ಬೆಂಗಳೂರು, ಸೆ. 28– ಎರಡು ವರ್ಷಗಳ ಅವಧಿಯಲ್ಲಿ ಸುಮಾರು 41,000 ರೂಪಾಯಿಗಳನ್ನು ಪ್ರವಾಸಗಳಿಗಾಗಿ ಖರ್ಚು ಮಾಡಿರುವ ಮೀನುಗಾರಿಕೆ ಇಲಾಖೆ ಸಚಿವ ಶ್ರೀ ಎಚ್.ಸಿ.ಲಿಂಗಾರೆಡ್ಡಿ ‘ಅವರನ್ನು ಮುಖ್ಯಮಂತ್ರಿಗಳು ಮಂತ್ರಿಮಂಡಲದಿಂದ ತೆಗೆದರೆ ಒಳ್ಳೆಯದಲ್ಲವೇ?’ ಎಂದು ಅದೇ ಜಿಲ್ಲೆಯ ಹಾಗೂ ಅದೇ ಪಕ್ಷದ (ಸಂಸ್ಥಾ ಕಾಂಗ್ರೆಸ್) ಸದಸ್ಯ ಶ್ರೀ ಸಿ.ಎಂ.ಪುಟ್ಟಸ್ವಾಮಿ ಅವರು ಇಂದು ವಿಧಾನಸಭೆಯಲ್ಲಿ ಕೇಳಿದರು.