ಗಡಿ ಪ್ರಶ್ನೆ: ಇಂದಿರಾ–ನಾಯಕ್ ಚರ್ಚೆ ಬಜೆಟ್ ಅಧಿವೇಶನ ಮುಗಿಯುವುದರೊಳಗೆ ಹೊಸ ಸೂತ್ರದ ರಚನೆ
ನವದೆಹಲಿ, ಮಾ. 7– ಮೇ ತಿಂಗಳಿನಲ್ಲಿ ಸಂಸತ್ ಬಜೆಟ್ ಅಧಿವೇಶನ ಅಂತ್ಯಗೊಳ್ಳುವುದರೊಳಗೆ ಮೈಸೂರು–ಮಹಾರಾಷ್ಟ್ರ ಗಡಿ ವಿವಾದ ಇತ್ಯರ್ಥಕ್ಕೆ ಪ್ರಧಾನಮಂತ್ರಿ ಶ್ರೀಮತಿ ಇಂದಿರಾಗಾಂಧಿಯವರು ಅಖೈರು ಸೂತ್ರವೊಂದನ್ನು ರೂಪಿಸುವ ಸಂಭವವಿದೆ.