<p><strong>ಜನತಾದಳ ಬಣಗಳ ವಿಲೀನಕ್ಕೆ ಮತ್ತೆ ಚಾಲನೆ</strong></p>.<p>ಬೆಂಗಳೂರು, ನ. 18– ಕೃಷಿ ಉತ್ಪನ್ನಗಳ ಬೆಲೆ ಕುಸಿತದಂಥ ವಿಷಯಗಳಲ್ಲಿ ರಾಜಕೀಯ ಕಾರಣದಿಂದ ದೂರ ಉಳಿಯುವುದು ರೈತರು, ಸಾಮಾನ್ಯ ಜನರ ಹಿತದೃಷ್ಟಿಯಿಂದ ಸರಿಯಲ್ಲ ಎಂದು ಜನತಾದಳ ಉಭಯ ಬಣಗಳು ಮತ್ತು ಈಗ ಪಕ್ಷೇತರರಾಗಿ ಕುಳಿತಿರುವ ಜನತಾದಳದ ಮಾಜಿ ಸದಸ್ಯರು, ಅಭಿಪ್ರಾಯಪಡುವ ಮೂಲಕ ಈ ಬಣಗಳ ವಿಲೀನಕ್ಕೆ ಮತ್ತಷ್ಟು ಚಾಲನೆ ಸಿಕ್ಕಂತಾಗಿದೆ.</p>.<p>ಕೇಂದ್ರದ ಮಾಜಿ ಸಚಿವ ಮತ್ತು ಜನತಾದಳ (ಎಸ್) ಧುರೀಣ ಎಸ್.ಆರ್. ಬೊಮ್ಮಾಯಿ ಅವರ ಮನೆಯಲ್ಲಿ ಶುಕ್ರವಾರ ರಾತ್ರಿ ಸುಮಾರು ಮೂರು ಗಂಟೆಗೂ ಹೆಚ್ಚುಕಾಲ ಈ ಎಲ್ಲ ಧುರೀಣರು ಒಂದೇ ಕಡೆ ಸೇರಿ ಚರ್ಚೆ ಮಾಡಿರುವುದರಿಂದ ಈ ಇಂಗಿತ ವ್ಯಕ್ತವಾಗಿದೆ.</p>.<p><strong>ಮರಕ್ಕೆ ಬಸ್ ಡಿಕ್ಕಿ: 8 ಸಾವು</strong></p>.<p>ಶಿವಮೊಗ್ಗ, ನ. 18– ಖಾಸಗಿ ಬಸ್ಸೊಂದು ರಸ್ತೆಬದಿಯ ಮರಕ್ಕೆ ಡಿಕ್ಕಿ ಹೊಡೆದಿದ್ದರಿಂದ ಓರ್ವ ಮಹಿಳೆ ಸೇರಿದಂತೆ 8 ಜನರು ಸ್ಥಳದಲ್ಲೇ ಸತ್ತು, 30 ಜನರು ಗಾಯಗೊಂಡ ಘಟನೆ ಶಿವಮೊಗ್ಗ–ಸಾಗರ ರಸ್ತೆಯ ಆನಂದಪುರ ಬಳಿ ಇಂದು ಮಧ್ಯಾಹ್ನ ಸಂಭವಿಸಿದೆ.</p>.<p>ಶಿವಮೊಗ್ಗದಿಂದ ಆನಂದಪುರಂ ಮಾರ್ಗವಾಗಿ ಸವಳಂಗಕ್ಕೆ ಹೋಗುತ್ತಿದ್ದ ‘ಆಂಜನೇಯ’ ಬಸ್ಸು, ಇನ್ನೊಂದು ಬಸ್ಸನ್ನು ಹಿಂದಕ್ಕೆ ಹಾಕುವ ಪ್ರಯತ್ನದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಅಪ್ಪಳಿಸಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜನತಾದಳ ಬಣಗಳ ವಿಲೀನಕ್ಕೆ ಮತ್ತೆ ಚಾಲನೆ</strong></p>.<p>ಬೆಂಗಳೂರು, ನ. 18– ಕೃಷಿ ಉತ್ಪನ್ನಗಳ ಬೆಲೆ ಕುಸಿತದಂಥ ವಿಷಯಗಳಲ್ಲಿ ರಾಜಕೀಯ ಕಾರಣದಿಂದ ದೂರ ಉಳಿಯುವುದು ರೈತರು, ಸಾಮಾನ್ಯ ಜನರ ಹಿತದೃಷ್ಟಿಯಿಂದ ಸರಿಯಲ್ಲ ಎಂದು ಜನತಾದಳ ಉಭಯ ಬಣಗಳು ಮತ್ತು ಈಗ ಪಕ್ಷೇತರರಾಗಿ ಕುಳಿತಿರುವ ಜನತಾದಳದ ಮಾಜಿ ಸದಸ್ಯರು, ಅಭಿಪ್ರಾಯಪಡುವ ಮೂಲಕ ಈ ಬಣಗಳ ವಿಲೀನಕ್ಕೆ ಮತ್ತಷ್ಟು ಚಾಲನೆ ಸಿಕ್ಕಂತಾಗಿದೆ.</p>.<p>ಕೇಂದ್ರದ ಮಾಜಿ ಸಚಿವ ಮತ್ತು ಜನತಾದಳ (ಎಸ್) ಧುರೀಣ ಎಸ್.ಆರ್. ಬೊಮ್ಮಾಯಿ ಅವರ ಮನೆಯಲ್ಲಿ ಶುಕ್ರವಾರ ರಾತ್ರಿ ಸುಮಾರು ಮೂರು ಗಂಟೆಗೂ ಹೆಚ್ಚುಕಾಲ ಈ ಎಲ್ಲ ಧುರೀಣರು ಒಂದೇ ಕಡೆ ಸೇರಿ ಚರ್ಚೆ ಮಾಡಿರುವುದರಿಂದ ಈ ಇಂಗಿತ ವ್ಯಕ್ತವಾಗಿದೆ.</p>.<p><strong>ಮರಕ್ಕೆ ಬಸ್ ಡಿಕ್ಕಿ: 8 ಸಾವು</strong></p>.<p>ಶಿವಮೊಗ್ಗ, ನ. 18– ಖಾಸಗಿ ಬಸ್ಸೊಂದು ರಸ್ತೆಬದಿಯ ಮರಕ್ಕೆ ಡಿಕ್ಕಿ ಹೊಡೆದಿದ್ದರಿಂದ ಓರ್ವ ಮಹಿಳೆ ಸೇರಿದಂತೆ 8 ಜನರು ಸ್ಥಳದಲ್ಲೇ ಸತ್ತು, 30 ಜನರು ಗಾಯಗೊಂಡ ಘಟನೆ ಶಿವಮೊಗ್ಗ–ಸಾಗರ ರಸ್ತೆಯ ಆನಂದಪುರ ಬಳಿ ಇಂದು ಮಧ್ಯಾಹ್ನ ಸಂಭವಿಸಿದೆ.</p>.<p>ಶಿವಮೊಗ್ಗದಿಂದ ಆನಂದಪುರಂ ಮಾರ್ಗವಾಗಿ ಸವಳಂಗಕ್ಕೆ ಹೋಗುತ್ತಿದ್ದ ‘ಆಂಜನೇಯ’ ಬಸ್ಸು, ಇನ್ನೊಂದು ಬಸ್ಸನ್ನು ಹಿಂದಕ್ಕೆ ಹಾಕುವ ಪ್ರಯತ್ನದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಅಪ್ಪಳಿಸಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>