ಅದರ ಇತರ ಪ್ರಮುಖ ಅಂಶಗಳು: ಅಭಾವ ಪೀಡಿತ ಪ್ರತಿ ತಾಲ್ಲೂಕಿಗೆ ಒಂದು ಸಾವಿರ ನೀರಾವರಿ ಬಾವಿ ನಿರ್ಮಾಣ ಬೆಳೆವಿಮೆ ಯೋಜನೆ, ಸಣ್ಣ ಕೈಗಾರಿಕೆಗಳಿಗೆ ಪ್ರೋತ್ಸಾಹ, ಮತ್ಸೋದ್ಯಮಕ್ಕೆ ಪ್ರೋತ್ಸಾಹ, ಸಂಚಾರಿ ಆಸ್ಪತ್ರೆಗಳ ಸ್ಥಾಪನೆ. ಆಕ್ಟ್ರಾಯ್ ರದ್ದು. ಆಹಾರ ಧಾನ್ಯಗಳ ಮೇಲಿನ ಮಾರಾಟ ತೆರಿಗೆ ರದ್ದು. ಮಂತ್ರಿಗಳು ಅಧಿಕಾರಿಗಳು ಮುಂತಾದವರ ವಿರುದ್ಧ ಬರುವವರ ದೂರುಗಳನ್ನು ವಿಚಾರಿಸಲು ಆಡಳಿತಾತ್ಮಕ ಸಮಿತಿ ರಚನೆ.