<p>ಬೆಂಗಳೂರು, ಮೇ 24– ಶೇಕಡ 20ಕ್ಕಿಂತ ಕಡಿಮೆ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಬರುವ ಖಾಸಗಿ ಶಾಲೆಗಳಿಗೆ ವಿಧಿಸಲಾಗುತ್ತಿರುವ ದಂಡವನ್ನು ರದ್ದುಗೊಳಿಸುವ ಸಾಧ್ಯತೆ ಬಗ್ಗೆ ಸರ್ಕಾರ ಪರಿಶೀಲಿಸುವುದು ಎಂದು ಶಾಲಾ ಶಿಕ್ಷಣ ರಾಜ್ಯ ಮಂತ್ರಿ ಈವಾವಾಜ್ ಅವರು ಇಂದು ವಿಧಾನ ಪರಿಷತ್ತಿನಲ್ಲಿ ತಿಳಿಸಿದರು.</p><p>ಈ ಸಂಬಂಧದಲ್ಲಿ ಮಳ್ಳೂರು ಆನಂದರಾಯರು ಎತ್ತಿದ ಚರ್ಚೆಗೆ ಉತ್ತರ ನೀಡಿದ ವಾಜ್ ಅವರು, ತೀರಾ ಕಳಪೆ ಫಲಿತಾಂಶ ಬರುವ ಶಾಲೆಗಳನ್ನು ಸುಧಾರಿಸಲು ಕ್ರಮಗಳನ್ನು ರೂಪಿಸಲಾಗುತ್ತಿದೆ ಎಂದರು.</p><p>ಪರೀಕ್ಷೆಗಳಲ್ಲಿ ಕಾಪಿ ಹೊಡೆಯುವ ಪದ್ಧತಿ ತಪ್ಪಿಸಲು ಪರೀಕ್ಷೆಗಾಗಿ ಒಂದು ಶಾಲೆಯ ವಿದ್ಯಾರ್ಥಿಗಳನ್ನು ಇನ್ನೊಂದು ಕೇಂದ್ರಕ್ಕೆ ಕಳುಹಿಸುವ, ಶಿಕ್ಷಕರನ್ನು ಪರೀಕ್ಷಕರಾಗಿ ಬೇರೆ ಶಾಲೆಗಳಿಗೆ ಕಳುಹಿಸುವ ಪ್ರಯೋಗಗಳು ನಡೆಯುತ್ತಿವೆ ಎಂದರು.</p><p>ಆನಂದರಾಯರು ತಮ್ಮ ಭಾಷಣದಲ್ಲಿ, ಪರೀಕ್ಷಾ ದಂಡಗಳ ಹೆದರಿಕೆಯಿಂದಾಗಿ ಖಾಸಗಿ ಶಾಲೆಗಳಲ್ಲಿ ಕಾಪಿ ಹೊಡೆದು ವಿದ್ಯಾರ್ಥಿಗಳನ್ನು ತೇರ್ಗಡೆಗೊಳಿಸುವ ಅಭ್ಯಾಸ ಬೆಳೆಯುತ್ತಿದೆ ಎಂದು ಆಪಾದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು, ಮೇ 24– ಶೇಕಡ 20ಕ್ಕಿಂತ ಕಡಿಮೆ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಬರುವ ಖಾಸಗಿ ಶಾಲೆಗಳಿಗೆ ವಿಧಿಸಲಾಗುತ್ತಿರುವ ದಂಡವನ್ನು ರದ್ದುಗೊಳಿಸುವ ಸಾಧ್ಯತೆ ಬಗ್ಗೆ ಸರ್ಕಾರ ಪರಿಶೀಲಿಸುವುದು ಎಂದು ಶಾಲಾ ಶಿಕ್ಷಣ ರಾಜ್ಯ ಮಂತ್ರಿ ಈವಾವಾಜ್ ಅವರು ಇಂದು ವಿಧಾನ ಪರಿಷತ್ತಿನಲ್ಲಿ ತಿಳಿಸಿದರು.</p><p>ಈ ಸಂಬಂಧದಲ್ಲಿ ಮಳ್ಳೂರು ಆನಂದರಾಯರು ಎತ್ತಿದ ಚರ್ಚೆಗೆ ಉತ್ತರ ನೀಡಿದ ವಾಜ್ ಅವರು, ತೀರಾ ಕಳಪೆ ಫಲಿತಾಂಶ ಬರುವ ಶಾಲೆಗಳನ್ನು ಸುಧಾರಿಸಲು ಕ್ರಮಗಳನ್ನು ರೂಪಿಸಲಾಗುತ್ತಿದೆ ಎಂದರು.</p><p>ಪರೀಕ್ಷೆಗಳಲ್ಲಿ ಕಾಪಿ ಹೊಡೆಯುವ ಪದ್ಧತಿ ತಪ್ಪಿಸಲು ಪರೀಕ್ಷೆಗಾಗಿ ಒಂದು ಶಾಲೆಯ ವಿದ್ಯಾರ್ಥಿಗಳನ್ನು ಇನ್ನೊಂದು ಕೇಂದ್ರಕ್ಕೆ ಕಳುಹಿಸುವ, ಶಿಕ್ಷಕರನ್ನು ಪರೀಕ್ಷಕರಾಗಿ ಬೇರೆ ಶಾಲೆಗಳಿಗೆ ಕಳುಹಿಸುವ ಪ್ರಯೋಗಗಳು ನಡೆಯುತ್ತಿವೆ ಎಂದರು.</p><p>ಆನಂದರಾಯರು ತಮ್ಮ ಭಾಷಣದಲ್ಲಿ, ಪರೀಕ್ಷಾ ದಂಡಗಳ ಹೆದರಿಕೆಯಿಂದಾಗಿ ಖಾಸಗಿ ಶಾಲೆಗಳಲ್ಲಿ ಕಾಪಿ ಹೊಡೆದು ವಿದ್ಯಾರ್ಥಿಗಳನ್ನು ತೇರ್ಗಡೆಗೊಳಿಸುವ ಅಭ್ಯಾಸ ಬೆಳೆಯುತ್ತಿದೆ ಎಂದು ಆಪಾದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>