<p><strong>ಅಬ್ಬರದ ಮಳೆ: ಜಲಾಶಯ ಭರ್ತಿ</strong></p>.<p>ಬೆಂಗಳೂರು, ಆಗಸ್ಟ್ 26– ಕಳೆದ ಕೆಲವು ದಿನಗಳಿಂದ ರಾಜ್ಯದ ಪ್ರಮುಖ ನದಿಗಳ ಜಲಾನಯನ ಪ್ರದೇಶದಲ್ಲಿ ಬೀಳುತ್ತಿರುವ ಸತತ ಮಳೆಯಿಂದ <br>ಕೃಷ್ಣರಾಜಸಾಗರ, ಹಾರಂಗಿ, ಹೇಮಾವತಿ ಸೇರಿದಂತೆ ಬಹುತೇಕ ಜಲಾಶಯಗಳು ಭರ್ತಿ ಹಂತ ತಲುಪಿದ್ದು, ರೈತರಲ್ಲಿ ಹರ್ಷ ಚಿಮ್ಮಿದೆ.</p>.<p>ಕೆ.ಆರ್. ಸಾಗರ ಜಲಾಶಯ ತನ್ನ ಗರಿಷ್ಠ ಮಟ್ಟಕ್ಕೆ ಭರ್ತಿಯಾಗಲು ಇನ್ನು ಕೇವಲ ಮೂರೂವರೆ ಅಡಿ ಮಾತ್ರ ನೀರು ಬರಬೇಕಿದ್ದರೆ, ಹಾರಂಗಿ ಗರಿಷ್ಠ ಮಟ್ಟ ಮುಟ್ಟಲು ಕೇವಲ ಎರಡು ಅಡಿ ಮಾತ್ರ ನೀರು ಬರಬೇಕು.</p>.<p><strong>ಶೀಘ್ರ ಕರ್ನಾಟಕ ಜೀವ ಪರಿಸರ ವೈವಿಧ್ಯ ಮಂಡಳಿ</strong></p>.<p>ಬೆಂಗಳೂರು, ಆಗಸ್ಟ್ 26– ರಾಜ್ಯದಲ್ಲಿನ ಜೀವ ಪರಿಸರ ವೈವಿಧ್ಯದ ಸೂಕ್ತ ರಕ್ಷಣೆ, ಬಳಕೆ ಮತ್ತು ನಿರ್ವಹಣೆಗಾಗಿ ಶೀಘ್ರದಲ್ಲಿಯೇ ‘ಕರ್ನಾಟಕ ಜೀವ ಪರಿಸರ ವೈವಿಧ್ಯ ಮಂಡಳಿ’ಯನ್ನು ರಚಿಸಲಾಗುವುದು.</p>.<p>ಈ ವಿಚಾರವನ್ನು ಅರಣ್ಯ ಸಚಿವ ಕೆ.ಎಚ್. ರಂಗನಾಥ್ ಇಂದು ಇಲ್ಲಿ ಸುದ್ದಿಗಾರರಿಗೆ ತಿಳಿಸಿ, ಮಂಡಳಿಯಲ್ಲಿ ಈ ಕ್ಷೇತ್ರದಲ್ಲಿ ಗಮನಾರ್ಹ ಕೆಲಸ ಮಾಡಿದ ತಜ್ಞರು ಇರುತ್ತಾರೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಬ್ಬರದ ಮಳೆ: ಜಲಾಶಯ ಭರ್ತಿ</strong></p>.<p>ಬೆಂಗಳೂರು, ಆಗಸ್ಟ್ 26– ಕಳೆದ ಕೆಲವು ದಿನಗಳಿಂದ ರಾಜ್ಯದ ಪ್ರಮುಖ ನದಿಗಳ ಜಲಾನಯನ ಪ್ರದೇಶದಲ್ಲಿ ಬೀಳುತ್ತಿರುವ ಸತತ ಮಳೆಯಿಂದ <br>ಕೃಷ್ಣರಾಜಸಾಗರ, ಹಾರಂಗಿ, ಹೇಮಾವತಿ ಸೇರಿದಂತೆ ಬಹುತೇಕ ಜಲಾಶಯಗಳು ಭರ್ತಿ ಹಂತ ತಲುಪಿದ್ದು, ರೈತರಲ್ಲಿ ಹರ್ಷ ಚಿಮ್ಮಿದೆ.</p>.<p>ಕೆ.ಆರ್. ಸಾಗರ ಜಲಾಶಯ ತನ್ನ ಗರಿಷ್ಠ ಮಟ್ಟಕ್ಕೆ ಭರ್ತಿಯಾಗಲು ಇನ್ನು ಕೇವಲ ಮೂರೂವರೆ ಅಡಿ ಮಾತ್ರ ನೀರು ಬರಬೇಕಿದ್ದರೆ, ಹಾರಂಗಿ ಗರಿಷ್ಠ ಮಟ್ಟ ಮುಟ್ಟಲು ಕೇವಲ ಎರಡು ಅಡಿ ಮಾತ್ರ ನೀರು ಬರಬೇಕು.</p>.<p><strong>ಶೀಘ್ರ ಕರ್ನಾಟಕ ಜೀವ ಪರಿಸರ ವೈವಿಧ್ಯ ಮಂಡಳಿ</strong></p>.<p>ಬೆಂಗಳೂರು, ಆಗಸ್ಟ್ 26– ರಾಜ್ಯದಲ್ಲಿನ ಜೀವ ಪರಿಸರ ವೈವಿಧ್ಯದ ಸೂಕ್ತ ರಕ್ಷಣೆ, ಬಳಕೆ ಮತ್ತು ನಿರ್ವಹಣೆಗಾಗಿ ಶೀಘ್ರದಲ್ಲಿಯೇ ‘ಕರ್ನಾಟಕ ಜೀವ ಪರಿಸರ ವೈವಿಧ್ಯ ಮಂಡಳಿ’ಯನ್ನು ರಚಿಸಲಾಗುವುದು.</p>.<p>ಈ ವಿಚಾರವನ್ನು ಅರಣ್ಯ ಸಚಿವ ಕೆ.ಎಚ್. ರಂಗನಾಥ್ ಇಂದು ಇಲ್ಲಿ ಸುದ್ದಿಗಾರರಿಗೆ ತಿಳಿಸಿ, ಮಂಡಳಿಯಲ್ಲಿ ಈ ಕ್ಷೇತ್ರದಲ್ಲಿ ಗಮನಾರ್ಹ ಕೆಲಸ ಮಾಡಿದ ತಜ್ಞರು ಇರುತ್ತಾರೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>