<p>ಹೆಂಡತಿಯನ್ನು ಕೂರಿಸಿಕೊಂಡು ಶಂಕ್ರಿ ಬೈಕ್ನಲ್ಲಿ ಹೊರಟಿದ್ದ. ಸರ್ಕಲ್ನಲ್ಲಿ ಪೊಲೀಸರು ತಡೆದು, ‘ಈ ರಸ್ತೆಯಲ್ಲಿ ಹೋಗುವಂತಿಲ್ಲ, ಆಡಳಿತ ಪಕ್ಷದವರು ಪ್ರತಿಭಟನಾ ಮೆರವಣಿಗೆ ಬರ್ತಿದ್ದಾರೆ’ ಅಂದರು. ‘ಆ ರೋಡ್ನಲ್ಲಿ ಹೋಗಬಹುದಾ?’ ಶಂಕ್ರಿ ಕೇಳಿದ.</p>.<p>‘ಆ ರೋಡಿಗೂ ಪ್ರವೇಶವಿಲ್ಲ. ಅಲ್ಲಿ ವಿರೋಧ ಪಕ್ಷದವರು ರಸ್ತೆತಡೆ ಮಾಡ್ತಿದ್ದಾರೆ’.</p>.<p>‘ಆ ಕಡೆಯ ರಸ್ತೆಗೆ ಯಾಕೆ ಬ್ಯಾರಿಕೇಡ್ ಹಾಕಿದ್ದೀರ?’ ಸುಮಿ ಕೇಳಿದಳು.</p>.<p>‘ಮೇಡಂ, ಆ ರಸ್ತೆಯಲ್ಲಿ ಓಡಾಡಲಾಗದಷ್ಟು ಗುಂಡಿ ಬಿದ್ದಿವೆ. ಏಳೆಂಟು ಬೈಕ್ನವರು ಗುಂಡಿಗೆ ಬಿದ್ದು ಸೊಂಟ ಮುರಿದುಕೊಂಡಿದ್ದಾರೆ. ಇನ್ನಷ್ಟು ಜನ ಬೀಳಬಾರದೆಂದು ಬ್ಯಾರಿಕೇಡ್ ಹಾಕಿದ್ದೇವೆ’.</p>.<p>‘ರಸ್ತೆಗುಂಡಿ ಮುಚ್ಚಲು ಒತ್ತಾಯಿಸಿ ಸಾರ್ವಜನಿಕರು ಹೋರಾಟ ಮಾಡಬೇಕು’.</p>.<p>‘ಅದನ್ನು ಮುಚ್ಚಬೇಕಾದ ಜನನಾಯಕರೇ ಬೀದಿಗಿಳಿದು ಹೋರಾಡ್ತಿದ್ದಾರೆ. ಮೊದಲು ಅವರ ಕಷ್ಟ ನಿವಾರಣೆಯಾಗಲಿ, ಆಮೇಲೆ ನಮ್ಮ ಕಷ್ಟ ಹೇಳಿಕೊಳ್ಳೋಣ’ ಶಂಕ್ರಿ ಸಮಾಧಾನ ಹೇಳಿದ.</p>.<p>‘ಜನರ ಕಷ್ಟ ಕೇಳಲಾಗದಷ್ಟು ಕಷ್ಟದಲ್ಲಿದ್ದಾರೇನ್ರೀ ಜನನಾಯಕರು?’</p>.<p>‘ಹೌದು, ಜನನಾಯಕರಲ್ಲಿ ದ್ವೇಷಪ್ರೇಮ ಹೆಚ್ಚಾಗಿದೆಯಂತೆ. ಪರಸ್ಪರ ದ್ವೇಷಾರೋಪಣೆ ಮಾಡುತ್ತಾ, ಬೀದಿ ಜಗಳ ಮಾಡಿಕೊಂಡು ಶಾಂತಿ, ನೆಮ್ಮದಿ ಕಳೆದುಕೊಂಡಿದ್ದಾರೆ’.</p>.<p>‘ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾದಂತೆ ಜನನಾಯಕರ ಜಗಳದಲ್ಲಿ ಜನ ಕಂಗಾಲಾಗಿದ್ದಾರೆ’ ಎನ್ನುತ್ತಾ ಸುಮಿ ನಿಟ್ಟುಸಿರುಬಿಟ್ಟಳು.</p>.<p>‘ನೆರೆಹೊರೆ ದುಃಖ ನಿವಾರಿಸಬಹುದು, ದೊರೆಯ ದುಃಖ ನಿವಾರಿಸಲು ನಮ್ಮಿಂದ ಸಾಧ್ಯವೇ?’</p>.<p>‘ಪ್ರಭುಗಳಿಗೇ ಫಜೀತಿಯಾದರೆ ಪ್ರಜೆಗಳ ಪಾಡೇನು? ರಾಜಕೀಯರಂಗದ ಫಜೀತಿಗೆ ಪರಿಹಾರ ಹುಡುಕಬೇಕು’.</p>.<p>‘ಹೌದು, ಚಿತ್ರರಂಗದವರು ಹೋಮ, ಪೂಜೆ ಮಾಡಿದಂತೆ ರಾಜಕೀಯರಂಗದ ಶಾಂತಿ, ನೆಮ್ಮದಿಗೆ ಯಾವುದಾದರೂ ಹೋಮ ಮಾಡಬೇಕಾಗುತ್ತದೆ...’ ಎಂದು ಶಂಕ್ರಿ ಬೈಕ್ ತಿರುಗಿಸಿಕೊಂಡು ಹೊರಟ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹೆಂಡತಿಯನ್ನು ಕೂರಿಸಿಕೊಂಡು ಶಂಕ್ರಿ ಬೈಕ್ನಲ್ಲಿ ಹೊರಟಿದ್ದ. ಸರ್ಕಲ್ನಲ್ಲಿ ಪೊಲೀಸರು ತಡೆದು, ‘ಈ ರಸ್ತೆಯಲ್ಲಿ ಹೋಗುವಂತಿಲ್ಲ, ಆಡಳಿತ ಪಕ್ಷದವರು ಪ್ರತಿಭಟನಾ ಮೆರವಣಿಗೆ ಬರ್ತಿದ್ದಾರೆ’ ಅಂದರು. ‘ಆ ರೋಡ್ನಲ್ಲಿ ಹೋಗಬಹುದಾ?’ ಶಂಕ್ರಿ ಕೇಳಿದ.</p>.<p>‘ಆ ರೋಡಿಗೂ ಪ್ರವೇಶವಿಲ್ಲ. ಅಲ್ಲಿ ವಿರೋಧ ಪಕ್ಷದವರು ರಸ್ತೆತಡೆ ಮಾಡ್ತಿದ್ದಾರೆ’.</p>.<p>‘ಆ ಕಡೆಯ ರಸ್ತೆಗೆ ಯಾಕೆ ಬ್ಯಾರಿಕೇಡ್ ಹಾಕಿದ್ದೀರ?’ ಸುಮಿ ಕೇಳಿದಳು.</p>.<p>‘ಮೇಡಂ, ಆ ರಸ್ತೆಯಲ್ಲಿ ಓಡಾಡಲಾಗದಷ್ಟು ಗುಂಡಿ ಬಿದ್ದಿವೆ. ಏಳೆಂಟು ಬೈಕ್ನವರು ಗುಂಡಿಗೆ ಬಿದ್ದು ಸೊಂಟ ಮುರಿದುಕೊಂಡಿದ್ದಾರೆ. ಇನ್ನಷ್ಟು ಜನ ಬೀಳಬಾರದೆಂದು ಬ್ಯಾರಿಕೇಡ್ ಹಾಕಿದ್ದೇವೆ’.</p>.<p>‘ರಸ್ತೆಗುಂಡಿ ಮುಚ್ಚಲು ಒತ್ತಾಯಿಸಿ ಸಾರ್ವಜನಿಕರು ಹೋರಾಟ ಮಾಡಬೇಕು’.</p>.<p>‘ಅದನ್ನು ಮುಚ್ಚಬೇಕಾದ ಜನನಾಯಕರೇ ಬೀದಿಗಿಳಿದು ಹೋರಾಡ್ತಿದ್ದಾರೆ. ಮೊದಲು ಅವರ ಕಷ್ಟ ನಿವಾರಣೆಯಾಗಲಿ, ಆಮೇಲೆ ನಮ್ಮ ಕಷ್ಟ ಹೇಳಿಕೊಳ್ಳೋಣ’ ಶಂಕ್ರಿ ಸಮಾಧಾನ ಹೇಳಿದ.</p>.<p>‘ಜನರ ಕಷ್ಟ ಕೇಳಲಾಗದಷ್ಟು ಕಷ್ಟದಲ್ಲಿದ್ದಾರೇನ್ರೀ ಜನನಾಯಕರು?’</p>.<p>‘ಹೌದು, ಜನನಾಯಕರಲ್ಲಿ ದ್ವೇಷಪ್ರೇಮ ಹೆಚ್ಚಾಗಿದೆಯಂತೆ. ಪರಸ್ಪರ ದ್ವೇಷಾರೋಪಣೆ ಮಾಡುತ್ತಾ, ಬೀದಿ ಜಗಳ ಮಾಡಿಕೊಂಡು ಶಾಂತಿ, ನೆಮ್ಮದಿ ಕಳೆದುಕೊಂಡಿದ್ದಾರೆ’.</p>.<p>‘ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾದಂತೆ ಜನನಾಯಕರ ಜಗಳದಲ್ಲಿ ಜನ ಕಂಗಾಲಾಗಿದ್ದಾರೆ’ ಎನ್ನುತ್ತಾ ಸುಮಿ ನಿಟ್ಟುಸಿರುಬಿಟ್ಟಳು.</p>.<p>‘ನೆರೆಹೊರೆ ದುಃಖ ನಿವಾರಿಸಬಹುದು, ದೊರೆಯ ದುಃಖ ನಿವಾರಿಸಲು ನಮ್ಮಿಂದ ಸಾಧ್ಯವೇ?’</p>.<p>‘ಪ್ರಭುಗಳಿಗೇ ಫಜೀತಿಯಾದರೆ ಪ್ರಜೆಗಳ ಪಾಡೇನು? ರಾಜಕೀಯರಂಗದ ಫಜೀತಿಗೆ ಪರಿಹಾರ ಹುಡುಕಬೇಕು’.</p>.<p>‘ಹೌದು, ಚಿತ್ರರಂಗದವರು ಹೋಮ, ಪೂಜೆ ಮಾಡಿದಂತೆ ರಾಜಕೀಯರಂಗದ ಶಾಂತಿ, ನೆಮ್ಮದಿಗೆ ಯಾವುದಾದರೂ ಹೋಮ ಮಾಡಬೇಕಾಗುತ್ತದೆ...’ ಎಂದು ಶಂಕ್ರಿ ಬೈಕ್ ತಿರುಗಿಸಿಕೊಂಡು ಹೊರಟ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>