<p><strong>ನರಸಿಂಹ ರಾವ್ ಬಂಧನದ ಆಜ್ಞೆಗೆ ಹೈಕೋರ್ಟ್ ತಡೆ</strong></p>.<p>ನವದೆಹಲಿ, ಅ. 4 (ಯುಎನ್ಐ, ಪಿಟಿಐ)– ಸೇಂಟ್ ಕಿಟ್ಸ್ ಫೋರ್ಜರಿ ಹಗರಣಕ್ಕೆ ಸಂಬಂಧಿಸಿ ಮಾಜಿ ಪ್ರಧಾನಿ ಪಿ.ವಿ.ನರಸಿಂಹ ರಾವ್ ಸೇರಿದಂತೆ ನಾಲ್ವರ ಬಂಧನಕ್ಕೆ ದೆಹಲಿ ನ್ಯಾಯಾಲಯ ಇಂದು ಜಾಮೀನುರಹಿತ ವಾರೆಂಟ್ ಹೊರಡಿಸಿತು. ಆದರೆ, ರಾವ್ ಅವರ ವಿರುದ್ಧ ಅ. 7ರವರೆಗೆ ಈ ಆದೇಶ ಜಾರಿಗೊಳಿಸದಂತೆ ದೆಹಲಿ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.</p>.<p>ಬಂಧನದ ಶಂಕೆಯಿಂದ ನರಸಿಂಹ ರಾವ್ ಅವರು ದೆಹಲಿ ಹೈಕೋರ್ಟಿಗೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿ ದ್ದರು. ಇಂದು ಸಂಜೆ ಈ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿದ ನ್ಯಾಯಮೂರ್ತಿ ಎಸ್.ಕೆ. ಮಹಾಜನ್ ಅವರು ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಅವರು ಜಾರಿಗೊಳಿಸಿದ್ದ ಜಾಮೀನುರಹಿತ ವಾರೆಂಟ್ಗೆ ಸೋಮವಾರದವರೆಗೆ ತಡೆಯಾಜ್ಞೆ ನೀಡಿದರು. ಸಿಬಿಐಗೆ ನೊಟೀಸ್ ಜಾರಿಗೊಳಿಸಿ ಅರ್ಜಿಯ ವಿಚಾರಣೆಯನ್ನು ಅ.7ಕ್ಕೆ ಮುಂದೂಡಿದರು.</p>.<p><strong>ಉಗ್ರಗಾಮಿಗಳ ವಶದಲ್ಲಿದ್ದ ಪಾಲಕ್ಕಾಡ್ ಜಿಲ್ಲಾಧಿಕಾರಿ ಬಿಡುಗಡೆ</strong></p>.<p>ಪಾಲಕ್ಕಾಡ್, ಅ. 4 (ಪಿಟಿಐ)– ಪಾಲಕ್ಕಾಡ್ ಜಿಲ್ಲಾಧಿಕಾರಿ ಡಬ್ಲ್ಯು.ಆರ್. ರೆಡ್ಡಿ ಅವರನ್ನು ಬೆಳಿಗ್ಗೆ 11ಗಂಟೆಯಿಂದ ದಿಗ್ಬಂಧನದಲ್ಲಿರಿಸಿದ್ದ ನಾಲ್ವರು ಸಶಸ್ತ್ರ ಶಂಕಿತ ಉಗ್ರಗಾಮಿಗಳ ಗುಂಪು ರಾತ್ರಿ 8 ಗಂಟೆಗೆ ಅವರನ್ನು ಬಿಡುಗಡೆ ಮಾಡಿತು.</p>.<p>ಉಗ್ರರ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರುವ ಆಶ್ವಾಸನೆಯನ್ನು ಜಿಲ್ಲಾಧಿ ಕಾರಿ ರೆಡ್ಡಿ ಅವರು ನೀಡಿದ ನಂತರ, ಅವರ ಕಚೇರಿಯಲ್ಲಿ ಮುಂಜಾನೆಯಿಂದ ಅವರನ್ನು ಹಿಡಿದಿಟ್ಟುಕೊಂಡಿದ್ದ ಉಗ್ರರು ಬಿಡುಗಡೆ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನರಸಿಂಹ ರಾವ್ ಬಂಧನದ ಆಜ್ಞೆಗೆ ಹೈಕೋರ್ಟ್ ತಡೆ</strong></p>.<p>ನವದೆಹಲಿ, ಅ. 4 (ಯುಎನ್ಐ, ಪಿಟಿಐ)– ಸೇಂಟ್ ಕಿಟ್ಸ್ ಫೋರ್ಜರಿ ಹಗರಣಕ್ಕೆ ಸಂಬಂಧಿಸಿ ಮಾಜಿ ಪ್ರಧಾನಿ ಪಿ.ವಿ.ನರಸಿಂಹ ರಾವ್ ಸೇರಿದಂತೆ ನಾಲ್ವರ ಬಂಧನಕ್ಕೆ ದೆಹಲಿ ನ್ಯಾಯಾಲಯ ಇಂದು ಜಾಮೀನುರಹಿತ ವಾರೆಂಟ್ ಹೊರಡಿಸಿತು. ಆದರೆ, ರಾವ್ ಅವರ ವಿರುದ್ಧ ಅ. 7ರವರೆಗೆ ಈ ಆದೇಶ ಜಾರಿಗೊಳಿಸದಂತೆ ದೆಹಲಿ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.</p>.<p>ಬಂಧನದ ಶಂಕೆಯಿಂದ ನರಸಿಂಹ ರಾವ್ ಅವರು ದೆಹಲಿ ಹೈಕೋರ್ಟಿಗೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿ ದ್ದರು. ಇಂದು ಸಂಜೆ ಈ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿದ ನ್ಯಾಯಮೂರ್ತಿ ಎಸ್.ಕೆ. ಮಹಾಜನ್ ಅವರು ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಅವರು ಜಾರಿಗೊಳಿಸಿದ್ದ ಜಾಮೀನುರಹಿತ ವಾರೆಂಟ್ಗೆ ಸೋಮವಾರದವರೆಗೆ ತಡೆಯಾಜ್ಞೆ ನೀಡಿದರು. ಸಿಬಿಐಗೆ ನೊಟೀಸ್ ಜಾರಿಗೊಳಿಸಿ ಅರ್ಜಿಯ ವಿಚಾರಣೆಯನ್ನು ಅ.7ಕ್ಕೆ ಮುಂದೂಡಿದರು.</p>.<p><strong>ಉಗ್ರಗಾಮಿಗಳ ವಶದಲ್ಲಿದ್ದ ಪಾಲಕ್ಕಾಡ್ ಜಿಲ್ಲಾಧಿಕಾರಿ ಬಿಡುಗಡೆ</strong></p>.<p>ಪಾಲಕ್ಕಾಡ್, ಅ. 4 (ಪಿಟಿಐ)– ಪಾಲಕ್ಕಾಡ್ ಜಿಲ್ಲಾಧಿಕಾರಿ ಡಬ್ಲ್ಯು.ಆರ್. ರೆಡ್ಡಿ ಅವರನ್ನು ಬೆಳಿಗ್ಗೆ 11ಗಂಟೆಯಿಂದ ದಿಗ್ಬಂಧನದಲ್ಲಿರಿಸಿದ್ದ ನಾಲ್ವರು ಸಶಸ್ತ್ರ ಶಂಕಿತ ಉಗ್ರಗಾಮಿಗಳ ಗುಂಪು ರಾತ್ರಿ 8 ಗಂಟೆಗೆ ಅವರನ್ನು ಬಿಡುಗಡೆ ಮಾಡಿತು.</p>.<p>ಉಗ್ರರ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರುವ ಆಶ್ವಾಸನೆಯನ್ನು ಜಿಲ್ಲಾಧಿ ಕಾರಿ ರೆಡ್ಡಿ ಅವರು ನೀಡಿದ ನಂತರ, ಅವರ ಕಚೇರಿಯಲ್ಲಿ ಮುಂಜಾನೆಯಿಂದ ಅವರನ್ನು ಹಿಡಿದಿಟ್ಟುಕೊಂಡಿದ್ದ ಉಗ್ರರು ಬಿಡುಗಡೆ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>