‘ಕುರಿತೇಟಾಗೇಳಿದ್ರಿ ಯಂಟಪ್ಪಣ್ಣ. ವ್ಯವಸ್ಥೆ ನಮ್ಮನ್ನ ದಸರಾ ಆನೆ ಮಾಡಿ ಹಿಂದ್ಕೆ ಮುಂದ್ಕೆ ಗುನ್ನಂಪಟ್ಟೆ ಕಟ್ಟಿ ‘ನೋಡು ಹ್ಯಂಗದೆ!’ ಅಂತ ಮಾಲೀಸು ಮಾಡಿ ಅಂಬಾರಿ ಹೊರಿಸಿ ದಿಬ್ಬಣ ಹೊಂಡುಸ್ತದೆ! ಎಲ್ಲೂ ನಿಲ್ಲಂಗುಲ್ಲ, ಕೂರಂಗುಲ್ಲ ಸರ್ಕಾರ ತಿವೀತ್ಲೇ ಇರತದೆ. ತೆರಿಗೆ ಕೊಡೋದು ಜನರ ಕರ್ತವ್ಯ, ಸಾಧನೆ ಮಾತ್ರ ಸರ್ಕಾರದ್ದು ಅಂತ ತೋರಿಸೋ ಸ್ತಬ್ಧಚಿತ್ರಗಳು ಇರತವೆ. ರಾಜಕಾರಣಿಗಳು ಮಾಡ ಕ್ಯಾಮೆ ಬುಟ್ಟು ಊರೊಟ್ಟಿನ ದುಡ್ಡು ಎಪ್ಪೆಸ್ ಮಾಡೋ ಮಾಮಾಚಾರಿಗಳ ಜೊತೆ ಸೇರಿಕ್ಯಂದು ತರಂಥರ ವಾದ್ಯ ಊದಿಕ್ಯಂದು ನಮ್ಮ ಸುತ್ತ ವಾದ್ಯಗೋಷ್ಟಿ ಮಾಡ್ತಾ ಇರತರೆ. ಇಕ್ಕಡೆ ಸೋ-ಶೋ ಪಾಲುದಾರಿಕೆ ಕ್ಯಾಕೆ, ಅಕ್ಕಡೆ ಡಿಕೆಶಿ- ಕುಮಾರಣ್ಣ ಕುಶಾಲು, ಹುಲಿಯಾ-ಅರಗ ಸಲ್ಲಾಪ ನಡೀತಿರ್ತದೆ! ನಾವು ಇದೇ ಸ್ವರ್ಗ ಅಂದ್ಕಂಡು ಕಣ್ಮುಚ್ಕಂದಿರತೀವಿ! ಈತರಕೀತರ ದಸರಾ ಈಗ ಪ್ರಜಾಸದರ ಆಗೋಗ್ಯದೆ!’ ದಸರಾ ವಿವರಣೆ ಕೊಟ್ಟರು ತುರೇಮಣೆ.