<p><strong>ಪಾಕ್ ಸೈನ್ಯದ ಸಮ್ಮುಖದಲ್ಲೇ ಅಪಹೃತ ಭಾರತೀಯ ವಿಮಾನ ಭಸ್ಮ</strong></p>.<p>ನವದೆಹಲಿ, ಫೆ. 2– ಶನಿವಾರ ಪಾಕಿಸ್ತಾನಕ್ಕೆ ಅಪಹರಿಸಲಾಗಿದ್ದ ಭಾರತದ ಫಾಕರ್ ಫ್ರೆಂಡ್ಷಿಪ್ ವಿಮಾನವನ್ನು ಇಂದು ಲಾಹೋರ್ ವಿಮಾನ ನಿಲ್ದಾಣದಲ್ಲಿ ಪಾಕಿಸ್ತಾನಿ ಸೈನಿಕರು ಹಾಗೂ ವಿಮಾನ ಸಾರಿಗೆ ಶಾಖೆ ಅಧಿಕಾರಿಗಳ ಸಮ್ಮುಖದಲ್ಲೇ ಭಾರತೀಯ ವೇಳೆ ರಾತ್ರಿ 8.33 ಗಂಟೆಯಲ್ಲಿ ಸ್ಫೋಟಿಸಿ ಧ್ವಂಸ ಮಾಡಲಾಯಿತು.</p>.<p>ಸತತವಾಗಿ ಸಿಡಿದ ಮೂರು ಸ್ಫೋಟಗಳು ಹೆಚ್ಚು ಕಡಿಮೆ ಇಡೀ ವಿಮಾನವನ್ನು ಆಹುತಿ ತೆಗೆದುಕೊಂಡವೆಂದು ಹೇಳಲಾಗಿದೆ. ವಿಮಾನ ಪೂರ್ಣವಾಗಿ ಜಖಂಗೊಂಡಿದೆ.</p>.<p>***</p>.<p><strong>ಭಾರತಕ್ಕೆ ಪ್ರತೀ ವಾರ ಸಿಂಹಳದ ಎರಡು ಜೊತೆ ಕಣ್ಣುಗುಡ್ಡೆ</strong></p>.<p>ಬೆಂಗಳೂರು, ಫೆ. 2– ದಕ್ಷಿಣ ಭಾರತದಲ್ಲಿ ನೇತ್ರ ಶಸ್ತ್ರಚಿಕಿತ್ಸೆ ಇತಿಹಾಸದಲ್ಲೇ ಮೊತ್ತ ಮೊದಲ ಬಾರಿಗೆ, ಬೆಂಗಳೂರಿಗೆ ಭಾರತ– ಸಿಂಹಳ ಮೈತ್ರಿ ಮಂಡಲದ ಮೂಲಕ ಸಿಂಹಳದಿಂದ ಈ ವರ್ಷ ನೂರು ಕಣ್ಣು ಗುಡ್ಡೆಗಳು ದೊರೆಯಲಿವೆ.</p>.<p>ಇಂದು ಸಾಯಂಕಾಲ ರಾಜಭವನದಲ್ಲಿ, ಸಿಂಹಳದಿಂದ ನಿನ್ನೆ ಬಂದ ನಾಲ್ಕು ಕಣ್ಣು ಗುಡ್ಡೆಗಳನ್ನುಳ್ಳ ಸಣ್ಣಪೆಟ್ಟಿಗೆಯೊಂದನ್ನು ಬಿಡುಗಡೆ ಮಾಡುವ ಮೂಲಕ, ರಾಜ್ಯಪಾಲ ಶ್ರೀ ಧರ್ಮವೀರ ಅವರು ಈ ಯೋಜನೆಯನ್ನು ಸಾಂಕೇತಿಕವಾಗಿ ಉದ್ಘಾಟಿಸಿದರು. ಇವುಗಳಲ್ಲಿ ಒಂದು ಜೊತೆ ಗುಡ್ಡೆಗಳನ್ನು ಸೇಂಟ್ ಮಾರ್ತಾ ಆಸ್ಪತ್ರೆಗೂ ಇನ್ನೊಂದು ಜತೆಯನ್ನು ಮಿಂಟೊ ಕಣ್ಣಾಸ್ಪತ್ರೆಗೂ<br />ನೀಡಲಾಗುವುದು.</p>.<p>ಈ ಯೋಜನೆಯಂತೆ, ಈ ಎರಡೂ ಆಸ್ಪತ್ರೆಗಳಿಗೆ ಈ ವರ್ಷ, ಪ್ರತೀ ವಾರದಲ್ಲೂ ತಲಾ ಒಂದೊಂದು ಜೊತೆ ಕಣ್ಣುಗುಡ್ಡೆಗಳು ಸಿಂಹಳದಿಂದ ಬರಲಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಾಕ್ ಸೈನ್ಯದ ಸಮ್ಮುಖದಲ್ಲೇ ಅಪಹೃತ ಭಾರತೀಯ ವಿಮಾನ ಭಸ್ಮ</strong></p>.<p>ನವದೆಹಲಿ, ಫೆ. 2– ಶನಿವಾರ ಪಾಕಿಸ್ತಾನಕ್ಕೆ ಅಪಹರಿಸಲಾಗಿದ್ದ ಭಾರತದ ಫಾಕರ್ ಫ್ರೆಂಡ್ಷಿಪ್ ವಿಮಾನವನ್ನು ಇಂದು ಲಾಹೋರ್ ವಿಮಾನ ನಿಲ್ದಾಣದಲ್ಲಿ ಪಾಕಿಸ್ತಾನಿ ಸೈನಿಕರು ಹಾಗೂ ವಿಮಾನ ಸಾರಿಗೆ ಶಾಖೆ ಅಧಿಕಾರಿಗಳ ಸಮ್ಮುಖದಲ್ಲೇ ಭಾರತೀಯ ವೇಳೆ ರಾತ್ರಿ 8.33 ಗಂಟೆಯಲ್ಲಿ ಸ್ಫೋಟಿಸಿ ಧ್ವಂಸ ಮಾಡಲಾಯಿತು.</p>.<p>ಸತತವಾಗಿ ಸಿಡಿದ ಮೂರು ಸ್ಫೋಟಗಳು ಹೆಚ್ಚು ಕಡಿಮೆ ಇಡೀ ವಿಮಾನವನ್ನು ಆಹುತಿ ತೆಗೆದುಕೊಂಡವೆಂದು ಹೇಳಲಾಗಿದೆ. ವಿಮಾನ ಪೂರ್ಣವಾಗಿ ಜಖಂಗೊಂಡಿದೆ.</p>.<p>***</p>.<p><strong>ಭಾರತಕ್ಕೆ ಪ್ರತೀ ವಾರ ಸಿಂಹಳದ ಎರಡು ಜೊತೆ ಕಣ್ಣುಗುಡ್ಡೆ</strong></p>.<p>ಬೆಂಗಳೂರು, ಫೆ. 2– ದಕ್ಷಿಣ ಭಾರತದಲ್ಲಿ ನೇತ್ರ ಶಸ್ತ್ರಚಿಕಿತ್ಸೆ ಇತಿಹಾಸದಲ್ಲೇ ಮೊತ್ತ ಮೊದಲ ಬಾರಿಗೆ, ಬೆಂಗಳೂರಿಗೆ ಭಾರತ– ಸಿಂಹಳ ಮೈತ್ರಿ ಮಂಡಲದ ಮೂಲಕ ಸಿಂಹಳದಿಂದ ಈ ವರ್ಷ ನೂರು ಕಣ್ಣು ಗುಡ್ಡೆಗಳು ದೊರೆಯಲಿವೆ.</p>.<p>ಇಂದು ಸಾಯಂಕಾಲ ರಾಜಭವನದಲ್ಲಿ, ಸಿಂಹಳದಿಂದ ನಿನ್ನೆ ಬಂದ ನಾಲ್ಕು ಕಣ್ಣು ಗುಡ್ಡೆಗಳನ್ನುಳ್ಳ ಸಣ್ಣಪೆಟ್ಟಿಗೆಯೊಂದನ್ನು ಬಿಡುಗಡೆ ಮಾಡುವ ಮೂಲಕ, ರಾಜ್ಯಪಾಲ ಶ್ರೀ ಧರ್ಮವೀರ ಅವರು ಈ ಯೋಜನೆಯನ್ನು ಸಾಂಕೇತಿಕವಾಗಿ ಉದ್ಘಾಟಿಸಿದರು. ಇವುಗಳಲ್ಲಿ ಒಂದು ಜೊತೆ ಗುಡ್ಡೆಗಳನ್ನು ಸೇಂಟ್ ಮಾರ್ತಾ ಆಸ್ಪತ್ರೆಗೂ ಇನ್ನೊಂದು ಜತೆಯನ್ನು ಮಿಂಟೊ ಕಣ್ಣಾಸ್ಪತ್ರೆಗೂ<br />ನೀಡಲಾಗುವುದು.</p>.<p>ಈ ಯೋಜನೆಯಂತೆ, ಈ ಎರಡೂ ಆಸ್ಪತ್ರೆಗಳಿಗೆ ಈ ವರ್ಷ, ಪ್ರತೀ ವಾರದಲ್ಲೂ ತಲಾ ಒಂದೊಂದು ಜೊತೆ ಕಣ್ಣುಗುಡ್ಡೆಗಳು ಸಿಂಹಳದಿಂದ ಬರಲಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>