ನವದೆಹಲಿ, ಜ.13– ತೀವ್ರ ಕುತೂಹಲ ಉಂಟುಮಾಡಿರುವ ಕರ್ನಾಟಕದ ಕಾಂಗೈ ಬಿಕ್ಕಟ್ಟು ಇತ್ಯರ್ಥಪಡಿಸುವ ವಿಷಯವನ್ನು ಗಂಭೀರವಾಗಿ ಪರಿಶೀಲಿಸಲಾಗುತ್ತಿದೆ. ಇದು ಈಗಿನ ವಿಧಾನಮಂಡಲದ ಅಧಿವೇಶನಕ್ಕೆ ಮುಂಚೆ ಅಥವಾ ನಂತರವೇ ಆಗಬಹುದು. ಈ ಬಗ್ಗೆ ಆತುರ ಮಾಡಬಾರದು ಎಂದು ಪ್ರಧಾನಿ ಹಾಗೂ ಕಾಂಗೈ ಅಧ್ಯಕ್ಷ
ಪಿ.ವಿ. ನರಸಿಂಹರಾವ್ ಭರವಸೆ ನೀಡಿರುವುದಾಗಿ ಅವರನ್ನು ಇಂದು ರಾತ್ರಿ ಭೇಟಿ ಮಾಡಿದ ಭಿನ್ನಮತೀಯ ಸಂಸತ್ ಸದಸ್ಯರ ನಿಯೋಗದ ವಕ್ತಾರರು ಹೇಳಿದರು.