ನವದೆಹಲಿ, ಅ. 4 (ಯುಎನ್ಐ, ಪಿಟಿಐ)– ಸೇಂಟ್ ಕಿಟ್ಸ್ ಫೋರ್ಜರಿ ಹಗರಣಕ್ಕೆ ಸಂಬಂಧಿಸಿ ಮಾಜಿ ಪ್ರಧಾನಿ ಪಿ.ವಿ.ನರಸಿಂಹ ರಾವ್ ಸೇರಿದಂತೆ ನಾಲ್ವರ ಬಂಧನಕ್ಕೆ ದೆಹಲಿ ನ್ಯಾಯಾಲಯ ಇಂದು ಜಾಮೀನುರಹಿತ ವಾರೆಂಟ್ ಹೊರಡಿಸಿತು. ಆದರೆ, ರಾವ್ ಅವರ ವಿರುದ್ಧ ಅ. 7ರವರೆಗೆ ಈ ಆದೇಶ ಜಾರಿಗೊಳಿಸದಂತೆ ದೆಹಲಿ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.