ಶನಿವಾರ, 30 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: ಅಶ್ರುವಾಯು, ಲಾಠಿಪ್ರಹಾರ

Published 12 ಸೆಪ್ಟೆಂಬರ್ 2023, 23:30 IST
Last Updated 12 ಸೆಪ್ಟೆಂಬರ್ 2023, 23:30 IST
ಅಕ್ಷರ ಗಾತ್ರ

ಅಶ್ರುವಾಯು, ಲಾಠಿಪ್ರಹಾರ

ಬೆಂಗಳೂರು, ಸೆ. 12– ಸೆಂಟ್ರಲ್‌ ಕಾಲೇಜಿನ ಸುತ್ತಮುತ್ತಲಿನ ರಸ್ತೆಗಳಲ್ಲಿ ನಗರದ ಪೊಲೀಸರು ನಾಲ್ಕು ಬಾರಿ ಅಶ್ರುವಾಯು ಮತ್ತು ಹಲವಾರು ಬಾರಿ ಲಾಠಿಪ್ರಹಾರ ಮಾಡಿ, ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿದ್ದ ಉದ್ರಿಕ್ತ ವಿದ್ಯಾರ್ಥಿಗಳ ಗುಂಪನ್ನು ಚದುರಿಸಿದರು.

ಕಳೆದ ವಾರ ಹಾಸನದಲ್ಲಿ ನಡೆದ ಘಟನೆಯ ಬಗ್ಗೆ ನ್ಯಾಯಾಂಗ ವಿಚಾರಣೆ ಆಗಬೇಕೆಂದು ಒತ್ತಾಯಿಸಿರುವ ವಿದ್ಯಾರ್ಥಿಗಳ ಚಳವಳಿಯು ಮೂರನೇ ದಿನವಾದ ಇಂದು ವಿಕೋಪ ಹಂತಕ್ಕೆ ಮುಟ್ಟಿತು.

ವಿದ್ಯಾರ್ಥಿಗಳಿಂದ ಸತತ ಕಲ್ಲಿನ ಸುರಿಮಳೆ, ಪೊಲೀಸರಿಂದ ಪದೇ ಪದೇ ಲಾಠಿಪ್ರಹಾರ ನಡೆದು, ಸೆಂಟ್ರಲ್ ಕಾಲೇಜಿನ ಪ್ರದೇಶ ಕಾಳಗದ ಕಣದಂತೆ ಕಂಡುಬಂತು. ಘಟನೆಯ ಸಂಬಂಧ ಪೊಲೀಸರು 47 ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ.

***

ಸರ್ಕಾರಿ ಉದ್ಯಮ ಸಮಿತಿ ಅಧ್ಯಕ್ಷ ಬಿ.ಭಾಸ್ಕರ ಶೆಟ್ಟಿ ಅವರ ರಾಜೀನಾಮೆ

ಬೆಂಗಳೂರು, ಸೆ. 12– ವಿಧಾನಸಭೆಯಲ್ಲಿ ಸಮಿತಿಯ ವರದಿಯ ಮೇಲೆ ನಡೆದ ಚರ್ಚೆಯಲ್ಲಿ ಕೆಲ ಸದಸ್ಯರು ಸಮಿತಿಯ ಸದಸ್ಯರ ಮೇಲೆ ದೋಷಾರೋಪಣೆ ಮಾಡಿದ ಕಾರಣ ನೊಂದ ವಿಧಾನಮಂಡಲದ ಸರ್ಕಾರಿ ಉದ್ಯಮಗಳ ಸಮಿತಿಯ ಅಧ್ಯಕ್ಷ ಬಿ.ಭಾಸ್ಕರ ಶೆಟ್ಟಿ ಅವರು, ಸಮಿತಿಯ ಸದಸ್ಯತ್ವ ಹಾಗೂ ಅಧ್ಯಕ್ಷ ಪದವಿಗೆ ರಾಜೀನಾಮೆ ನೀಡಿದ್ದಾರೆ.

ಇಂದಿನಿಂದ ಜಾರಿಗೆ ಬರುವ ರಾಜೀನಾಮೆಯನ್ನು ಶ್ರೀಯುತರು ಇಂದು ವಿಧಾನಸಭಾಧ್ಯಕ್ಷರಿಗೆ ಸಲ್ಲಿಸಿದರು.

ಕೃಷಿ– ಕೈಗಾರಿಕೆ ಕಾರ್ಪೊರೇಷನ್‌ ವ್ಯವಹಾರದ ಬಗ್ಗೆ ಸಮಿತಿ ಸಲ್ಲಿಸಿದ ವರದಿ ಬಗ್ಗೆ ನಿನ್ನೆ ತಾನೇ ವಿಧಾನಸಭೆಯಲ್ಲಿ ಚರ್ಚೆ ಮುಗಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT