<p><strong>ಪ್ರಧಾನಿ ವಾಪಸ್ ನಂತರ ಪೆಟ್ರೋಲ್ ಬೆಲೆ ಹೆಚ್ಚಳ?</strong></p>.<p>ನವದೆಹಲಿ, ಸೆಪ್ಟೆಂಬರ್ 11 (ಪಿಟಿಐ)– ಪ್ರಧಾನಿ ವಾಜಪೇಯಿ ಅವರು, ಅಮೆರಿಕ ಪ್ರವಾಸದಿಂದ ಮರಳಿದ ನಂತರ ಕೇಂದ್ರ ಸರ್ಕಾರವು ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಹೆಚ್ಚಿಸುವ ನಿರೀಕ್ಷೆ ಇದೆ.</p>.<p>ಅಂತರರಾಷ್ಟ್ರೀಯ ಮಾರುಕಟ್ಟೆ ಯಲ್ಲಿ ಏರುತ್ತಿರುವ ತೈಲದ ಬೆಲೆ ಉಂಟು ಮಾಡಿರುವ ಆತಂಕವನ್ನು ಕಡಿಮೆ ಮಾಡಲು ತೈಲ ಉತ್ಪಾದನೆ ಯನ್ನು ಪ್ರತಿ ದಿನ ಎಂಟು ಲಕ್ಷ ಬ್ಯಾರೆಲ್ಗೆ ಹೆಚ್ಚಿಸಲು ಒಪೆಕ್ ನಿನ್ನೆಯಷ್ಟೆ ನಿರ್ಧರಿಸಿದೆ. ಇದಕ್ಕೆ ಭಾರತ ತನ್ನ ನಿರಾಶೆ ವ್ಯಕ್ತಪಡಿಸಿದೆ.</p>.<p><strong>ಕೃಷ್ಣ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಬಿಜೆಪಿ ಸಜ್ಜು</strong></p>.<p>ಮಂಗಳೂರು, ಸೆಪ್ಟೆಂಬರ್ 11– ಭ್ರಷ್ಟಾಚಾರ, ಅಪರಾಧಿಗಳ ತಾಣವಾಗಿ ರಾಜ್ಯವು ಮಾರ್ಪಾಡಾಗುತ್ತಿರುವು ದನ್ನು ತಡೆಗಟ್ಟಲು ವಿಫಲವಾಗಿರುವ ಎಸ್.ಎಂ. ಕೃಷ್ಣ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಭಾರತೀಯ ಜನತಾ ಪಕ್ಷವು ಅಕ್ಟೋಬರ್ 9ರಂದು ರಾಜ್ಯದಾದ್ಯಂತ ಬೃಹತ್ ಪ್ರತಿಭಟನೆ ನಡೆಸಲಿದೆ.</p>.<p>ಬಿಜೆಪಿ ರಾಜ್ಯ ಘಟಕದ ನೂತನ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡ ನಂತರ ಇಲ್ಲಿಗೆ ಭೇಟಿ ನೀಡಿದ್ದ ಬಸವರಾಜ ಪಾಟೀಲ್ ಸೇಡಂ, ಈ ವಿಷಯ ಪ್ರಕಟಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪ್ರಧಾನಿ ವಾಪಸ್ ನಂತರ ಪೆಟ್ರೋಲ್ ಬೆಲೆ ಹೆಚ್ಚಳ?</strong></p>.<p>ನವದೆಹಲಿ, ಸೆಪ್ಟೆಂಬರ್ 11 (ಪಿಟಿಐ)– ಪ್ರಧಾನಿ ವಾಜಪೇಯಿ ಅವರು, ಅಮೆರಿಕ ಪ್ರವಾಸದಿಂದ ಮರಳಿದ ನಂತರ ಕೇಂದ್ರ ಸರ್ಕಾರವು ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಹೆಚ್ಚಿಸುವ ನಿರೀಕ್ಷೆ ಇದೆ.</p>.<p>ಅಂತರರಾಷ್ಟ್ರೀಯ ಮಾರುಕಟ್ಟೆ ಯಲ್ಲಿ ಏರುತ್ತಿರುವ ತೈಲದ ಬೆಲೆ ಉಂಟು ಮಾಡಿರುವ ಆತಂಕವನ್ನು ಕಡಿಮೆ ಮಾಡಲು ತೈಲ ಉತ್ಪಾದನೆ ಯನ್ನು ಪ್ರತಿ ದಿನ ಎಂಟು ಲಕ್ಷ ಬ್ಯಾರೆಲ್ಗೆ ಹೆಚ್ಚಿಸಲು ಒಪೆಕ್ ನಿನ್ನೆಯಷ್ಟೆ ನಿರ್ಧರಿಸಿದೆ. ಇದಕ್ಕೆ ಭಾರತ ತನ್ನ ನಿರಾಶೆ ವ್ಯಕ್ತಪಡಿಸಿದೆ.</p>.<p><strong>ಕೃಷ್ಣ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಬಿಜೆಪಿ ಸಜ್ಜು</strong></p>.<p>ಮಂಗಳೂರು, ಸೆಪ್ಟೆಂಬರ್ 11– ಭ್ರಷ್ಟಾಚಾರ, ಅಪರಾಧಿಗಳ ತಾಣವಾಗಿ ರಾಜ್ಯವು ಮಾರ್ಪಾಡಾಗುತ್ತಿರುವು ದನ್ನು ತಡೆಗಟ್ಟಲು ವಿಫಲವಾಗಿರುವ ಎಸ್.ಎಂ. ಕೃಷ್ಣ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಭಾರತೀಯ ಜನತಾ ಪಕ್ಷವು ಅಕ್ಟೋಬರ್ 9ರಂದು ರಾಜ್ಯದಾದ್ಯಂತ ಬೃಹತ್ ಪ್ರತಿಭಟನೆ ನಡೆಸಲಿದೆ.</p>.<p>ಬಿಜೆಪಿ ರಾಜ್ಯ ಘಟಕದ ನೂತನ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡ ನಂತರ ಇಲ್ಲಿಗೆ ಭೇಟಿ ನೀಡಿದ್ದ ಬಸವರಾಜ ಪಾಟೀಲ್ ಸೇಡಂ, ಈ ವಿಷಯ ಪ್ರಕಟಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>