ಬೆಕ್ಕಣ್ಣ ನಡುವೆಯೇ ಬಾಯಿ ಹಾಕಿ ವಾದಿಸತೊಡಗಿತು. ‘ಡಾಕ್ಟ್ರು, ಸರ್ಕಾರ ಎಷ್ಟ್ ಬಡಕೊಂಡ್ರೂ ಮಂದಿ ಸುಮ್ಸುಮ್ನೆ ಅಡ್ಡಾಡತಿದ್ರು, ಹಿಂಗಾದ್ರ ಕೊರೊನಾ ಕಂಟ್ರೋಲು ಮಾಡೂದು ಹೆಂಗ? ಪೆಟ್ರೋಲು, ಡೀಸೆಲು ತುಟ್ಟಿ ಮಾಡಿದ್ರ, ಕೈಗೆ, ಕಾಲಿಗೆ ಬಿಸಿ ತಾಗತೈತಿ. ಅಡುಗೆ ಎಣ್ಣೆ ಕಡಿಮೆ ತಿಂದ್ರನೇ ವಳ್ಳೇದು. ಕೊಬ್ಬು ಹೃದಯಕ್ಕೆ ವಳ್ಳೇದಲ್ಲ ಅಂತ ಡಾಕ್ಟ್ರು ಹೇಳತಾರ’.