<p>‘ಅಲ್ಲಾ ಸಾ, ಮೋದಿ ಕೊನೆಗೂ ರಾಜಾವುಲಿ ಕೈಲಿ ರಾಜೀನಾಮೆ ಕೊಡಿಸೇಬುಡ್ತಲ್ಲ. ಕರ್ನಾಟಕದೇಲಿ ಮುಂದ್ಲಾರು ಕಟ್ಟಕೆ ಈಗ ಹೊಸ ಕುಳ ಬಂದೈತೆ’ ಅಂದೆ.</p>.<p>‘ಹೈಕಮಾಂಡ್ ಹೇಳಿದ್ರೆ ನಾನು ಮುಖ್ಯಮಂತ್ರಿ ಹೊಣೆ ಹೊರ್ತಿದ್ದೆ’ ತುರೇಮಣೆ ಘೋಷಣೆ ಮಾಡಿದರು. ‘ಅದ್ಯಾಕೆ ಹಂಗೆ ನುಲೀತಿದ್ದರಿ. ನೀವ್ಯಾವ ದೊಣೆನಾಯಕ ಅಂತ ನಿಮ್ಮುನ್ನ ಮುಖ್ಯಮಂತ್ರಿ ಮಾಡ್ಯಾರು ಸಾ’ ತುರೇಮಣೆ ಕಾಲೆಳೆದೆ.</p>.<p>‘ನೋಡಿರ್ಲಾ, ಸಿಎಂ ಪಟ್ಟೀಲಿ ಕಾಣಿಸಿಕೊಂಡಿದ್ದ ಕೆಲವರಿಗಿಂತ ನಾನೇನೂ ಕಮ್ಮಿ ಇಲ್ಲ. ನನಗಿನ್ನೂ 20 ವರ್ಸ ದುಡಿಯೋ ತಾಕತ್ತದೆ’ ಅಂದ ತುರೇಮಣೆ ಮಾತಿಗೆ ಯಾರೂ ಕ್ಯಾರೇ ಅನ್ನಲಿಲ್ಲ.</p>.<p>‘ರಾಜಾವುಲಿ ಮಾತಾಡಿಸಿಕ್ಯ ಬರಮು ಬನ್ನಿ ಸಾ’ ಅಂತಂದು ಅವುರ ಮನೆ ತಕ್ಕೋದ್ರೆ ಬಾಗಿಲಿಗೆ ದೊಡ್ಡ ಬೀಗ ಜಡಿದಿದ್ದರು. ಒಳಗೆ ಯಾರೋ ನರಳೋ ಸದ್ದು ಕೇಳ್ತಿತ್ತು. ರಾಜಾವುಲಿಗೆ ಕಾವೇರಿರಬೇಕು ಅಂತ ಗುಮಾನೀಲಿ ಮನೆ ಒಳಕ್ಕೆ ಇಣುಕಿ ನೋಡಿದರೆ ಸಿಎಂ ಕುರ್ಚಿ ಕಡದು- ಬಳದಿಗೆ ಉಂಟಾಡಿಕ್ಯಂಡು ಮುರುದೋಗಿ ನರಳ್ತಿತ್ತು.</p>.<p>‘ನೋಡಿರ್ಲಾ, ನಾನೂವೆ ಎಷ್ಟು ಜನದ ಜೊತೆಗೆ ಕೂಡಿಕೆ ಮಾಡಿಕ್ಯಳನ. ಒಬ್ಬರ ಜೊತೆಗೂ ನೆಟ್ಟಗೆ ಐದೊರ್ಸ ಒಗೆತನ ಮಾಡಕ್ಕಾಗಿಲ್ಲ. ಕೋವಿಡ್ಡು ಬಿಕ್ಕಟ್ಟಲ್ಲಿ ಏದುಸಿರು ಬುಡ್ತಿದ್ದೀನಿ’ ಅಂತು ಕುರ್ಚಿ ನಮ್ಮ ನೋಡಿದೇಟಿಗೆ.</p>.<p>‘ಇಲ್ಲಿ ಯಾವುದೂ ಊರ್ಜಿತವಲ್ಲ ಕನಪ್ಪಾ, ಒತ್ಲಿಸಿ ಬೆನ್ನಿಗೆ ಚೂರಿ ಹಾಕದೇ ರಾಜಕೀಯ. ಜೀವನವೇ ಅಗ್ನಿಪರೀಕ್ಷೆ. ರಿಜಲ್ಟು ಈಗ ಬಂದದೆ’ ಅಂತ ಒಗ್ರಣೆ ಹಾಕಿತು ಯಂಟಪ್ಪಣ್ಣ.</p>.<p>‘ಕುರ್ಚಿಯಣ್ಣ, ಈಗ ರಾಜಾವುಲಿ ಮಾಜಿಯಾದ ಮ್ಯಾಲೆ ಯಂಗೆ ಟೈಂ ಕಳಿತದೆ?’ ಚಂದ್ರು ಕೇಳಿದ.</p>.<p>‘ಅಯ್ ಬುಡಿ, ಡೆಲ್ಲಿಯೋರು ಅವರವರೆ ರಾಜಿಕಬೂಲು ಮಾಡಿಕ್ಯಂಡ್ರೇನಂತೆ, ನಾನು<br />ಸಕ್ರಿಯವಾಗಿರ್ತೀನಿ ಅಂತ ರಾಜಾವುಲಿ ಯೇಳಿಲ್ವಾ. ರಾಜಾವುಲಿ ಬುಟ್ಟು ವಸಾ ಸಿಎಂ ಬದುಕು ಮಾಡಕಾದದೇ’ ಕುರ್ಚಿ ಕಗ್ಗ ಕೇಳಿ ನಾವು ದಂಗಾಗಿದ್ದೋ!</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಅಲ್ಲಾ ಸಾ, ಮೋದಿ ಕೊನೆಗೂ ರಾಜಾವುಲಿ ಕೈಲಿ ರಾಜೀನಾಮೆ ಕೊಡಿಸೇಬುಡ್ತಲ್ಲ. ಕರ್ನಾಟಕದೇಲಿ ಮುಂದ್ಲಾರು ಕಟ್ಟಕೆ ಈಗ ಹೊಸ ಕುಳ ಬಂದೈತೆ’ ಅಂದೆ.</p>.<p>‘ಹೈಕಮಾಂಡ್ ಹೇಳಿದ್ರೆ ನಾನು ಮುಖ್ಯಮಂತ್ರಿ ಹೊಣೆ ಹೊರ್ತಿದ್ದೆ’ ತುರೇಮಣೆ ಘೋಷಣೆ ಮಾಡಿದರು. ‘ಅದ್ಯಾಕೆ ಹಂಗೆ ನುಲೀತಿದ್ದರಿ. ನೀವ್ಯಾವ ದೊಣೆನಾಯಕ ಅಂತ ನಿಮ್ಮುನ್ನ ಮುಖ್ಯಮಂತ್ರಿ ಮಾಡ್ಯಾರು ಸಾ’ ತುರೇಮಣೆ ಕಾಲೆಳೆದೆ.</p>.<p>‘ನೋಡಿರ್ಲಾ, ಸಿಎಂ ಪಟ್ಟೀಲಿ ಕಾಣಿಸಿಕೊಂಡಿದ್ದ ಕೆಲವರಿಗಿಂತ ನಾನೇನೂ ಕಮ್ಮಿ ಇಲ್ಲ. ನನಗಿನ್ನೂ 20 ವರ್ಸ ದುಡಿಯೋ ತಾಕತ್ತದೆ’ ಅಂದ ತುರೇಮಣೆ ಮಾತಿಗೆ ಯಾರೂ ಕ್ಯಾರೇ ಅನ್ನಲಿಲ್ಲ.</p>.<p>‘ರಾಜಾವುಲಿ ಮಾತಾಡಿಸಿಕ್ಯ ಬರಮು ಬನ್ನಿ ಸಾ’ ಅಂತಂದು ಅವುರ ಮನೆ ತಕ್ಕೋದ್ರೆ ಬಾಗಿಲಿಗೆ ದೊಡ್ಡ ಬೀಗ ಜಡಿದಿದ್ದರು. ಒಳಗೆ ಯಾರೋ ನರಳೋ ಸದ್ದು ಕೇಳ್ತಿತ್ತು. ರಾಜಾವುಲಿಗೆ ಕಾವೇರಿರಬೇಕು ಅಂತ ಗುಮಾನೀಲಿ ಮನೆ ಒಳಕ್ಕೆ ಇಣುಕಿ ನೋಡಿದರೆ ಸಿಎಂ ಕುರ್ಚಿ ಕಡದು- ಬಳದಿಗೆ ಉಂಟಾಡಿಕ್ಯಂಡು ಮುರುದೋಗಿ ನರಳ್ತಿತ್ತು.</p>.<p>‘ನೋಡಿರ್ಲಾ, ನಾನೂವೆ ಎಷ್ಟು ಜನದ ಜೊತೆಗೆ ಕೂಡಿಕೆ ಮಾಡಿಕ್ಯಳನ. ಒಬ್ಬರ ಜೊತೆಗೂ ನೆಟ್ಟಗೆ ಐದೊರ್ಸ ಒಗೆತನ ಮಾಡಕ್ಕಾಗಿಲ್ಲ. ಕೋವಿಡ್ಡು ಬಿಕ್ಕಟ್ಟಲ್ಲಿ ಏದುಸಿರು ಬುಡ್ತಿದ್ದೀನಿ’ ಅಂತು ಕುರ್ಚಿ ನಮ್ಮ ನೋಡಿದೇಟಿಗೆ.</p>.<p>‘ಇಲ್ಲಿ ಯಾವುದೂ ಊರ್ಜಿತವಲ್ಲ ಕನಪ್ಪಾ, ಒತ್ಲಿಸಿ ಬೆನ್ನಿಗೆ ಚೂರಿ ಹಾಕದೇ ರಾಜಕೀಯ. ಜೀವನವೇ ಅಗ್ನಿಪರೀಕ್ಷೆ. ರಿಜಲ್ಟು ಈಗ ಬಂದದೆ’ ಅಂತ ಒಗ್ರಣೆ ಹಾಕಿತು ಯಂಟಪ್ಪಣ್ಣ.</p>.<p>‘ಕುರ್ಚಿಯಣ್ಣ, ಈಗ ರಾಜಾವುಲಿ ಮಾಜಿಯಾದ ಮ್ಯಾಲೆ ಯಂಗೆ ಟೈಂ ಕಳಿತದೆ?’ ಚಂದ್ರು ಕೇಳಿದ.</p>.<p>‘ಅಯ್ ಬುಡಿ, ಡೆಲ್ಲಿಯೋರು ಅವರವರೆ ರಾಜಿಕಬೂಲು ಮಾಡಿಕ್ಯಂಡ್ರೇನಂತೆ, ನಾನು<br />ಸಕ್ರಿಯವಾಗಿರ್ತೀನಿ ಅಂತ ರಾಜಾವುಲಿ ಯೇಳಿಲ್ವಾ. ರಾಜಾವುಲಿ ಬುಟ್ಟು ವಸಾ ಸಿಎಂ ಬದುಕು ಮಾಡಕಾದದೇ’ ಕುರ್ಚಿ ಕಗ್ಗ ಕೇಳಿ ನಾವು ದಂಗಾಗಿದ್ದೋ!</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>