‘ನಿಮ್ಮ ವಿರುದ್ಧ ಊರೂರು ಸುತ್ತಿ ಪ್ರತಿಭಟನೆ ಮಾಡಿದ್ವಲ್ಲ, ಎಲ್ಲೋ ಒಂದು ಕಡೆ ಅಟಕಾಯಿಸ್ಕಂತು ಅನ್ಸುತ್ತೆ. ಅದಿರ್ಲಿ, ಈಗ ನನಗೊಂದ್ ಅನುಮಾನ...’
‘ಅನುಮಾನನ? ಏನು?’ ರಾಜಾಹುಲಿಗೆ ಕುತೂಹಲ.
‘ನಿಮಗೆ ಕೊರೊನಾ ಬಂದಿಲ್ಲ, ಸುಮ್ನೆ ಬಂದು ಆಸ್ಪತ್ರೆಗೆ ಸೇರ್ಕಂಡಿದೀರಿ ಅಂತ...’
‘ಇದೇ ಬೇಡ ಅನ್ನೋದು. ಅಲ್ಲ, ಸುಮ್ ಸುಮ್ನೆ ಯಾರಾದ್ರೂ ಆಸ್ಪತ್ರೆ ಸೇರ್ಕಂತಾರೇನ್ರಿ?’
‘ಹಾಗಲ್ಲ, ನೀವೀಗ ಸಂಪುಟ ವಿಸ್ತರಣೆ ಸಂಕಟದಲ್ಲಿದೀರಿ. ಆಕಾಂಕ್ಷಿಗಳ ಕಾಟ ತಪ್ಪಿಸಿಕೊಳ್ಳೋಕೆ ಹೀಗೆ ಮಾಡಿದ್ರಾ ಅಂತ. ಬೀಸೋ ದೊಣ್ಣೆ ತಪ್ಪಿಸಿಕೊಂಡ್ರೆ ನೂರು ವರ್ಷ ಆಯಸ್ಸು ಅಂತಾರಲ್ಲ, ಹಂಗೇನಾದ್ರು...’
ರಾಜಾಹುಲಿ ಮಾತಾಡಲಿಲ್ಲ. ತಕ್ಷಣ ವೈದ್ಯರನ್ನು ಕರೆದು ಕೇಳಿದರು ‘ಡಾಕ್ಟ್ರೆ, ಅನುಮಾನ ಕೊರೊನಾ ಲಕ್ಷಣಾನಾ?’