<p>‘ಚುನಾವಣೆ ಹತ್ತಿರ ಬರುತ್ತಿದೆ, ಕ್ಷೇತ್ರದ ಕಡೆ ಹೆಜ್ಜೆ ಹಾಕಿ, ಜನರ ಸಮಸ್ಯೆ ಆಲಿಸಿ’ ಎಂದು ಶಾಸಕರಿಗೆ ಆಪ್ತ ಸಹಾಯಕ ಮನವಿ ಮಾಡಿದ.</p>.<p>‘ಮೊನ್ನೆ ನಡೆದೂ ನಡೆದೂ ಶಾಸಕರಿಗೆ ಕಾಲು ನೋವಾಗಿದೆ ಎಂದು ಜನರಿಗೆ ತಿಳಿಸಿ, ನನ್ನ ಪರವಾಗಿ ನೀನೇ ಬೆಂಬಲಿಗರೊಂದಿಗೆ ಕ್ಷೇತ್ರಯಾತ್ರೆ ಮಾಡು’ ಎಂದರು ಶಾಸಕರು.</p>.<p>‘ಕ್ಷೇತ್ರದಲ್ಲಿ ನಿಮ್ಮ ಬಗ್ಗೆ ಆಪಾದನೆ, ಅಪಸ್ವರ ಹೆಚ್ಚಾಗಿದೆ, ಜನರ ಸಿಟ್ಟು ಶಮನ, ಶತ್ರು ದಮನ ಮಾಡದೆ ಮುಂದಿನ ಚುನಾವಣೆ ಕಷ್ಟವಾಗುತ್ತದೆ’ ಎಂದು ಎಚ್ಚರಿಸಿದ. ಶಾಸಕರು ಆಕಳಿಸಿದರು.</p>.<p>‘ಮಳೆ ಬಂದು ರಸ್ತೆಗಳು ಕಿತ್ತುಹೋಗಿವೆ, ಚರಂಡಿಗಳು ಮುಚ್ಚಿಹೋಗಿವೆ, ರಿಪೇರಿಗೆ ಗುದ್ದಲಿಪೂಜೆ ಮಾಡಬೇಕು’.</p>.<p>‘ಅಧಿಕಾರಿಗಳನ್ನು ಕರೆಸಿ ನೀನೇ ಕಾಮಗಾರಿ ಶುರು ಮಾಡಿಸು’.</p>.<p>‘ಪಕ್ಷ ಬಿಟ್ಟು ಹೋಗಲು ಸಿದ್ಧರಾಗಿರುವವರ ಪಟ್ಟಿ ಇದೆ, ಇವರಿಗೆ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಟಿಕೆಟ್ ಕೊಡುಸ್ತೀವಿ ಅಂತ ಆಸೆ ಹುಟ್ಟಿಸಿ ಪಕ್ಷದಲ್ಲೇ ಉಳಿಸಿಕೊಳ್ಳಲು ಸಾಂತ್ವನ ಸಭೆ ಮಾಡಬೇಕಾಗಿದೆ. ಅದನ್ನೂ ನಾನೇ ಮಾಡಲಾ ಸಾರ್?’</p>.<p>ಶಾಸಕರಿಗೆ ಆಪ್ತ ಸಹಾಯಕನ ಬಗ್ಗೆ ಅಪಾರ ನಂಬಿಕೆ. ತಮ್ಮ ಪಾಲಿನ ಎಷ್ಟೋ ಸಮಸ್ಯೆಗಳನ್ನು ಚಾಣಾಕ್ಷತನದಿಂದ ಬಗೆಹರಿಸಿ ನೆರವಾಗಿದ್ದ. ಅವರ ಪತ್ನಿಗೂ ಗೊತ್ತಿಲ್ಲದ ಶಾಸಕರ ಗುಟ್ಟು, ಗಮ್ಮತ್ತುಗಳನ್ನು ತಿಳಿದಿದ್ದ. ಕ್ಷೇತ್ರದ ಜನರ ನಾಡಿಮಿಡಿತ, ಹಿಡಿತವನ್ನು ಅರಿತಿದ್ದ ಆಪ್ತ ಸಹಾಯಕ ಶಾಸಕರಿಗೆ ಪರಮಾಪ್ತನಾಗಿದ್ದ.</p>.<p>ಹೀಗಿರುವಾಗ... ಆಪ್ತ ಸಹಾಯಕ, ಪಕ್ಷದ ನಾಯಕರ ಮನಗೆದ್ದು ಚುನಾವಣೆ ಟಿಕೆಟ್ ಪಡೆದು ಇದೇ ಕ್ಷೇತ್ರದಲ್ಲಿ ಸ್ಪರ್ಧಿಸಲಿದ್ದಾನೆ ಎನ್ನುವ ಆಘಾತಕಾರಿ ಸುದ್ದಿಗೆ ಶಾಸಕರು ಬೆಚ್ಚಿಬಿದ್ದು ನಿದ್ರೆಯಿಂದ ಎಚ್ಚರಗೊಂಡರು.</p>.<p>‘ಎಲೆಕ್ಷನ್ ಹತ್ತಿರ ಬಂದಾಗ ಕೆಟ್ಟ ಕನಸುಗಳು ಬೀಳುವುದು ಸಹಜ, ಆತಂಕಪಡಬೇಡಿ...’ ಎಂದು ಶಾಸಕರಿಗೆ ಪತ್ನಿ ಸಮಾಧಾನ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಚುನಾವಣೆ ಹತ್ತಿರ ಬರುತ್ತಿದೆ, ಕ್ಷೇತ್ರದ ಕಡೆ ಹೆಜ್ಜೆ ಹಾಕಿ, ಜನರ ಸಮಸ್ಯೆ ಆಲಿಸಿ’ ಎಂದು ಶಾಸಕರಿಗೆ ಆಪ್ತ ಸಹಾಯಕ ಮನವಿ ಮಾಡಿದ.</p>.<p>‘ಮೊನ್ನೆ ನಡೆದೂ ನಡೆದೂ ಶಾಸಕರಿಗೆ ಕಾಲು ನೋವಾಗಿದೆ ಎಂದು ಜನರಿಗೆ ತಿಳಿಸಿ, ನನ್ನ ಪರವಾಗಿ ನೀನೇ ಬೆಂಬಲಿಗರೊಂದಿಗೆ ಕ್ಷೇತ್ರಯಾತ್ರೆ ಮಾಡು’ ಎಂದರು ಶಾಸಕರು.</p>.<p>‘ಕ್ಷೇತ್ರದಲ್ಲಿ ನಿಮ್ಮ ಬಗ್ಗೆ ಆಪಾದನೆ, ಅಪಸ್ವರ ಹೆಚ್ಚಾಗಿದೆ, ಜನರ ಸಿಟ್ಟು ಶಮನ, ಶತ್ರು ದಮನ ಮಾಡದೆ ಮುಂದಿನ ಚುನಾವಣೆ ಕಷ್ಟವಾಗುತ್ತದೆ’ ಎಂದು ಎಚ್ಚರಿಸಿದ. ಶಾಸಕರು ಆಕಳಿಸಿದರು.</p>.<p>‘ಮಳೆ ಬಂದು ರಸ್ತೆಗಳು ಕಿತ್ತುಹೋಗಿವೆ, ಚರಂಡಿಗಳು ಮುಚ್ಚಿಹೋಗಿವೆ, ರಿಪೇರಿಗೆ ಗುದ್ದಲಿಪೂಜೆ ಮಾಡಬೇಕು’.</p>.<p>‘ಅಧಿಕಾರಿಗಳನ್ನು ಕರೆಸಿ ನೀನೇ ಕಾಮಗಾರಿ ಶುರು ಮಾಡಿಸು’.</p>.<p>‘ಪಕ್ಷ ಬಿಟ್ಟು ಹೋಗಲು ಸಿದ್ಧರಾಗಿರುವವರ ಪಟ್ಟಿ ಇದೆ, ಇವರಿಗೆ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಟಿಕೆಟ್ ಕೊಡುಸ್ತೀವಿ ಅಂತ ಆಸೆ ಹುಟ್ಟಿಸಿ ಪಕ್ಷದಲ್ಲೇ ಉಳಿಸಿಕೊಳ್ಳಲು ಸಾಂತ್ವನ ಸಭೆ ಮಾಡಬೇಕಾಗಿದೆ. ಅದನ್ನೂ ನಾನೇ ಮಾಡಲಾ ಸಾರ್?’</p>.<p>ಶಾಸಕರಿಗೆ ಆಪ್ತ ಸಹಾಯಕನ ಬಗ್ಗೆ ಅಪಾರ ನಂಬಿಕೆ. ತಮ್ಮ ಪಾಲಿನ ಎಷ್ಟೋ ಸಮಸ್ಯೆಗಳನ್ನು ಚಾಣಾಕ್ಷತನದಿಂದ ಬಗೆಹರಿಸಿ ನೆರವಾಗಿದ್ದ. ಅವರ ಪತ್ನಿಗೂ ಗೊತ್ತಿಲ್ಲದ ಶಾಸಕರ ಗುಟ್ಟು, ಗಮ್ಮತ್ತುಗಳನ್ನು ತಿಳಿದಿದ್ದ. ಕ್ಷೇತ್ರದ ಜನರ ನಾಡಿಮಿಡಿತ, ಹಿಡಿತವನ್ನು ಅರಿತಿದ್ದ ಆಪ್ತ ಸಹಾಯಕ ಶಾಸಕರಿಗೆ ಪರಮಾಪ್ತನಾಗಿದ್ದ.</p>.<p>ಹೀಗಿರುವಾಗ... ಆಪ್ತ ಸಹಾಯಕ, ಪಕ್ಷದ ನಾಯಕರ ಮನಗೆದ್ದು ಚುನಾವಣೆ ಟಿಕೆಟ್ ಪಡೆದು ಇದೇ ಕ್ಷೇತ್ರದಲ್ಲಿ ಸ್ಪರ್ಧಿಸಲಿದ್ದಾನೆ ಎನ್ನುವ ಆಘಾತಕಾರಿ ಸುದ್ದಿಗೆ ಶಾಸಕರು ಬೆಚ್ಚಿಬಿದ್ದು ನಿದ್ರೆಯಿಂದ ಎಚ್ಚರಗೊಂಡರು.</p>.<p>‘ಎಲೆಕ್ಷನ್ ಹತ್ತಿರ ಬಂದಾಗ ಕೆಟ್ಟ ಕನಸುಗಳು ಬೀಳುವುದು ಸಹಜ, ಆತಂಕಪಡಬೇಡಿ...’ ಎಂದು ಶಾಸಕರಿಗೆ ಪತ್ನಿ ಸಮಾಧಾನ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>