<p>‘ಸಾ, ಹಳೇ ಸರ್ಕಾರಗಳು ಯಾವ್ಯಾವೋ ಕೇಸ್ ಹಾಕಿದ್ವಲ್ಲಾ ಅವುನ್ನೆಲ್ಲಾ ವಾಪಾಸ್ ತಕ್ಕಂದಾರಂತೆ. ಅದರಲ್ಲಿ ಎಂಪಿ, ಶಾಸಕರ ಮೇಲೆ ಹಲವಾರು ಕ್ರಿಮಿನಲ್ ಕೇಸು ಬಿದ್ದಿದ್ವಲ್ಲ, ಅವೂ ಸೇರ್ಕಂದವೇನೋ?’ ಸುದ್ದಿ ಸ್ಫೋಟಿಸಿದೆ.</p>.<p>‘ರಾಜಕೀಯದವ್ರ ಕಳ್ಳು–ಬಳ್ಳಿ, ಬಾಮೈಕ್ಳುಗಳು ಜನಶೇವೆ ಮಾಡದು ನೋಡನಾರದೆ ಆಗದೋರು ಹೊಟ್ಟುರಕಂದು ಹುನ್ನಾರ ಮಾಡಿರತರೆ ಕನ್ರೋ. ಬಂಡಾಟಕೆಲ್ಲಾ ದಕ್ಕಬಾರದು ಅಂತ ಇವರು ಕೇಸೆಲ್ಲಾ ವಾಪಾಸ್ ತಕ್ಕಂದಿರತರೆ’ ತುರೇಮಣೆ ವಿವರಿಸಿದರು.</p>.<p>‘ಈ ಕೇಸುಗಳಲ್ಲಿ ಈವತ್ತಿನವರೆಗೂ ಒಬ್ಬ ರಾಜಕೀಯದೋನೂ ಜೈಲಿಗೋಗಿದ್ದು ಕಾಣೆ. ಕೆಳಗಿನ ಕೋರ್ಟು ಶಿಕ್ಷೆ ಕೊಡಿ ಅಂದ್ರೆ ಮೇಲಿನ ಕೋರ್ಟಿಗೋಗಿ ಬೇಲು ತಕ್ಕತರೆ. ಕೇಸು ಮುಗಿಯೋವೊತ್ಗೆ ರಾಜಕಾರಣಿ ವಯಕ್ ಅಂದಿರತನೆ’ ಸಿಟ್ಟುಗಂದೆ.</p>.<p>‘ಮೊನ್ನೆ ಲೋಕಾಯುಕ್ತಗಳು ಸುಮಾರು ಮಿಕಗಳನ್ನ ಹಿಡಿದಾಕ್ಯವರೆ ಕನ್ರೋ. ಒಬ್ಬ 31 ಸೈಟು ಮಾಡಿದ್ರೆ ಇನ್ನೊಬ್ಬ ಆರು ಕಾಂಪ್ಲೆಕ್ಸ್ ದುಡಿದವ್ನಂತೆ’ ಯಂಟಪ್ಪಣ್ಣ ಬೆರಗಾಯ್ತು.</p>.<p>‘ಅವರುದ್ದೆಲ್ಲಾ ಅಕ್ರಮ ಸಂಪಾದ್ನೆ ಕನಣೈ. ಇವರ ವಿರುದ್ಧ ಕ್ರಮ ತಕ್ಕಳಿ ಅಂತ ಲೋಕಾಯುಕ್ತ ಕೊಟ್ಟ ರಿಪೋರ್ಟ್ ಸರ್ಕಾರದ ಮುಂದದಲ್ಲಾ ಇಟ್ಟಾಡುಸ್ತರೆ ಬುಡಿ’ ನಾನು ಸಮಾಧಾನಗೊಂಡೆ.</p>.<p>‘ಸಾವಿರಗಟ್ಲೆ ರಿಪೋರ್ಟ್ ಸರ್ಕಾರದ ಮುಂದೆ ಬಾಕಿ ಅವಲ್ರೋ. ಲೋಕಾಯುಕ್ತ ಕ್ರಮ ತಕ್ಕಳಿ ಅಂದೇಟಿಗೆ ಸರ್ಕಾರ, ‘ಆಯ್ತು ಕನಾ ಹಾಕ್ಯಂದ್ರು ರುಬ್ರಿ’ ಅಂತ ಪರ್ಮಿಸನ್ ಕೊಡಕ್ಕುಲ್ಲ’ ಯಂಟಪ್ಪಣ್ಣ ಶಕುನ ನುಡಿಯಿತು.</p>.<p>‘ದಿಟ ಕನೋ. ಸರ್ಕಾರಕ್ಕೆ ಕೈಖರ್ಚಿಗೆ ಕಾಸು ಬೇಕಲ್ರೋ, ಒನ್ಟೈಂ ಸೆಟಲ್ಮೆಂಟ್ ಮಾಡಿ ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೀಬೈದು’.</p>.<p>‘ಅದೇನು ಸರಿಯಾಗೇಳಿ ಸಾ?’ ಗೋಗರೆದೆ.</p>.<p>‘ಅಕ್ರಮದಲ್ಲಿ ಸಿಗೇಬಿದ್ದಿರೋ ಶಾಸಕ, ಮಂತ್ರಿ, ಅಧಿಕಾರಿಗಳಿಗೆ ‘ನಿಮ್ಮ ಅಕ್ರಮ ಸಂಪಾದ್ನೇಲಿ ನಲವತ್ತು ಪರ್ಸೆಂಟ್ ಕಾಸು ಸರ್ಕಾರಕ್ಕೆ ಕಂದಾಯ, ಇಪ್ಪತ್ತು ಪರ್ಸೆಂಟ್ ಸಂಬಂಧಿಸಿದ ಮಂತ್ರಿಗೆ ಸಂದಾಯ ಮಾಡಿ <br />ಕ್ಲೀನ್ ಚಿಟ್ ತಕ್ಕಳಿ’ ಅಂದ್ರಾತಲ್ಲ. ಖೇಲ್ ಖತಂ, ನಾಟಕ್ ಬಂದ್’ ತುರೇಮಣೆ ಮಸ್ತು <br />ಐಡಿಯ ಕೊಟ್ರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಸಾ, ಹಳೇ ಸರ್ಕಾರಗಳು ಯಾವ್ಯಾವೋ ಕೇಸ್ ಹಾಕಿದ್ವಲ್ಲಾ ಅವುನ್ನೆಲ್ಲಾ ವಾಪಾಸ್ ತಕ್ಕಂದಾರಂತೆ. ಅದರಲ್ಲಿ ಎಂಪಿ, ಶಾಸಕರ ಮೇಲೆ ಹಲವಾರು ಕ್ರಿಮಿನಲ್ ಕೇಸು ಬಿದ್ದಿದ್ವಲ್ಲ, ಅವೂ ಸೇರ್ಕಂದವೇನೋ?’ ಸುದ್ದಿ ಸ್ಫೋಟಿಸಿದೆ.</p>.<p>‘ರಾಜಕೀಯದವ್ರ ಕಳ್ಳು–ಬಳ್ಳಿ, ಬಾಮೈಕ್ಳುಗಳು ಜನಶೇವೆ ಮಾಡದು ನೋಡನಾರದೆ ಆಗದೋರು ಹೊಟ್ಟುರಕಂದು ಹುನ್ನಾರ ಮಾಡಿರತರೆ ಕನ್ರೋ. ಬಂಡಾಟಕೆಲ್ಲಾ ದಕ್ಕಬಾರದು ಅಂತ ಇವರು ಕೇಸೆಲ್ಲಾ ವಾಪಾಸ್ ತಕ್ಕಂದಿರತರೆ’ ತುರೇಮಣೆ ವಿವರಿಸಿದರು.</p>.<p>‘ಈ ಕೇಸುಗಳಲ್ಲಿ ಈವತ್ತಿನವರೆಗೂ ಒಬ್ಬ ರಾಜಕೀಯದೋನೂ ಜೈಲಿಗೋಗಿದ್ದು ಕಾಣೆ. ಕೆಳಗಿನ ಕೋರ್ಟು ಶಿಕ್ಷೆ ಕೊಡಿ ಅಂದ್ರೆ ಮೇಲಿನ ಕೋರ್ಟಿಗೋಗಿ ಬೇಲು ತಕ್ಕತರೆ. ಕೇಸು ಮುಗಿಯೋವೊತ್ಗೆ ರಾಜಕಾರಣಿ ವಯಕ್ ಅಂದಿರತನೆ’ ಸಿಟ್ಟುಗಂದೆ.</p>.<p>‘ಮೊನ್ನೆ ಲೋಕಾಯುಕ್ತಗಳು ಸುಮಾರು ಮಿಕಗಳನ್ನ ಹಿಡಿದಾಕ್ಯವರೆ ಕನ್ರೋ. ಒಬ್ಬ 31 ಸೈಟು ಮಾಡಿದ್ರೆ ಇನ್ನೊಬ್ಬ ಆರು ಕಾಂಪ್ಲೆಕ್ಸ್ ದುಡಿದವ್ನಂತೆ’ ಯಂಟಪ್ಪಣ್ಣ ಬೆರಗಾಯ್ತು.</p>.<p>‘ಅವರುದ್ದೆಲ್ಲಾ ಅಕ್ರಮ ಸಂಪಾದ್ನೆ ಕನಣೈ. ಇವರ ವಿರುದ್ಧ ಕ್ರಮ ತಕ್ಕಳಿ ಅಂತ ಲೋಕಾಯುಕ್ತ ಕೊಟ್ಟ ರಿಪೋರ್ಟ್ ಸರ್ಕಾರದ ಮುಂದದಲ್ಲಾ ಇಟ್ಟಾಡುಸ್ತರೆ ಬುಡಿ’ ನಾನು ಸಮಾಧಾನಗೊಂಡೆ.</p>.<p>‘ಸಾವಿರಗಟ್ಲೆ ರಿಪೋರ್ಟ್ ಸರ್ಕಾರದ ಮುಂದೆ ಬಾಕಿ ಅವಲ್ರೋ. ಲೋಕಾಯುಕ್ತ ಕ್ರಮ ತಕ್ಕಳಿ ಅಂದೇಟಿಗೆ ಸರ್ಕಾರ, ‘ಆಯ್ತು ಕನಾ ಹಾಕ್ಯಂದ್ರು ರುಬ್ರಿ’ ಅಂತ ಪರ್ಮಿಸನ್ ಕೊಡಕ್ಕುಲ್ಲ’ ಯಂಟಪ್ಪಣ್ಣ ಶಕುನ ನುಡಿಯಿತು.</p>.<p>‘ದಿಟ ಕನೋ. ಸರ್ಕಾರಕ್ಕೆ ಕೈಖರ್ಚಿಗೆ ಕಾಸು ಬೇಕಲ್ರೋ, ಒನ್ಟೈಂ ಸೆಟಲ್ಮೆಂಟ್ ಮಾಡಿ ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೀಬೈದು’.</p>.<p>‘ಅದೇನು ಸರಿಯಾಗೇಳಿ ಸಾ?’ ಗೋಗರೆದೆ.</p>.<p>‘ಅಕ್ರಮದಲ್ಲಿ ಸಿಗೇಬಿದ್ದಿರೋ ಶಾಸಕ, ಮಂತ್ರಿ, ಅಧಿಕಾರಿಗಳಿಗೆ ‘ನಿಮ್ಮ ಅಕ್ರಮ ಸಂಪಾದ್ನೇಲಿ ನಲವತ್ತು ಪರ್ಸೆಂಟ್ ಕಾಸು ಸರ್ಕಾರಕ್ಕೆ ಕಂದಾಯ, ಇಪ್ಪತ್ತು ಪರ್ಸೆಂಟ್ ಸಂಬಂಧಿಸಿದ ಮಂತ್ರಿಗೆ ಸಂದಾಯ ಮಾಡಿ <br />ಕ್ಲೀನ್ ಚಿಟ್ ತಕ್ಕಳಿ’ ಅಂದ್ರಾತಲ್ಲ. ಖೇಲ್ ಖತಂ, ನಾಟಕ್ ಬಂದ್’ ತುರೇಮಣೆ ಮಸ್ತು <br />ಐಡಿಯ ಕೊಟ್ರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>