<p>ಮಣಿಪುರ ಸಂಪುಟದ ರಾಜೀನಾಮೆ ವಿಧಾನಸಭೆ ಅಧಿವೇಶನ ಮುಂದಕ್ಕೆ</p>.<p>ಇಂಫಾಲ್, ಮಾರ್ಚ್ 26– ಮಣಿಪುರದ ಮುಖ್ಯಮಂತ್ರಿ ಶ್ರೀ ಮಹಮದ್ ಅಲಿಮುದ್ದೀನ್ ಅವರು ಇಂದು ತಮ್ಮ ಸಚಿವ ಸಂಪುಟದ ರಾಜೀನಾಮೆಯನ್ನು ರಾಜ್ಯಪಾಲ ಶ್ರೀ ಬಿ.ಕೆ. ನೆಹರೂ ಅವರಿಗೆ ಸಲ್ಲಿಸಿದರು.</p>.<p>ರಾಜ್ಯಪಾಲರು ರಾಜೀನಾಮೆಯನ್ನು ಅಂಗೀಕರಿಸಿದರು. ಬೇರೆ ವ್ಯವಸ್ಥೆ ಮಾಡುವ ತನಕ ಅಧಿಕಾರದಲ್ಲಿ ಮುಂದುವರೆಯು<br />ವಂತೆಯೂ ಶ್ರೀ ಮಹಮದ್ ಅಲಿಮುದ್ದೀನ್ ಅವರಿಗೆ ರಾಜ್ಯಪಾಲರು ಹೇಳಿದರು.</p>.<p>ವಿಧಾನಸಭಾಧ್ಯಕ್ಷ ಡಾ. ಎಲ್.ಚಂದ್ರಮಣಿ ಸಿಂಗ್ ಅವರು ಮುಖ್ಯಮಂತ್ರಿಗಳು ರಾಜೀನಾಮೆ ನೀಡಿದ ಸಂಗತಿಯನ್ನು ವಿಧಾನಸಭೆಗೆ ಮಧ್ಯಾಹ್ನ ತಿಳಿಸಿದರು. ಅಲ್ಲದೆ ವಿಧಾನಸಭೆಯ ಅಧಿವೇಶನವನ್ನು ಅನಿರ್ದಿಷ್ಟ<br />ಕಾಲ ಮುಂದಕ್ಕೆ ಹಾಕಿದರು.</p>.<p><strong>ಈ ವರ್ಷದಲ್ಲಿ ವಾರಾಹಿ ಯೋಜನೆಯ ಆರಂಭ</strong></p>.<p>ಬೆಂಗಳೂರು, ಮಾರ್ಚ್ 26– ವಾರಾಹಿ ಜಲವಿದ್ಯುತ್ ಯೋಜನೆಯನ್ನು ಈ ವರ್ಷದಲ್ಲಿ ಕೈಗೊಂಡು 1979ರ ವೇಳೆಗೆ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ ಎಂದು ಲೋಕೋಪಯೋಗಿ ಸಚಿವ ಶ್ರೀ ಎಚ್.ಎಂ.<br />ಚನ್ನಬಸಪ್ಪ ವಿಧಾನಸಭೆಯಲ್ಲಿ ತಿಳಿಸಿದರು.</p>.<p>ಶ್ರೀ ಯು.ಟಿ.ಫರೀದ್ ಅವರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಅದರಿಂದ ಉತ್ಪಾದನೆಯಾಗಬಹುದಾದ ವಿದ್ಯುತ್ ಪ್ರಮಾಣ ವರ್ಷವೊಂದಕ್ಕೆ 1,180 ದಶಲಕ್ಷ ಕಿಲೊವಾಟ್, ಆದಾಯ ಐದು ಕೋಟಿ ರೂಪಾಯಿ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಣಿಪುರ ಸಂಪುಟದ ರಾಜೀನಾಮೆ ವಿಧಾನಸಭೆ ಅಧಿವೇಶನ ಮುಂದಕ್ಕೆ</p>.<p>ಇಂಫಾಲ್, ಮಾರ್ಚ್ 26– ಮಣಿಪುರದ ಮುಖ್ಯಮಂತ್ರಿ ಶ್ರೀ ಮಹಮದ್ ಅಲಿಮುದ್ದೀನ್ ಅವರು ಇಂದು ತಮ್ಮ ಸಚಿವ ಸಂಪುಟದ ರಾಜೀನಾಮೆಯನ್ನು ರಾಜ್ಯಪಾಲ ಶ್ರೀ ಬಿ.ಕೆ. ನೆಹರೂ ಅವರಿಗೆ ಸಲ್ಲಿಸಿದರು.</p>.<p>ರಾಜ್ಯಪಾಲರು ರಾಜೀನಾಮೆಯನ್ನು ಅಂಗೀಕರಿಸಿದರು. ಬೇರೆ ವ್ಯವಸ್ಥೆ ಮಾಡುವ ತನಕ ಅಧಿಕಾರದಲ್ಲಿ ಮುಂದುವರೆಯು<br />ವಂತೆಯೂ ಶ್ರೀ ಮಹಮದ್ ಅಲಿಮುದ್ದೀನ್ ಅವರಿಗೆ ರಾಜ್ಯಪಾಲರು ಹೇಳಿದರು.</p>.<p>ವಿಧಾನಸಭಾಧ್ಯಕ್ಷ ಡಾ. ಎಲ್.ಚಂದ್ರಮಣಿ ಸಿಂಗ್ ಅವರು ಮುಖ್ಯಮಂತ್ರಿಗಳು ರಾಜೀನಾಮೆ ನೀಡಿದ ಸಂಗತಿಯನ್ನು ವಿಧಾನಸಭೆಗೆ ಮಧ್ಯಾಹ್ನ ತಿಳಿಸಿದರು. ಅಲ್ಲದೆ ವಿಧಾನಸಭೆಯ ಅಧಿವೇಶನವನ್ನು ಅನಿರ್ದಿಷ್ಟ<br />ಕಾಲ ಮುಂದಕ್ಕೆ ಹಾಕಿದರು.</p>.<p><strong>ಈ ವರ್ಷದಲ್ಲಿ ವಾರಾಹಿ ಯೋಜನೆಯ ಆರಂಭ</strong></p>.<p>ಬೆಂಗಳೂರು, ಮಾರ್ಚ್ 26– ವಾರಾಹಿ ಜಲವಿದ್ಯುತ್ ಯೋಜನೆಯನ್ನು ಈ ವರ್ಷದಲ್ಲಿ ಕೈಗೊಂಡು 1979ರ ವೇಳೆಗೆ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ ಎಂದು ಲೋಕೋಪಯೋಗಿ ಸಚಿವ ಶ್ರೀ ಎಚ್.ಎಂ.<br />ಚನ್ನಬಸಪ್ಪ ವಿಧಾನಸಭೆಯಲ್ಲಿ ತಿಳಿಸಿದರು.</p>.<p>ಶ್ರೀ ಯು.ಟಿ.ಫರೀದ್ ಅವರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಅದರಿಂದ ಉತ್ಪಾದನೆಯಾಗಬಹುದಾದ ವಿದ್ಯುತ್ ಪ್ರಮಾಣ ವರ್ಷವೊಂದಕ್ಕೆ 1,180 ದಶಲಕ್ಷ ಕಿಲೊವಾಟ್, ಆದಾಯ ಐದು ಕೋಟಿ ರೂಪಾಯಿ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>