<p><strong>ಸಂಭ್ರಮ ಇಲ್ಲದ ದುಬಾರಿ ಸಂಕ್ರಾಂತಿ</strong></p>.<p><strong>ಬೆಂಗಳೂರು, ಜ.13– </strong>ಸುಗ್ಗಿಯ ಸಂಭ್ರಮದ ಸಂಕೇತವಾದ ಸಂಕ್ರಾಂತಿ ನಕ್ಕು ನಲಿದು ಆಚರಿಸಬೇಕಾದ ಸಂಭ್ರಮವನ್ನಂತೂ ತರಲಿಲ್ಲ. ಗಗನಕ್ಕೇರಿರುವ ಬೆಲೆಗಳಿಂದಾಗಿ ಸಂಭ್ರಮವನ್ನೂ ಸಾಂಕೇತಿಕವಾಗಿಯೇ ಆಚರಿಸಬೇಕಾಗಿರುವಂತೆ ಮಾಡಿದೆ.</p>.<p>ಪ್ರತಿದಿನವೂ ವಸ್ತುಗಳ ಧಾರಣೆ ಏರುತ್ತಿರುವುದೇ ಇದಕ್ಕೆ ಕಾರಣ. ಇದರೊಂದಿಗೆ ಅಡುಗೆ ಅನಿಲದ ಸಿಲಿಂಡರ್ ಬೆಲೆಯಲ್ಲಿ 15 ರೂಪಾಯಿಗಳ ಹೆಚ್ಚಳ ಮಾಡಿ ಕೇಂದ್ರ ಸರ್ಕಾರ ಜನಸಾಮಾನ್ಯರಿಗೆ ಸಂಕ್ರಾಂತಿಯ ‘ಕೊಡುಗೆ’ ನೀಡಿದೆ.</p>.<p>ಈ ಮಧ್ಯೆ ಸಂಕ್ರಾಂತಿಯ ಸಂಕೇತವಾಗಿ ಪರಸ್ಪರ ವಿನಿಮಯ ಮಾಡಿಕೊಳ್ಳುವ ಎಳ್ಳು–ಬೆಲ್ಲದ ಬೆಲೆ ಬಹುತೇಕ ಹೆಚ್ಚಾಗಿದೆ.</p>.<p><strong>ಬಿಕ್ಕಟ್ಟು ಇತ್ಯರ್ಥಕ್ಕೆ ಗಂಭೀರ ಯತ್ನ: ಭಿನ್ನರಿಗೆ ರಾವ್ ಭರವಸೆ</strong></p>.<p><strong>ನವದೆಹಲಿ, ಜ.13– </strong>ತೀವ್ರ ಕುತೂಹಲ ಉಂಟುಮಾಡಿರುವ ಕರ್ನಾಟಕದ ಕಾಂಗೈ ಬಿಕ್ಕಟ್ಟು ಇತ್ಯರ್ಥಪಡಿಸುವ ವಿಷಯವನ್ನು ಗಂಭೀರವಾಗಿ ಪರಿಶೀಲಿಸಲಾಗುತ್ತಿದೆ. ಇದು ಈಗಿನ ವಿಧಾನಮಂಡಲದ ಅಧಿವೇಶನಕ್ಕೆ ಮುಂಚೆ ಅಥವಾ ನಂತರವೇ ಆಗಬಹುದು. ಈ ಬಗ್ಗೆ ಆತುರ ಮಾಡಬಾರದು ಎಂದು ಪ್ರಧಾನಿ ಹಾಗೂ ಕಾಂಗೈ ಅಧ್ಯಕ್ಷ<br />ಪಿ.ವಿ. ನರಸಿಂಹರಾವ್ ಭರವಸೆ ನೀಡಿರುವುದಾಗಿ ಅವರನ್ನು ಇಂದು ರಾತ್ರಿ ಭೇಟಿ ಮಾಡಿದ ಭಿನ್ನಮತೀಯ ಸಂಸತ್ ಸದಸ್ಯರ ನಿಯೋಗದ ವಕ್ತಾರರು ಹೇಳಿದರು.</p>.<p><strong>ಹುಬ್ಬಳ್ಳಿ ಈದಗಾ: ಧ್ವಜ ಹಾರಿಸಲು ಬಿಜೆಪಿ ಪಣ</strong></p>.<p><strong>ಹುಬ್ಬಳ್ಳಿ, ಜ.13– </strong>ಇದೇ ಜನವರಿ26ರಂದು ನಡೆಯಲಿರುವ ಗಣರಾಜ್ಯೋತ್ಸವದಲ್ಲಿ ನಗರದ ಮಧ್ಯ ಭಾಗದಲ್ಲಿರುವ ವಿವಾದಿತ ಈದಗಾ ಮೈದಾನದಲ್ಲಿ ರಾಷ್ಟ್ರ ಧ್ವಜ ಹಾರಿಸಲು ಬಿಜೆಪಿ ಮತ್ತು ರಾಷ್ಟ್ರ ಧ್ವಜ ಸಂರಕ್ಷಣಾ ಸಮಿತಿಯು ಜಂಟಿಯಾಗಿ ನಿರ್ಧರಿಸಿವೆ.</p>.<p>ಇಂದು ಇಲ್ಲಿ ಕರೆದಿದ್ದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಬಿ.ಎಸ್. ಯಡಿಯೂರಪ್ಪ ಮತ್ತು ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ಅವರು ಈ ವಿಷಯ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಂಭ್ರಮ ಇಲ್ಲದ ದುಬಾರಿ ಸಂಕ್ರಾಂತಿ</strong></p>.<p><strong>ಬೆಂಗಳೂರು, ಜ.13– </strong>ಸುಗ್ಗಿಯ ಸಂಭ್ರಮದ ಸಂಕೇತವಾದ ಸಂಕ್ರಾಂತಿ ನಕ್ಕು ನಲಿದು ಆಚರಿಸಬೇಕಾದ ಸಂಭ್ರಮವನ್ನಂತೂ ತರಲಿಲ್ಲ. ಗಗನಕ್ಕೇರಿರುವ ಬೆಲೆಗಳಿಂದಾಗಿ ಸಂಭ್ರಮವನ್ನೂ ಸಾಂಕೇತಿಕವಾಗಿಯೇ ಆಚರಿಸಬೇಕಾಗಿರುವಂತೆ ಮಾಡಿದೆ.</p>.<p>ಪ್ರತಿದಿನವೂ ವಸ್ತುಗಳ ಧಾರಣೆ ಏರುತ್ತಿರುವುದೇ ಇದಕ್ಕೆ ಕಾರಣ. ಇದರೊಂದಿಗೆ ಅಡುಗೆ ಅನಿಲದ ಸಿಲಿಂಡರ್ ಬೆಲೆಯಲ್ಲಿ 15 ರೂಪಾಯಿಗಳ ಹೆಚ್ಚಳ ಮಾಡಿ ಕೇಂದ್ರ ಸರ್ಕಾರ ಜನಸಾಮಾನ್ಯರಿಗೆ ಸಂಕ್ರಾಂತಿಯ ‘ಕೊಡುಗೆ’ ನೀಡಿದೆ.</p>.<p>ಈ ಮಧ್ಯೆ ಸಂಕ್ರಾಂತಿಯ ಸಂಕೇತವಾಗಿ ಪರಸ್ಪರ ವಿನಿಮಯ ಮಾಡಿಕೊಳ್ಳುವ ಎಳ್ಳು–ಬೆಲ್ಲದ ಬೆಲೆ ಬಹುತೇಕ ಹೆಚ್ಚಾಗಿದೆ.</p>.<p><strong>ಬಿಕ್ಕಟ್ಟು ಇತ್ಯರ್ಥಕ್ಕೆ ಗಂಭೀರ ಯತ್ನ: ಭಿನ್ನರಿಗೆ ರಾವ್ ಭರವಸೆ</strong></p>.<p><strong>ನವದೆಹಲಿ, ಜ.13– </strong>ತೀವ್ರ ಕುತೂಹಲ ಉಂಟುಮಾಡಿರುವ ಕರ್ನಾಟಕದ ಕಾಂಗೈ ಬಿಕ್ಕಟ್ಟು ಇತ್ಯರ್ಥಪಡಿಸುವ ವಿಷಯವನ್ನು ಗಂಭೀರವಾಗಿ ಪರಿಶೀಲಿಸಲಾಗುತ್ತಿದೆ. ಇದು ಈಗಿನ ವಿಧಾನಮಂಡಲದ ಅಧಿವೇಶನಕ್ಕೆ ಮುಂಚೆ ಅಥವಾ ನಂತರವೇ ಆಗಬಹುದು. ಈ ಬಗ್ಗೆ ಆತುರ ಮಾಡಬಾರದು ಎಂದು ಪ್ರಧಾನಿ ಹಾಗೂ ಕಾಂಗೈ ಅಧ್ಯಕ್ಷ<br />ಪಿ.ವಿ. ನರಸಿಂಹರಾವ್ ಭರವಸೆ ನೀಡಿರುವುದಾಗಿ ಅವರನ್ನು ಇಂದು ರಾತ್ರಿ ಭೇಟಿ ಮಾಡಿದ ಭಿನ್ನಮತೀಯ ಸಂಸತ್ ಸದಸ್ಯರ ನಿಯೋಗದ ವಕ್ತಾರರು ಹೇಳಿದರು.</p>.<p><strong>ಹುಬ್ಬಳ್ಳಿ ಈದಗಾ: ಧ್ವಜ ಹಾರಿಸಲು ಬಿಜೆಪಿ ಪಣ</strong></p>.<p><strong>ಹುಬ್ಬಳ್ಳಿ, ಜ.13– </strong>ಇದೇ ಜನವರಿ26ರಂದು ನಡೆಯಲಿರುವ ಗಣರಾಜ್ಯೋತ್ಸವದಲ್ಲಿ ನಗರದ ಮಧ್ಯ ಭಾಗದಲ್ಲಿರುವ ವಿವಾದಿತ ಈದಗಾ ಮೈದಾನದಲ್ಲಿ ರಾಷ್ಟ್ರ ಧ್ವಜ ಹಾರಿಸಲು ಬಿಜೆಪಿ ಮತ್ತು ರಾಷ್ಟ್ರ ಧ್ವಜ ಸಂರಕ್ಷಣಾ ಸಮಿತಿಯು ಜಂಟಿಯಾಗಿ ನಿರ್ಧರಿಸಿವೆ.</p>.<p>ಇಂದು ಇಲ್ಲಿ ಕರೆದಿದ್ದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಬಿ.ಎಸ್. ಯಡಿಯೂರಪ್ಪ ಮತ್ತು ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ಅವರು ಈ ವಿಷಯ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>