ಕೆಲ ಹೋಟೆಲ್ ಮಾಲೀಕರು, ಬ್ಯಾಂಕ್, ಫೈನಾನ್ಸ್, ಸೊಸೈಟಿಗಳಿಂದ ಸಾಲ ಪಡೆದಿದ್ದು, ಇನ್ನೂ ಕೆಲವರು ಚಿನ್ನಾಭರಣ ಅಡವಿಟ್ಟು ಸಾಲ ಪಡೆದಿದ್ದಾರೆ. ಇದೀಗ ಸಾಲದ ಕಂತು ಪಾವತಿಸಲಾಗದೇ, ಅಡವಿಟ್ಟ ಚಿನ್ನಾಭರಣ ಬಿಡಿಸಲಾಗದೇ, ಕೆಲವರು ಹೋಟೆಲ್ಗಳನ್ನು ಮುಚ್ಚಿದ್ದಾರೆ. ಅವಳಿ ಜಿಲ್ಲೆಗಳಲ್ಲಿ ಶೇ 25 ರಷ್ಟು ಹೋಟೆಲ್ಗಳು ಬಾಗಿಲು ಹಾಕಿವೆ.