<p><strong>ಕಾಶ್ಮೀರ: ಕದನ ವಿರಾಮದ ಮೊದಲ ದಿನವೇ 16 ಸಾವು</strong></p>.<p>ಶ್ರೀನಗರ, ನ. 28 (ಪಿಟಿಐ)– ಜಮ್ಮು ಮತ್ತು ಕಾಶ್ಮೀರದಲ್ಲಿ ಕೇಂದ್ರ ಸರ್ಕಾರ ಘೋಷಿಸಿರುವ ಒಂದು ತಿಂಗಳ ಕದನ ವಿರಾಮದ ಮೊದಲ ದಿನವಾದ ಇಂದು, ವಿವಿಧ ಕಡೆ ನಡೆದ ಹಿಂಸಾಚಾರಗಳಲ್ಲಿ ರಕ್ಷಣಾ ಪಡೆಯ ಐವರು, ಎಂಟು ಉಗ್ರರು ಸೇರಿದಂತೆ ಒಟ್ಟು 16 ಮಂದಿ ಮೃತಪಟ್ಟಿದ್ದಾರೆ.</p>.<p>ಇದರಿಂದಾಗಿ ಕೇಂದ್ರ ಸರ್ಕಾರವು ರಂಜಾನ್ ಅವಧಿಯಲ್ಲಿ ಏಕಪಕ್ಷೀಯವಾಗಿ ಘೋಷಣೆ ಮಾಡಿದ ಕದನ ವಿರಾಮಕ್ಕೆ ಉಗ್ರ ಸಂಘಟನೆಗಳು ಯಾವುದೇ ಅನುಕೂಲಕರ ಪ್ರತಿಕ್ರಿಯೆ ವ್ಯಕ್ತಪಡಿಸಿಲ್ಲ ಎಂಬುದು ಇಂದಿನ ಘಟನಾವಳಿಗಳಿಂದ ಸ್ಪಷ್ಟಪಟ್ಟಂತಾಗಿದೆ.</p>.<p><strong>ಮೆಕ್ಕೆಜೋಳ ಖರೀದಿ ಷರತ್ತು ಸಡಿಲಿಸಲು ಕೇಂದ್ರ ಅಸ್ತು</strong></p>.<p>ನವದೆಹಲಿ, ನ. 28– ಕರ್ನಾಟಕದಲ್ಲಿ ಮೆಕ್ಕೆಜೋಳ ಮತ್ತು ಭತ್ತದ ಖರೀದಿಗೆ ಭಾರತೀಯ ಆಹಾರ ನಿಗಮ ನಿಗದಿಪಡಿಸಿರುವ ಗುಣಮಟ್ಟದ ಷರತ್ತುಗಳನ್ನು ಸಡಿಲಿಸಲು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ.</p>.<p>ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ನೇತೃತ್ವದಲ್ಲಿ ರಾಜ್ಯದ ಸರ್ವಪಕ್ಷಗಳ ನಿಯೋಗ, ಕೇಂದ್ರ ಸಚಿವರನ್ನು ಭೇಟಿ ಮಾಡಿ ಕೃಷಿ ಉತ್ಪನ್ನಗಳ ಬೆಲೆ ಕುಸಿತದಿಂದ ರೈತರು ಎದುರಿಸುತ್ತಿರುವ ಸಮಸ್ಯೆ ವಿವರಿಸಿ ಸೂಕ್ತ ಪರಿಹಾರಕ್ಕೆ ಒತ್ತಾಯಿಸಿದಾಗ ಸಚಿವರು ಈ ಆಶ್ವಾಸನೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾಶ್ಮೀರ: ಕದನ ವಿರಾಮದ ಮೊದಲ ದಿನವೇ 16 ಸಾವು</strong></p>.<p>ಶ್ರೀನಗರ, ನ. 28 (ಪಿಟಿಐ)– ಜಮ್ಮು ಮತ್ತು ಕಾಶ್ಮೀರದಲ್ಲಿ ಕೇಂದ್ರ ಸರ್ಕಾರ ಘೋಷಿಸಿರುವ ಒಂದು ತಿಂಗಳ ಕದನ ವಿರಾಮದ ಮೊದಲ ದಿನವಾದ ಇಂದು, ವಿವಿಧ ಕಡೆ ನಡೆದ ಹಿಂಸಾಚಾರಗಳಲ್ಲಿ ರಕ್ಷಣಾ ಪಡೆಯ ಐವರು, ಎಂಟು ಉಗ್ರರು ಸೇರಿದಂತೆ ಒಟ್ಟು 16 ಮಂದಿ ಮೃತಪಟ್ಟಿದ್ದಾರೆ.</p>.<p>ಇದರಿಂದಾಗಿ ಕೇಂದ್ರ ಸರ್ಕಾರವು ರಂಜಾನ್ ಅವಧಿಯಲ್ಲಿ ಏಕಪಕ್ಷೀಯವಾಗಿ ಘೋಷಣೆ ಮಾಡಿದ ಕದನ ವಿರಾಮಕ್ಕೆ ಉಗ್ರ ಸಂಘಟನೆಗಳು ಯಾವುದೇ ಅನುಕೂಲಕರ ಪ್ರತಿಕ್ರಿಯೆ ವ್ಯಕ್ತಪಡಿಸಿಲ್ಲ ಎಂಬುದು ಇಂದಿನ ಘಟನಾವಳಿಗಳಿಂದ ಸ್ಪಷ್ಟಪಟ್ಟಂತಾಗಿದೆ.</p>.<p><strong>ಮೆಕ್ಕೆಜೋಳ ಖರೀದಿ ಷರತ್ತು ಸಡಿಲಿಸಲು ಕೇಂದ್ರ ಅಸ್ತು</strong></p>.<p>ನವದೆಹಲಿ, ನ. 28– ಕರ್ನಾಟಕದಲ್ಲಿ ಮೆಕ್ಕೆಜೋಳ ಮತ್ತು ಭತ್ತದ ಖರೀದಿಗೆ ಭಾರತೀಯ ಆಹಾರ ನಿಗಮ ನಿಗದಿಪಡಿಸಿರುವ ಗುಣಮಟ್ಟದ ಷರತ್ತುಗಳನ್ನು ಸಡಿಲಿಸಲು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ.</p>.<p>ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ನೇತೃತ್ವದಲ್ಲಿ ರಾಜ್ಯದ ಸರ್ವಪಕ್ಷಗಳ ನಿಯೋಗ, ಕೇಂದ್ರ ಸಚಿವರನ್ನು ಭೇಟಿ ಮಾಡಿ ಕೃಷಿ ಉತ್ಪನ್ನಗಳ ಬೆಲೆ ಕುಸಿತದಿಂದ ರೈತರು ಎದುರಿಸುತ್ತಿರುವ ಸಮಸ್ಯೆ ವಿವರಿಸಿ ಸೂಕ್ತ ಪರಿಹಾರಕ್ಕೆ ಒತ್ತಾಯಿಸಿದಾಗ ಸಚಿವರು ಈ ಆಶ್ವಾಸನೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>