ಶನಿವಾರ, 25 ಅಕ್ಟೋಬರ್ 2025
×
ADVERTISEMENT
ADVERTISEMENT

ಸುದ್ದಿ ವಿಶ್ಲೇಷಣೆ | ಯತೀಂದ್ರ ದಾಳ: ಯಾರಿಗೆಲ್ಲ ‘ಗಾಳ’

Published : 24 ಅಕ್ಟೋಬರ್ 2025, 23:30 IST
Last Updated : 24 ಅಕ್ಟೋಬರ್ 2025, 23:30 IST
ಫಾಲೋ ಮಾಡಿ
Comments
ಡಿ.ಕೆ.ಶಿವಕುಮಾರ್ ಮೌನ ‘ಕ್ರಾಂತಿ’
ಸಿದ್ದರಾಮಯ್ಯನವರ ಬಣ ಎಷ್ಟೇ ಪ್ರಚೋದಿಸಿದರೂ ಶಿವಕುಮಾರ್ ಮಾತ್ರ ಪ್ರತಿಕ್ರಿಯೆಯನ್ನೇ ನೀಡದೇ ಮೌನಕ್ಕೆ ಶರಣಾಗಿದ್ದಾರೆ. ‘ನಾಯಕತ್ವ ಬದಲಾವಣೆ ಇಲ್ಲ’ ಎಂದು ಮೇಲು ಮೇಲಕ್ಕೆ ಅವರು ಹೇಳುತ್ತಿದ್ದಾರಾದರೂ ಹೈಕಮಾಂಡ್ ವರ ಕೊಡಬಹುದೆಂಬ ನಿರೀಕ್ಷೆ ಅವರದ್ದು. ಸಿದ್ದರಾಮಯ್ಯನವರ ಬಣದ ಹೇಳಿಕೆಗಳಿಗೆ ನಿಷ್ಠುರವಾಗಿ ತಿರುಗೇಟು ಕೊಟ್ಟರೆ ಅದನ್ನೇ ಅಸ್ತ್ರವಾಗಿ ಬಳಸಿಕೊಂಡು ತಮ್ಮನ್ನು ‘ಅಹಿಂದ’ ವಿರೋಧಿ ಎಂದು ಬಿಂಬಿಸಬಹುದು ಎಂಬ ಭಯವೂ ಅವರಲ್ಲಿದ್ದಂತಿದೆ. ಹೀಗಾಗಿ ಮೌನ ‘‍ಕ್ರಾಂತಿ’ಯ ಎಣಿಕೆಯಲ್ಲಿರುವ ಶಿವಕುಮಾರ್, ಎಲ್ಲದಕ್ಕೂ ನಿರ್ಲಿಪ್ತರಾಗಿದ್ದಾರೆ. ‘ಸಮಯ ಬಂದಾಗ ಪ್ರತಿಕ್ರಿಯಿಸುವೆ, ಎಲ್ಲಿ ಮಾತನಾಡಬೇಕೋ ಅಲ್ಲಿ ಮಾತನಾಡುವೆ, ನನಗೂ ಸಮಯ ಪ್ರಜ್ಞೆ ಇದೆ’ ಎಂದು ಪ್ರತಿಪಾದಿಸುತ್ತಾ ಬಂದಿದ್ದಾರೆ. ನವೆಂಬರ್‌ನಲ್ಲಿ ‘ವರ’ ಸಿಗಲೆಂದು ‘ದೇಗುಲಗಳ ಪ್ರದಕ್ಷಿಣೆ’ ಮಾಡುವುದನ್ನು ಮಾತ್ರ ಅವರು ಬಿಟ್ಟಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT