<p>ಅಂಬರೀಷ್ ಆತ್ಮ ಭೂಲೋಕ ಬಿಟ್ಟು ಪರಲೋಕ ತಲುಪುತ್ತಿದ್ದಂತೆ ದೇವದೂತರು ಬಂದು ಪಟಕ್ಕನೆ ಹಿಡಿದುಕೊಂಡರು. ‘ಏಯ್ ಎತ್ರಯ್ಯ ಕೈಯಿ, ಯಾರಯ್ಯ ನೀವೆಲ್ಲ? ನನ್ಯಾಕೆ ಹಿಡ್ಕೊಂಡಿದೀರಿ?’ ಎಂದು ಅಂಬಿ ಸಿಟ್ಟಿಗೆದ್ದರು.</p>.<p>‘ನಾವು ದೇವದೂತರು, ನಿಮ್ಮನ್ನು ಸ್ವರ್ಗಕ್ಕೆ ಕರೆ ತರಲು ಅಪ್ಪಣೆಯಾಗಿದೆ’.</p>.<p>‘ಯ್ಯೋ... ಯಾವ ಸೀಮೆ ಸ್ವರ್ಗನಯ್ಯ ನಿಮ್ದು? ನಾನು ಈ ಜಗತ್ತಿನಾಗಿರೋ ಎಲ್ಲ ಸ್ವರ್ಗನೂ ನೋಡಾಯ್ತು. ಈಗ ಸ್ವರ್ಗ ಗಿರ್ಗ ನೀವೇ ಇಟ್ಕಳಿ, ನಮ್ ಪಾಡಿಗೆ ನಮ್ಮನ್ನ ಬುಟ್ಬುಡಿ ಅಷ್ಟೆ’.</p>.<p>‘ಅದು ಹಂಗಲ್ಲ ಇವರೇ... ರಾಜಣ್ಣೋರು, ವಿಷ್ಣುವರ್ಧನ್ನು ನಿಮ್ಮನ್ನ ಕರ್ಕಂಡ್ ಬರೋಕೆ ಹೇಳಿದ್ರು’.</p>.<p>‘ಥತ್ ಬಡ್ಡೆತ್ತವ, ಅದ್ನ ಮೊದ್ಲೇ ಹೇಳೋಕೇನಾಗಿತ್ತಯ್ಯ ದಾಡಿ? ನಡೀರಿ ಮತ್ತೆ ಅಲ್ಲಿಗೆ ಹೋಗೋಣ’.</p>.<p>ಅಂಬರೀಷ್ರನ್ನ ಕಂಡ ತಕ್ಷಣ ರಾಜಣ್ಣ, ವಿಷ್ಣು ಬಾಚಿ ತಬ್ಬಿಕೊಂಡರು. ರಾಜಣ್ಣೋರು ಅಂಬರೀಷ್ ಮೈದಡವುತ್ತ ‘ಯಾಕಪ್ಪ ಅಂಬರೀಷು ಇಷ್ಟು ಬೇಗ ಬಂದುಬಿಟ್ಟೆ? ನೀನೂ ಇಲ್ಲ ಅಂದ್ರೆ ಅಲ್ಲಿ ಚಿತ್ರರಂಗದ ಸಮಸ್ಯೆಗಳನ್ನ ಯಾರು ಬಗೆಹರಿಸ್ತಾರೆ?’</p>.<p>ಅಂಬರೀಷ್ಗೆ ನಗು ಬಂತು. ‘ಅಣ್ಣಾ, ಈಗ ಚಿತ್ರರಂಗದ ಸಮಸ್ಯೆಗಳು ಅಂದ್ರೆ ಏನ್ ಗೊತ್ತಾ? ಥೇಟರ್ ಸಿಗ್ಲಿಲ್ಲ, ಪ್ರಚಾರಕ್ಕೆ ಬರ್ಲಿಲ್ಲ, ಚೆಕ್ ಬೌನ್ಸು, ಮೀಟೂ... ಬರೀ ಇವೇ. ಯಾರ ಮಾತು ಯಾರೂ ಕೇಳಲ್ಲ ಅಲ್ಲಿ...’</p>.<p>ರಾಜಣ್ಣ ತಲೆ ಕೆರೆದುಕೊಂಡು ಕೇಳಿದರು ‘ಅಂಬರೀಷು, ಈ ಮೀಟೂ ಅಂದ್ರೆ ಏನು?’</p>.<p>‘ಅಣ್ಣ, ಅದನ್ನ ಒಂದ್ ಲೈನಲ್ಲಿ ಹೇಳೋಕಾಗಲ್ಲ. ಫ್ರೆಶ್ ಆಗಿ ಬಂದು ಹೇಳ್ತೀನಿ ಇರಿ... ಏಯ್ ವಿಷ್ಣು, ನಾಟಿಕೋಳಿ ಸಾರು ರೆಡಿ ಮಾಡ್ಸಿದೀಯೇನೋ...’ ಎನ್ನುತ್ತ ಒಳ ನಡೆದರು ಅಂಬರೀಷ್...</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಅಂಬರೀಷ್ ಆತ್ಮ ಭೂಲೋಕ ಬಿಟ್ಟು ಪರಲೋಕ ತಲುಪುತ್ತಿದ್ದಂತೆ ದೇವದೂತರು ಬಂದು ಪಟಕ್ಕನೆ ಹಿಡಿದುಕೊಂಡರು. ‘ಏಯ್ ಎತ್ರಯ್ಯ ಕೈಯಿ, ಯಾರಯ್ಯ ನೀವೆಲ್ಲ? ನನ್ಯಾಕೆ ಹಿಡ್ಕೊಂಡಿದೀರಿ?’ ಎಂದು ಅಂಬಿ ಸಿಟ್ಟಿಗೆದ್ದರು.</p>.<p>‘ನಾವು ದೇವದೂತರು, ನಿಮ್ಮನ್ನು ಸ್ವರ್ಗಕ್ಕೆ ಕರೆ ತರಲು ಅಪ್ಪಣೆಯಾಗಿದೆ’.</p>.<p>‘ಯ್ಯೋ... ಯಾವ ಸೀಮೆ ಸ್ವರ್ಗನಯ್ಯ ನಿಮ್ದು? ನಾನು ಈ ಜಗತ್ತಿನಾಗಿರೋ ಎಲ್ಲ ಸ್ವರ್ಗನೂ ನೋಡಾಯ್ತು. ಈಗ ಸ್ವರ್ಗ ಗಿರ್ಗ ನೀವೇ ಇಟ್ಕಳಿ, ನಮ್ ಪಾಡಿಗೆ ನಮ್ಮನ್ನ ಬುಟ್ಬುಡಿ ಅಷ್ಟೆ’.</p>.<p>‘ಅದು ಹಂಗಲ್ಲ ಇವರೇ... ರಾಜಣ್ಣೋರು, ವಿಷ್ಣುವರ್ಧನ್ನು ನಿಮ್ಮನ್ನ ಕರ್ಕಂಡ್ ಬರೋಕೆ ಹೇಳಿದ್ರು’.</p>.<p>‘ಥತ್ ಬಡ್ಡೆತ್ತವ, ಅದ್ನ ಮೊದ್ಲೇ ಹೇಳೋಕೇನಾಗಿತ್ತಯ್ಯ ದಾಡಿ? ನಡೀರಿ ಮತ್ತೆ ಅಲ್ಲಿಗೆ ಹೋಗೋಣ’.</p>.<p>ಅಂಬರೀಷ್ರನ್ನ ಕಂಡ ತಕ್ಷಣ ರಾಜಣ್ಣ, ವಿಷ್ಣು ಬಾಚಿ ತಬ್ಬಿಕೊಂಡರು. ರಾಜಣ್ಣೋರು ಅಂಬರೀಷ್ ಮೈದಡವುತ್ತ ‘ಯಾಕಪ್ಪ ಅಂಬರೀಷು ಇಷ್ಟು ಬೇಗ ಬಂದುಬಿಟ್ಟೆ? ನೀನೂ ಇಲ್ಲ ಅಂದ್ರೆ ಅಲ್ಲಿ ಚಿತ್ರರಂಗದ ಸಮಸ್ಯೆಗಳನ್ನ ಯಾರು ಬಗೆಹರಿಸ್ತಾರೆ?’</p>.<p>ಅಂಬರೀಷ್ಗೆ ನಗು ಬಂತು. ‘ಅಣ್ಣಾ, ಈಗ ಚಿತ್ರರಂಗದ ಸಮಸ್ಯೆಗಳು ಅಂದ್ರೆ ಏನ್ ಗೊತ್ತಾ? ಥೇಟರ್ ಸಿಗ್ಲಿಲ್ಲ, ಪ್ರಚಾರಕ್ಕೆ ಬರ್ಲಿಲ್ಲ, ಚೆಕ್ ಬೌನ್ಸು, ಮೀಟೂ... ಬರೀ ಇವೇ. ಯಾರ ಮಾತು ಯಾರೂ ಕೇಳಲ್ಲ ಅಲ್ಲಿ...’</p>.<p>ರಾಜಣ್ಣ ತಲೆ ಕೆರೆದುಕೊಂಡು ಕೇಳಿದರು ‘ಅಂಬರೀಷು, ಈ ಮೀಟೂ ಅಂದ್ರೆ ಏನು?’</p>.<p>‘ಅಣ್ಣ, ಅದನ್ನ ಒಂದ್ ಲೈನಲ್ಲಿ ಹೇಳೋಕಾಗಲ್ಲ. ಫ್ರೆಶ್ ಆಗಿ ಬಂದು ಹೇಳ್ತೀನಿ ಇರಿ... ಏಯ್ ವಿಷ್ಣು, ನಾಟಿಕೋಳಿ ಸಾರು ರೆಡಿ ಮಾಡ್ಸಿದೀಯೇನೋ...’ ಎನ್ನುತ್ತ ಒಳ ನಡೆದರು ಅಂಬರೀಷ್...</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>