<p><strong>ರಾಜಸ್ಥಾನ ಟೀಮಿನ ಮೇಲೆ185 ರನ್ ಭಾರಿ ಜಯ</strong></p><p>ಜಯಪುರ, ಮಾರ್ಚ್ 27– ರಣಜಿ ಟ್ರೋಫಿ ವಿಜಯಿಗಳ ಪಟ್ಟಿಗೆ ಕರ್ನಾಟಕದ ಹೆಸರು ಇಂದು ಸೇರಿತು.</p><p>ಜಯಪುರದ ಸವಾಯ್ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಐದು ದಿನಗಳ ಫೈನಲ್ ಪಂದ್ಯದ ನಾಲ್ಕನೇ ದಿನದ ಟೀ ವಿರಾಮ ಅರ್ಧಗಂಟೆ ಇದ್ದಾಗ, ಕರ್ನಾಟಕ ಟೀಮಿನವರು ರಾಜಸ್ಥಾನದ ವಿರುದ್ಧ 185 ರನ್ಗಳ ಐತಿಹಾಸಿಕ ವಿಜಯ ಸಾಧಿಸಿದರು.</p><p>ಖಾಸಗಿ ಶಾಲೆಗಳ ಸಮರ್ಪಕ ನಿಯಂತ್ರಣಕ್ಕೆ ಖಚಿತ ಕ್ರಮ</p><p>ಬೆಂಗಳೂರು, ಮಾರ್ಚ್ 27– ಬಹುತೇಕ ಪ್ರಕರಣಗಳಲ್ಲಿ ಸಾರ್ವಜನಿಕರಿಗೆ ಕಿರಿಕಿರಿಯೂ ಆಡಳಿತಕ್ಕೆ ತಲೆನೋವಾಗಿಯೂ ಉಳಿದು, ಬೆಳೆದಿರುವ ಕರ್ನಾಟಕದ ಖಾಸಗಿ ಶಿಕ್ಷಣ ಶಾಲಾ ವ್ಯವಸ್ಥೆಯು ಶ್ರೀ ಜೆ.ಬಿ. ಮಲ್ಲಾರಾಧ್ಯ ಅವರ ಸಮಿತಿ ತಯಾರಿಸಿದ ಕರಡು ವಿಧೇಯಕದ ಪ್ರಕಾರ ತೀವ್ರ ನಿಯಂತ್ರಣದ ಹದ್ದುಬಸ್ತಿಗೆ ಒಳಪಡುತ್ತದೆ.</p><p>ಶಾಲಾ ಶಿಕ್ಷಣ ವ್ಯವಸ್ಥೆಯ ಬಗ್ಗೆ ಕಳೆದ ಹಲವಾರು ವರ್ಷಗಳಿಂದ ವಿಧಾನಮಂಡಲದ ಹೊರಗೂ ಒಳಗೂ ಕೇಳಿಬರುತ್ತಿರುವ ಟೀಕೆಗಳನ್ನು ಅನುಸರಿಸಿ, ಈ ವ್ಯವಸ್ಥೆಯ ಸುಧಾರಣೆಗೆ ಸೂಚಿಸಲು ಕಳೆದ ವರ್ಷ ರಚಿತವಾದ ಹಿರಿಯ ತಜ್ಞ ಶ್ರೀ ಮಲ್ಲಾರಾಧ್ಯ ನೇತೃತ್ವದ ಸಮಿತಿಯು, ಸುಮಾರು 200 ಪುಟಗಳ ವರದಿಯನ್ನು ತಯಾರಿಸಿದೆ.</p><p>ವಿಧಾನಮಂಡಲದ ಮುಂದೆ ಬರುವುದ<br>ಕ್ಕಿಂತ ಮುನ್ನ ವರದಿಯ ಪ್ರಕಟಣೆ ಸಾಧುವಲ್ಲ ಎಂಬ ನಿಲುವನ್ನು ಸರ್ಕಾರ ತಳೆದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಜಸ್ಥಾನ ಟೀಮಿನ ಮೇಲೆ185 ರನ್ ಭಾರಿ ಜಯ</strong></p><p>ಜಯಪುರ, ಮಾರ್ಚ್ 27– ರಣಜಿ ಟ್ರೋಫಿ ವಿಜಯಿಗಳ ಪಟ್ಟಿಗೆ ಕರ್ನಾಟಕದ ಹೆಸರು ಇಂದು ಸೇರಿತು.</p><p>ಜಯಪುರದ ಸವಾಯ್ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಐದು ದಿನಗಳ ಫೈನಲ್ ಪಂದ್ಯದ ನಾಲ್ಕನೇ ದಿನದ ಟೀ ವಿರಾಮ ಅರ್ಧಗಂಟೆ ಇದ್ದಾಗ, ಕರ್ನಾಟಕ ಟೀಮಿನವರು ರಾಜಸ್ಥಾನದ ವಿರುದ್ಧ 185 ರನ್ಗಳ ಐತಿಹಾಸಿಕ ವಿಜಯ ಸಾಧಿಸಿದರು.</p><p>ಖಾಸಗಿ ಶಾಲೆಗಳ ಸಮರ್ಪಕ ನಿಯಂತ್ರಣಕ್ಕೆ ಖಚಿತ ಕ್ರಮ</p><p>ಬೆಂಗಳೂರು, ಮಾರ್ಚ್ 27– ಬಹುತೇಕ ಪ್ರಕರಣಗಳಲ್ಲಿ ಸಾರ್ವಜನಿಕರಿಗೆ ಕಿರಿಕಿರಿಯೂ ಆಡಳಿತಕ್ಕೆ ತಲೆನೋವಾಗಿಯೂ ಉಳಿದು, ಬೆಳೆದಿರುವ ಕರ್ನಾಟಕದ ಖಾಸಗಿ ಶಿಕ್ಷಣ ಶಾಲಾ ವ್ಯವಸ್ಥೆಯು ಶ್ರೀ ಜೆ.ಬಿ. ಮಲ್ಲಾರಾಧ್ಯ ಅವರ ಸಮಿತಿ ತಯಾರಿಸಿದ ಕರಡು ವಿಧೇಯಕದ ಪ್ರಕಾರ ತೀವ್ರ ನಿಯಂತ್ರಣದ ಹದ್ದುಬಸ್ತಿಗೆ ಒಳಪಡುತ್ತದೆ.</p><p>ಶಾಲಾ ಶಿಕ್ಷಣ ವ್ಯವಸ್ಥೆಯ ಬಗ್ಗೆ ಕಳೆದ ಹಲವಾರು ವರ್ಷಗಳಿಂದ ವಿಧಾನಮಂಡಲದ ಹೊರಗೂ ಒಳಗೂ ಕೇಳಿಬರುತ್ತಿರುವ ಟೀಕೆಗಳನ್ನು ಅನುಸರಿಸಿ, ಈ ವ್ಯವಸ್ಥೆಯ ಸುಧಾರಣೆಗೆ ಸೂಚಿಸಲು ಕಳೆದ ವರ್ಷ ರಚಿತವಾದ ಹಿರಿಯ ತಜ್ಞ ಶ್ರೀ ಮಲ್ಲಾರಾಧ್ಯ ನೇತೃತ್ವದ ಸಮಿತಿಯು, ಸುಮಾರು 200 ಪುಟಗಳ ವರದಿಯನ್ನು ತಯಾರಿಸಿದೆ.</p><p>ವಿಧಾನಮಂಡಲದ ಮುಂದೆ ಬರುವುದ<br>ಕ್ಕಿಂತ ಮುನ್ನ ವರದಿಯ ಪ್ರಕಟಣೆ ಸಾಧುವಲ್ಲ ಎಂಬ ನಿಲುವನ್ನು ಸರ್ಕಾರ ತಳೆದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>