<p>‘ಮಕ್ಕಳು ಗೋಡೆ ಮೇಲೆಲ್ಲಾ ಅಆಇಈ, ಎಬಿಸಿಡಿ, ಗೊಂಬೆ ಚಿತ್ರ ಬರೆದು ಹಾಳು ಮಾಡಿದ್ದಾರೆ. ಪೇಂಟ್ ಮಾಡಿಸಬೇಕೂರೀ...’ ಎಂದಳು ಅನು.</p>.<p>‘ಶಾಲೆ ಓಪನ್ ಆಗೋವರೆಗೂ ಪೇಂಟ್ ಮಾಡಿಸೋದು ಬೇಡ. ಮಕ್ಕಳು ಗೋಡೆ ಮೇಲೊ, ಟೀವಿ ಮೇಲೊ ಬರೆದು ಜ್ಞಾನ ಬೆಳೆಸಿಕೊಳ್ಳಲಿ’ ಎಂದ ಗಿರಿ.</p>.<p>‘ಸರ್ಕಾರ ಸದ್ಯಕ್ಕೆ ಪ್ರೈಮರಿ ಶಾಲೆಗಳನ್ನು ತೆರೆಯುವಂತೆ ಕಾಣುತ್ತಿಲ್ಲ. ಬ್ಲ್ಯಾಕ್ ಬೋರ್ಡ್, ಚಾಕ್ಪೀಸ್ ತನ್ನಿ, ನಾನೇ ಮಕ್ಕಳಿಗೆ ಪಾಠ ಹೇಳ್ತೀನಿ’.</p>.<p>‘ನಿನ್ನ ಪಾಠಕ್ಕೆ ಸಿಲೆಬಸ್ ಇಲ್ಲ, ಟೈಂಟೇಬಲ್ ಇಲ್ಲ, ಅದೇನು ಕಲಿಸ್ತೀಯೋ... ತರಕಾರಿ ಹೆಚ್ಚುವಾಗ ಎಬಿಸಿಡಿ ಬರೆಸ್ತೀಯ, ಒಗ್ಗರಣೆ ಹಾಕುವಾಗ ರೈಮ್ಸ್ ಹೇಳಿಸ್ತೀಯ...’</p>.<p>‘ನೀವು ಟೀವಿಯಲ್ಲಿ ಕ್ರಿಕೆಟ್ ನೋಡಿಕೊಂಡು ಕೊಶ್ಚನ್ ಕೇಳ್ತೀರಿ, ಮಕ್ಕಳ ಉತ್ತರದ ಬದಲು ಕಾಮೆಂಟರಿ ಕೇಳಿಸಿಕೊಳ್ತೀರಿ’.</p>.<p>‘ಸರಿಬಿಡು, ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆ, ಮೊದಲ ಗುರು ತಾಯಿ. ಏನಿದ್ದರೂ ತಂದೆಯಾದವನು ಕೇವಲ ಎಲೆಮರೆಯ ಕಾಯಿ...’ ಗಿರಿ ಒಪ್ಪಿಕೊಂಡ.</p>.<p>‘ಹೇಗೋ ಮಕ್ಕಳು ಚೆನ್ನಾಗಿ ಓದಿ ಬದುಕು ರೂಪಿಸಿಕೊಂಡರೆ ಸಾಕು’.</p>.<p>‘ದೇಶದಲ್ಲಿ ನಿರುದ್ಯೋಗ ಸಮಸ್ಯೆ ಇದೆ. ಈಗ ಪದವಿ ಪಡೆದಿರುವವರಿಗೇ ಉದ್ಯೋಗವಿಲ್ಲ. ನಮ್ಮ ಮಕ್ಕಳು ಓದಿ ಉದ್ಯೋಗ ಮಾಡೋದು ಇನ್ಯಾವಾಗಲೋ...’</p>.<p>‘ಹೌದೂರಿ, ಸರ್ಕಾರ ಕೊಟ್ಟ ಮಾತಿನಂತೆ ಉದ್ಯೋಗ ಸೃಷ್ಟಿ ಮಾಡಲಿಲ್ಲ, ನಿರುದ್ಯೋಗಿಗಳು ತಮ್ಮ ಪದವಿ ಪ್ರಮಾಣಪತ್ರವನ್ನು ಪ್ರಧಾನಿಗೆ ಕಳಿಸಿ ಅಂತ ಕಾಂಗ್ರೆಸ್ ನಾಯಕರು ಕರೆ ಕೊಟ್ಟಿದ್ದಾರೆ’.</p>.<p>‘ಕೊರೊನಾದಿಂದಾಗಿ ಆರ್ಥಿಕ ಬಿಕ್ಕಟ್ಟು ಹೆಚ್ಚಾಗಿದೆಯಂತೆ, ಸಮಸ್ಯೆ ನಿವಾರಣೆ ಆದಮೇಲೆ ಉದ್ಯೋಗ ಸೃಷ್ಟಿ, ತೆರಿಗೆ ಇಳಿಕೆ, ದಿನಬಳಕೆ ಪದಾರ್ಥಗಳ ಬೆಲೆ ಇಳಿಸುವುದಂತೆ ಸರ್ಕಾರ’.</p>.<p>‘ಸರ್ಕಾರವನ್ನು ನಂಬಿಕೊಳ್ಳಲು ಆಗುತ್ತೇನ್ರೀ? ಮಕ್ಕಳಿಗೆ ವಿದ್ಯೆ ಕಲಿಸುವ ಜೊತೆಗೆ ಮನೆಯಲ್ಲೇ ಸ್ವಯಂ ಉದ್ಯೋಗದ ತರಬೇತಿಯನ್ನೂ ಕೊಟ್ಟು ಅವರ ಬದುಕು ರೂಪಿಸಲು ಸಂಕಲ್ಪ ಮಾಡಿದ್ದೇನೆ...’ ಎಂದಳು ಅನು!</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಮಕ್ಕಳು ಗೋಡೆ ಮೇಲೆಲ್ಲಾ ಅಆಇಈ, ಎಬಿಸಿಡಿ, ಗೊಂಬೆ ಚಿತ್ರ ಬರೆದು ಹಾಳು ಮಾಡಿದ್ದಾರೆ. ಪೇಂಟ್ ಮಾಡಿಸಬೇಕೂರೀ...’ ಎಂದಳು ಅನು.</p>.<p>‘ಶಾಲೆ ಓಪನ್ ಆಗೋವರೆಗೂ ಪೇಂಟ್ ಮಾಡಿಸೋದು ಬೇಡ. ಮಕ್ಕಳು ಗೋಡೆ ಮೇಲೊ, ಟೀವಿ ಮೇಲೊ ಬರೆದು ಜ್ಞಾನ ಬೆಳೆಸಿಕೊಳ್ಳಲಿ’ ಎಂದ ಗಿರಿ.</p>.<p>‘ಸರ್ಕಾರ ಸದ್ಯಕ್ಕೆ ಪ್ರೈಮರಿ ಶಾಲೆಗಳನ್ನು ತೆರೆಯುವಂತೆ ಕಾಣುತ್ತಿಲ್ಲ. ಬ್ಲ್ಯಾಕ್ ಬೋರ್ಡ್, ಚಾಕ್ಪೀಸ್ ತನ್ನಿ, ನಾನೇ ಮಕ್ಕಳಿಗೆ ಪಾಠ ಹೇಳ್ತೀನಿ’.</p>.<p>‘ನಿನ್ನ ಪಾಠಕ್ಕೆ ಸಿಲೆಬಸ್ ಇಲ್ಲ, ಟೈಂಟೇಬಲ್ ಇಲ್ಲ, ಅದೇನು ಕಲಿಸ್ತೀಯೋ... ತರಕಾರಿ ಹೆಚ್ಚುವಾಗ ಎಬಿಸಿಡಿ ಬರೆಸ್ತೀಯ, ಒಗ್ಗರಣೆ ಹಾಕುವಾಗ ರೈಮ್ಸ್ ಹೇಳಿಸ್ತೀಯ...’</p>.<p>‘ನೀವು ಟೀವಿಯಲ್ಲಿ ಕ್ರಿಕೆಟ್ ನೋಡಿಕೊಂಡು ಕೊಶ್ಚನ್ ಕೇಳ್ತೀರಿ, ಮಕ್ಕಳ ಉತ್ತರದ ಬದಲು ಕಾಮೆಂಟರಿ ಕೇಳಿಸಿಕೊಳ್ತೀರಿ’.</p>.<p>‘ಸರಿಬಿಡು, ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆ, ಮೊದಲ ಗುರು ತಾಯಿ. ಏನಿದ್ದರೂ ತಂದೆಯಾದವನು ಕೇವಲ ಎಲೆಮರೆಯ ಕಾಯಿ...’ ಗಿರಿ ಒಪ್ಪಿಕೊಂಡ.</p>.<p>‘ಹೇಗೋ ಮಕ್ಕಳು ಚೆನ್ನಾಗಿ ಓದಿ ಬದುಕು ರೂಪಿಸಿಕೊಂಡರೆ ಸಾಕು’.</p>.<p>‘ದೇಶದಲ್ಲಿ ನಿರುದ್ಯೋಗ ಸಮಸ್ಯೆ ಇದೆ. ಈಗ ಪದವಿ ಪಡೆದಿರುವವರಿಗೇ ಉದ್ಯೋಗವಿಲ್ಲ. ನಮ್ಮ ಮಕ್ಕಳು ಓದಿ ಉದ್ಯೋಗ ಮಾಡೋದು ಇನ್ಯಾವಾಗಲೋ...’</p>.<p>‘ಹೌದೂರಿ, ಸರ್ಕಾರ ಕೊಟ್ಟ ಮಾತಿನಂತೆ ಉದ್ಯೋಗ ಸೃಷ್ಟಿ ಮಾಡಲಿಲ್ಲ, ನಿರುದ್ಯೋಗಿಗಳು ತಮ್ಮ ಪದವಿ ಪ್ರಮಾಣಪತ್ರವನ್ನು ಪ್ರಧಾನಿಗೆ ಕಳಿಸಿ ಅಂತ ಕಾಂಗ್ರೆಸ್ ನಾಯಕರು ಕರೆ ಕೊಟ್ಟಿದ್ದಾರೆ’.</p>.<p>‘ಕೊರೊನಾದಿಂದಾಗಿ ಆರ್ಥಿಕ ಬಿಕ್ಕಟ್ಟು ಹೆಚ್ಚಾಗಿದೆಯಂತೆ, ಸಮಸ್ಯೆ ನಿವಾರಣೆ ಆದಮೇಲೆ ಉದ್ಯೋಗ ಸೃಷ್ಟಿ, ತೆರಿಗೆ ಇಳಿಕೆ, ದಿನಬಳಕೆ ಪದಾರ್ಥಗಳ ಬೆಲೆ ಇಳಿಸುವುದಂತೆ ಸರ್ಕಾರ’.</p>.<p>‘ಸರ್ಕಾರವನ್ನು ನಂಬಿಕೊಳ್ಳಲು ಆಗುತ್ತೇನ್ರೀ? ಮಕ್ಕಳಿಗೆ ವಿದ್ಯೆ ಕಲಿಸುವ ಜೊತೆಗೆ ಮನೆಯಲ್ಲೇ ಸ್ವಯಂ ಉದ್ಯೋಗದ ತರಬೇತಿಯನ್ನೂ ಕೊಟ್ಟು ಅವರ ಬದುಕು ರೂಪಿಸಲು ಸಂಕಲ್ಪ ಮಾಡಿದ್ದೇನೆ...’ ಎಂದಳು ಅನು!</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>