<p>‘ಅಯ್ಯೊ… ಅಯ್ಯೋ… ಹೊಳೇಲಿ ಹುಣಿಸೇಹಣ್ಣು ತೊಳೆದ್ಹಂಗೆ 600 ಕೋಟಿ ರೂಪಾಯಿ ಹೋತು’ ಬೆಕ್ಕಣ್ಣ ಬಾಯಿ ಬಡಿದುಕೊಂಡಿತು.</p>.<p>‘ಯಾರ ರೊಕ್ಕ? ಎಲ್ಲಿ ಹೋತು?’ ನನಗೂ ಗಾಬರಿಯಾಯಿತು.</p>.<p>‘ಇನ್ಯಾರಿದ್ದು…? ಸರ್ಕಾರದ ಬೊಕ್ಕಸಕ್ಕೆ ಬರಬೇಕಿದ್ದ ಹಣ…!’</p>.<p>ಬೆಂಗಳೂರಿನಲ್ಲಿ ಪ್ರಮುಖವಾದ ಜಾಗದಲ್ಲಿ ಒಂದು ಐಷಾರಾಮಿ ಹೋಟೆಲ್ಲಿಗೆ ಟೆಂಡರ್ ಇಲ್ಲದೆ, ಕೆಲವು ಅಧಿಕಾರಿಗಳು ಬ್ಯಾಡ ಅಂದ್ರೂ ಕೇಳದೇ ಭಯಂಕರ ಕಡಿಮೆ ಬೆಲೆಗೆ ಗುತ್ತಿಗೆ ಕೊಟ್ಟಿದ್ದರಿಂದ 600 ಕೋಟಿ ರೂಪಾಯಿ ಸರ್ಕಾರದ ಬೊಕ್ಕಸಕ್ಕೆ ನಷ್ಟವೆಂಬ ಸುದ್ದಿಯನ್ನು ಬೆಕ್ಕಣ್ಣ ಓದಿತು.</p>.<p>‘ಸರ್ಕಾರದ ಬೊಕ್ಕಸಕ್ಕೆ ನಷ್ಟ… ಆದರೆ ಯಾರೋ ರಾಜಕಾರಣಿಗಳ, ಉನ್ನತ ಅಧಿಕಾರಗಳ ಜೇಬಿಗೆ ಲಾಭವಂತೂ ಆಗಿರತೈತಿ’ ಎಂದೆ ಸಿಟ್ಟಿನಿಂದ.</p>.<p>‘ಈ 600 ಕೋಟಿ ಜುಜುಬಿ ಅನ್ನಬೌದು. ಗಣಿ ಹಗರಣ ನೆನಪೈತಿ ತಾನೆ? ಒಟ್ಟು ಸುಮಾರು 19 ಕೋಟಿ ಮೆಟ್ರಿಕ್ ಟನ್ ಅದಿರು ಅಕ್ರಮ ರಫ್ತಿನಿಂದಾಗಿ ಅಂದಾಜು 78,245 ಕೋಟಿ ರೂಪಾಯಿ ಬೊಕ್ಕಸಕ್ಕೆ ನಷ್ಟವಾಗೈತಂತೆ’ ಬೆಕ್ಕಣ್ಣ ಗುರುಗುಟ್ಟಿತು.</p>.<p>‘ಈ ಥರಾ ಕೋಟಿಗಟ್ಟಲೆ ಹಣ ನಷ್ಟವಾಗೋದನ್ನು ತಪ್ಪಿಸಿದ್ದರೆ ಎಷ್ಟ್ ಜನ ಬಡವ್ರಿಗೆ ಮನೆ ಕಟ್ಟಿಸಬೌದಿತ್ತು’ ಎಂದೆ.</p>.<p>‘ಅಷ್ಟು ರೊಕ್ಕದಾಗೆ ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗೆ, ಸರ್ಕಾರಿ ಶಾಲೆಗಳಿಗೆ, ರೈತರಿಗೆ ಬೇಕಾಗಿರೋ ಸೌಲಭ್ಯಗಳನ್ನ ಒದಗಿಸಬಹುದಿತ್ತು’ ಬೆಕ್ಕಣ್ಣ ಪಟ್ಟಿ ಮುಂದುವರಿಸಿತು.</p>.<p>‘ಗಣಿ ಹಗರಣ ಪ್ರಕರಣಗಳಿಗೆ ಮರುಜೀವ ಕೊಡತೀವಿ ಅಂತ ಸಿಎಮ್ಮು ಮೊನ್ನೆ ಗುಡುಗಿದಾರೆ…<br> ಕಾದು ನೋಡೂಣು’. ನಾನು ಆಶಾಭಾವದಿಂದ ಹೇಳಿದೆ.</p>.<p>‘ನಾವು ನಷ್ಟದ ಅಂಕಿ ಸಂಖ್ಯೆ ಹೇಳಿ ಬಾಯಿ ತುರಿಕೆ ಕಡಿಮೆ ಮಾಡಿಕೋತೀವಿ ಅಷ್ಟೆ. ಅಕ್ರಮ ಮಾಡಿದೋರು ಆ ರೊಕ್ಕದಲ್ಲಿ ತಿಂದು ತೇಗಿ, ಮಿಕ್ಕಿದ್ದನ್ನು ಎಲ್ಲಿ ಅಡಗಿಸಿಡಬೇಕೋ ಅಲ್ಲಿಟ್ಟಾಗಿದೆ! ಬೊಕ್ಕಸಕ್ಕೂ ತೂತು, ಶ್ರೀಸಾಮಾನ್ಯರ ಜೇಬಂತೂ ಮೊದಲೇ ತೂತು!’ ಎಂದ ಬೆಕ್ಕಣ್ಣ ಪಕಪಕನೆ ನಕ್ಕಿತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಅಯ್ಯೊ… ಅಯ್ಯೋ… ಹೊಳೇಲಿ ಹುಣಿಸೇಹಣ್ಣು ತೊಳೆದ್ಹಂಗೆ 600 ಕೋಟಿ ರೂಪಾಯಿ ಹೋತು’ ಬೆಕ್ಕಣ್ಣ ಬಾಯಿ ಬಡಿದುಕೊಂಡಿತು.</p>.<p>‘ಯಾರ ರೊಕ್ಕ? ಎಲ್ಲಿ ಹೋತು?’ ನನಗೂ ಗಾಬರಿಯಾಯಿತು.</p>.<p>‘ಇನ್ಯಾರಿದ್ದು…? ಸರ್ಕಾರದ ಬೊಕ್ಕಸಕ್ಕೆ ಬರಬೇಕಿದ್ದ ಹಣ…!’</p>.<p>ಬೆಂಗಳೂರಿನಲ್ಲಿ ಪ್ರಮುಖವಾದ ಜಾಗದಲ್ಲಿ ಒಂದು ಐಷಾರಾಮಿ ಹೋಟೆಲ್ಲಿಗೆ ಟೆಂಡರ್ ಇಲ್ಲದೆ, ಕೆಲವು ಅಧಿಕಾರಿಗಳು ಬ್ಯಾಡ ಅಂದ್ರೂ ಕೇಳದೇ ಭಯಂಕರ ಕಡಿಮೆ ಬೆಲೆಗೆ ಗುತ್ತಿಗೆ ಕೊಟ್ಟಿದ್ದರಿಂದ 600 ಕೋಟಿ ರೂಪಾಯಿ ಸರ್ಕಾರದ ಬೊಕ್ಕಸಕ್ಕೆ ನಷ್ಟವೆಂಬ ಸುದ್ದಿಯನ್ನು ಬೆಕ್ಕಣ್ಣ ಓದಿತು.</p>.<p>‘ಸರ್ಕಾರದ ಬೊಕ್ಕಸಕ್ಕೆ ನಷ್ಟ… ಆದರೆ ಯಾರೋ ರಾಜಕಾರಣಿಗಳ, ಉನ್ನತ ಅಧಿಕಾರಗಳ ಜೇಬಿಗೆ ಲಾಭವಂತೂ ಆಗಿರತೈತಿ’ ಎಂದೆ ಸಿಟ್ಟಿನಿಂದ.</p>.<p>‘ಈ 600 ಕೋಟಿ ಜುಜುಬಿ ಅನ್ನಬೌದು. ಗಣಿ ಹಗರಣ ನೆನಪೈತಿ ತಾನೆ? ಒಟ್ಟು ಸುಮಾರು 19 ಕೋಟಿ ಮೆಟ್ರಿಕ್ ಟನ್ ಅದಿರು ಅಕ್ರಮ ರಫ್ತಿನಿಂದಾಗಿ ಅಂದಾಜು 78,245 ಕೋಟಿ ರೂಪಾಯಿ ಬೊಕ್ಕಸಕ್ಕೆ ನಷ್ಟವಾಗೈತಂತೆ’ ಬೆಕ್ಕಣ್ಣ ಗುರುಗುಟ್ಟಿತು.</p>.<p>‘ಈ ಥರಾ ಕೋಟಿಗಟ್ಟಲೆ ಹಣ ನಷ್ಟವಾಗೋದನ್ನು ತಪ್ಪಿಸಿದ್ದರೆ ಎಷ್ಟ್ ಜನ ಬಡವ್ರಿಗೆ ಮನೆ ಕಟ್ಟಿಸಬೌದಿತ್ತು’ ಎಂದೆ.</p>.<p>‘ಅಷ್ಟು ರೊಕ್ಕದಾಗೆ ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗೆ, ಸರ್ಕಾರಿ ಶಾಲೆಗಳಿಗೆ, ರೈತರಿಗೆ ಬೇಕಾಗಿರೋ ಸೌಲಭ್ಯಗಳನ್ನ ಒದಗಿಸಬಹುದಿತ್ತು’ ಬೆಕ್ಕಣ್ಣ ಪಟ್ಟಿ ಮುಂದುವರಿಸಿತು.</p>.<p>‘ಗಣಿ ಹಗರಣ ಪ್ರಕರಣಗಳಿಗೆ ಮರುಜೀವ ಕೊಡತೀವಿ ಅಂತ ಸಿಎಮ್ಮು ಮೊನ್ನೆ ಗುಡುಗಿದಾರೆ…<br> ಕಾದು ನೋಡೂಣು’. ನಾನು ಆಶಾಭಾವದಿಂದ ಹೇಳಿದೆ.</p>.<p>‘ನಾವು ನಷ್ಟದ ಅಂಕಿ ಸಂಖ್ಯೆ ಹೇಳಿ ಬಾಯಿ ತುರಿಕೆ ಕಡಿಮೆ ಮಾಡಿಕೋತೀವಿ ಅಷ್ಟೆ. ಅಕ್ರಮ ಮಾಡಿದೋರು ಆ ರೊಕ್ಕದಲ್ಲಿ ತಿಂದು ತೇಗಿ, ಮಿಕ್ಕಿದ್ದನ್ನು ಎಲ್ಲಿ ಅಡಗಿಸಿಡಬೇಕೋ ಅಲ್ಲಿಟ್ಟಾಗಿದೆ! ಬೊಕ್ಕಸಕ್ಕೂ ತೂತು, ಶ್ರೀಸಾಮಾನ್ಯರ ಜೇಬಂತೂ ಮೊದಲೇ ತೂತು!’ ಎಂದ ಬೆಕ್ಕಣ್ಣ ಪಕಪಕನೆ ನಕ್ಕಿತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>