವಾಳಿತನ ಪ್ರದರ್ಶಿಸುವ ಈ ಒಪ್ಪಂದ ಜನತೆಗೆ ಮಾಡಿದ ಮೋಸ. ಒಂದು ರೀತಿಯಲ್ಲಿ ಇದು ಒಪ್ಪಂದವೇ ಅಲ್ಲ’ ಎಂದು ಮುಖ್ಯಮಂತ್ರಿ ಮನೋಹರ ಜೋಷಿ ಅವರು ಇಂದು ರಾಜ್ಯ ವಿಧಾನಸಭೆಯಲ್ಲಿ ಪ್ರಕಟಿಸಿದರು.</p>.<p><strong>ಲಂಕಾ ತಮಿಳರಿಗೆ ಸ್ವಾಯತ್ತತೆ</strong></p>.<p><strong>ಕೊಲೊಂಬೊ, ಆ. 3 (ಯುಎನ್ಐ, ಪಿಟಿಐ)–</strong> ಶ್ರೀಲಂಕಾ ಅಧ್ಯಕ್ಷೆ ಚಂದ್ರಿಕಾ ಕುಮಾರತುಂಗಾ ಅವರು ಅಲ್ಪಸಂಖ್ಯಾತ ತಮಿಳರಿಗೆ ಅಭೂತಪೂರ್ವ ಸ್ವಾಯತ್ತಾಧಿಕಾರ ನೀಡುವ ಶಾಂತಿ ಯೋಜನೆಯನ್ನು ತೀವ್ರ ಪ್ರತಿಭಟನೆ ಮಧ್ಯೆ ಪ್ರಕಟಿಸಿದರು.</p>.<p>ಅವರು ರಾತ್ರಿ ಟಿ.ವಿ, ಆಕಾಶವಾಣಿಯಲ್ಲಿ ದೇಶವನ್ನು ಉದ್ದೇಶಿಸಿ ಮಾಡಿದ ಪ್ರಸಾರ ಭಾಷಣದಲ್ಲಿ, ತಮಿಳರ ಕೆಲ ಮೂಲಭೂತ ಬೇಡಿಕೆಗಳನ್ನು ಒಪ್ಪಿಕೊಂಡು, ಸಂಯುಕ್ತ ದೇಶವಾಗಿದ್ದ ಶ್ರೀಲಂಕಾವನ್ನು ಒಕ್ಕೂಟ ದೇಶವಾಗಿ ಬದಲಾಯಿಸುವ ವ್ಯಾಪಕ ಸುಧಾರಣೆ ಒಳಗೊಂಡ ಸಂವಿಧಾನ ಬದಲಾವಣೆ ಪ್ರಸ್ತಾವ ಮುಂದಿಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಎನ್ರಾನ್ ಒಪ್ಪಂದ ರದ್ದು: ಮಹಾರಾಷ್ಟ್ರ ನಿರ್ಧಾರ</strong></p>.<p><strong>ಮುಂಬೈ, ಆ. 3 (ಪಿಟಿಐ, ಯುಎನ್ಐ)–</strong> ವಿವಾದಾತ್ಮಕ ಧಾಬೋಲ್ ವಿದ್ಯುತ್ ಸ್ಥಾವರ ನಿರ್ಮಾಣಕ್ಕಾಗಿ ಅಮೆರಿಕದ ಬಹುರಾಷ್ಟ್ರೀಯ ಸಂಸ್ಥೆ ಎನ್ರಾನ್ ಪವರ್ ಕಾರ್ಪೊರೇಷನ್ಗೆ ನೀಡಿದ್ದ ಅನುಮತಿಯನ್ನು ಮಹಾರಾಷ್ಟ್ರ ಸರ್ಕಾರ ಇಂದು ರದ್ದುಗೊಳಿಸಿತು.</p>.<p>‘ಹಿಂದಿನ ಕಾಂಗೈ ಸರ್ಕಾರ ಎನ್ರಾನ್ ಜತೆ ಮಾಡಿಕೊಂಡ ಒಪ್ಪಂದದಲ್ಲಿ ಆತ್ಮಗೌರವದ ಲವಲೇಶವೂ ಇರಲಿಲ್ಲ. ಬೌದ್ಧಿಕ ದಿವಾಳಿತನ ಪ್ರದರ್ಶಿಸುವ ಈ ಒಪ್ಪಂದ ಜನತೆಗೆ ಮಾಡಿದ ಮೋಸ. ಒಂದು ರೀತಿಯಲ್ಲಿ ಇದು ಒಪ್ಪಂದವೇ ಅಲ್ಲ’ ಎಂದು ಮುಖ್ಯಮಂತ್ರಿ ಮನೋಹರ ಜೋಷಿ ಅವರು ಇಂದು ರಾಜ್ಯ ವಿಧಾನಸಭೆಯಲ್ಲಿ ಪ್ರಕಟಿಸಿದರು.</p>.<p><strong>ಲಂಕಾ ತಮಿಳರಿಗೆ ಸ್ವಾಯತ್ತತೆ</strong></p>.<p><strong>ಕೊಲೊಂಬೊ, ಆ. 3 (ಯುಎನ್ಐ, ಪಿಟಿಐ)–</strong> ಶ್ರೀಲಂಕಾ ಅಧ್ಯಕ್ಷೆ ಚಂದ್ರಿಕಾ ಕುಮಾರತುಂಗಾ ಅವರು ಅಲ್ಪಸಂಖ್ಯಾತ ತಮಿಳರಿಗೆ ಅಭೂತಪೂರ್ವ ಸ್ವಾಯತ್ತಾಧಿಕಾರ ನೀಡುವ ಶಾಂತಿ ಯೋಜನೆಯನ್ನು ತೀವ್ರ ಪ್ರತಿಭಟನೆ ಮಧ್ಯೆ ಪ್ರಕಟಿಸಿದರು.</p>.<p>ಅವರು ರಾತ್ರಿ ಟಿ.ವಿ, ಆಕಾಶವಾಣಿಯಲ್ಲಿ ದೇಶವನ್ನು ಉದ್ದೇಶಿಸಿ ಮಾಡಿದ ಪ್ರಸಾರ ಭಾಷಣದಲ್ಲಿ, ತಮಿಳರ ಕೆಲ ಮೂಲಭೂತ ಬೇಡಿಕೆಗಳನ್ನು ಒಪ್ಪಿಕೊಂಡು, ಸಂಯುಕ್ತ ದೇಶವಾಗಿದ್ದ ಶ್ರೀಲಂಕಾವನ್ನು ಒಕ್ಕೂಟ ದೇಶವಾಗಿ ಬದಲಾಯಿಸುವ ವ್ಯಾಪಕ ಸುಧಾರಣೆ ಒಳಗೊಂಡ ಸಂವಿಧಾನ ಬದಲಾವಣೆ ಪ್ರಸ್ತಾವ ಮುಂದಿಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>