ಸಿಪಿಪಿಅಧ್ಯಕ್ಷತೆ: ಪವಾರ್, ಪೈಲಟ್ ಸ್ಪರ್ಧೆ ತಪ್ಪಿಸಲು ಕೇಸರಿ ರಾಜಿಸೂತ್ರ
ನವದೆಹಲಿ, ಡಿ–25: ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಪಕ್ಷದ ಅಧ್ಯಕ್ಷ ಸೀತಾರಾಂ ಅವರನ್ನು ಸರ್ವಸಮ್ಮತ ಅಭ್ಯರ್ಥಿಯಾಗಿಸಿ, ಶರದ್ ಪವಾರ್ ಹಾಗೂ ಮನಮೋಹನ ಸಿಂಗ್ ಅವರನ್ನು ಸಂಸತ್ತಿನ ಉಭಯ ಸದನಗಳಲ್ಲಿ ನಾಯಕರನ್ನಾಗಿ ಮಾಡುವ ರಾಜಿಸೂತ್ರವೊಂದು ಕಾಂಗ್ರೆಸ್ ವಲಯದಲ್ಲಿ ಸಿದ್ಧವಾಗಿದ್ದು, ನಾಯಕತ್ವಕ್ಕೆ ನಡೆಯುವ ಸ್ಪರ್ಧೆಯನ್ನು ತಪ್ಪಿಸಲು ತೀವ್ರ ಯತ್ನ ಸಾಗಿದೆ.