<p><strong>ಅಶ್ರುವಾಯು, ಲಾಠಿಪ್ರಹಾರ</strong></p><p><strong>ಬೆಂಗಳೂರು, ಸೆ. 12</strong>– ಸೆಂಟ್ರಲ್ ಕಾಲೇಜಿನ ಸುತ್ತಮುತ್ತಲಿನ ರಸ್ತೆಗಳಲ್ಲಿ ನಗರದ ಪೊಲೀಸರು ನಾಲ್ಕು ಬಾರಿ ಅಶ್ರುವಾಯು ಮತ್ತು ಹಲವಾರು ಬಾರಿ ಲಾಠಿಪ್ರಹಾರ ಮಾಡಿ, ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿದ್ದ ಉದ್ರಿಕ್ತ ವಿದ್ಯಾರ್ಥಿಗಳ ಗುಂಪನ್ನು ಚದುರಿಸಿದರು.</p><p>ಕಳೆದ ವಾರ ಹಾಸನದಲ್ಲಿ ನಡೆದ ಘಟನೆಯ ಬಗ್ಗೆ ನ್ಯಾಯಾಂಗ ವಿಚಾರಣೆ ಆಗಬೇಕೆಂದು ಒತ್ತಾಯಿಸಿರುವ ವಿದ್ಯಾರ್ಥಿಗಳ ಚಳವಳಿಯು ಮೂರನೇ ದಿನವಾದ ಇಂದು ವಿಕೋಪ ಹಂತಕ್ಕೆ ಮುಟ್ಟಿತು.</p><p>ವಿದ್ಯಾರ್ಥಿಗಳಿಂದ ಸತತ ಕಲ್ಲಿನ ಸುರಿಮಳೆ, ಪೊಲೀಸರಿಂದ ಪದೇ ಪದೇ ಲಾಠಿಪ್ರಹಾರ ನಡೆದು, ಸೆಂಟ್ರಲ್ ಕಾಲೇಜಿನ ಪ್ರದೇಶ ಕಾಳಗದ ಕಣದಂತೆ ಕಂಡುಬಂತು. ಘಟನೆಯ ಸಂಬಂಧ ಪೊಲೀಸರು 47 ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ.</p><p>***</p><p><strong>ಸರ್ಕಾರಿ ಉದ್ಯಮ ಸಮಿತಿ ಅಧ್ಯಕ್ಷ ಬಿ.ಭಾಸ್ಕರ ಶೆಟ್ಟಿ ಅವರ ರಾಜೀನಾಮೆ</strong></p><p><strong>ಬೆಂಗಳೂರು, ಸೆ. 12</strong>– ವಿಧಾನಸಭೆಯಲ್ಲಿ ಸಮಿತಿಯ ವರದಿಯ ಮೇಲೆ ನಡೆದ ಚರ್ಚೆಯಲ್ಲಿ ಕೆಲ ಸದಸ್ಯರು ಸಮಿತಿಯ ಸದಸ್ಯರ ಮೇಲೆ ದೋಷಾರೋಪಣೆ ಮಾಡಿದ ಕಾರಣ ನೊಂದ ವಿಧಾನಮಂಡಲದ ಸರ್ಕಾರಿ ಉದ್ಯಮಗಳ ಸಮಿತಿಯ ಅಧ್ಯಕ್ಷ ಬಿ.ಭಾಸ್ಕರ ಶೆಟ್ಟಿ ಅವರು, ಸಮಿತಿಯ ಸದಸ್ಯತ್ವ ಹಾಗೂ ಅಧ್ಯಕ್ಷ ಪದವಿಗೆ ರಾಜೀನಾಮೆ ನೀಡಿದ್ದಾರೆ.</p><p>ಇಂದಿನಿಂದ ಜಾರಿಗೆ ಬರುವ ರಾಜೀನಾಮೆಯನ್ನು ಶ್ರೀಯುತರು ಇಂದು ವಿಧಾನಸಭಾಧ್ಯಕ್ಷರಿಗೆ ಸಲ್ಲಿಸಿದರು.</p><p>ಕೃಷಿ– ಕೈಗಾರಿಕೆ ಕಾರ್ಪೊರೇಷನ್ ವ್ಯವಹಾರದ ಬಗ್ಗೆ ಸಮಿತಿ ಸಲ್ಲಿಸಿದ ವರದಿ ಬಗ್ಗೆ ನಿನ್ನೆ ತಾನೇ ವಿಧಾನಸಭೆಯಲ್ಲಿ ಚರ್ಚೆ ಮುಗಿಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಶ್ರುವಾಯು, ಲಾಠಿಪ್ರಹಾರ</strong></p><p><strong>ಬೆಂಗಳೂರು, ಸೆ. 12</strong>– ಸೆಂಟ್ರಲ್ ಕಾಲೇಜಿನ ಸುತ್ತಮುತ್ತಲಿನ ರಸ್ತೆಗಳಲ್ಲಿ ನಗರದ ಪೊಲೀಸರು ನಾಲ್ಕು ಬಾರಿ ಅಶ್ರುವಾಯು ಮತ್ತು ಹಲವಾರು ಬಾರಿ ಲಾಠಿಪ್ರಹಾರ ಮಾಡಿ, ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿದ್ದ ಉದ್ರಿಕ್ತ ವಿದ್ಯಾರ್ಥಿಗಳ ಗುಂಪನ್ನು ಚದುರಿಸಿದರು.</p><p>ಕಳೆದ ವಾರ ಹಾಸನದಲ್ಲಿ ನಡೆದ ಘಟನೆಯ ಬಗ್ಗೆ ನ್ಯಾಯಾಂಗ ವಿಚಾರಣೆ ಆಗಬೇಕೆಂದು ಒತ್ತಾಯಿಸಿರುವ ವಿದ್ಯಾರ್ಥಿಗಳ ಚಳವಳಿಯು ಮೂರನೇ ದಿನವಾದ ಇಂದು ವಿಕೋಪ ಹಂತಕ್ಕೆ ಮುಟ್ಟಿತು.</p><p>ವಿದ್ಯಾರ್ಥಿಗಳಿಂದ ಸತತ ಕಲ್ಲಿನ ಸುರಿಮಳೆ, ಪೊಲೀಸರಿಂದ ಪದೇ ಪದೇ ಲಾಠಿಪ್ರಹಾರ ನಡೆದು, ಸೆಂಟ್ರಲ್ ಕಾಲೇಜಿನ ಪ್ರದೇಶ ಕಾಳಗದ ಕಣದಂತೆ ಕಂಡುಬಂತು. ಘಟನೆಯ ಸಂಬಂಧ ಪೊಲೀಸರು 47 ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ.</p><p>***</p><p><strong>ಸರ್ಕಾರಿ ಉದ್ಯಮ ಸಮಿತಿ ಅಧ್ಯಕ್ಷ ಬಿ.ಭಾಸ್ಕರ ಶೆಟ್ಟಿ ಅವರ ರಾಜೀನಾಮೆ</strong></p><p><strong>ಬೆಂಗಳೂರು, ಸೆ. 12</strong>– ವಿಧಾನಸಭೆಯಲ್ಲಿ ಸಮಿತಿಯ ವರದಿಯ ಮೇಲೆ ನಡೆದ ಚರ್ಚೆಯಲ್ಲಿ ಕೆಲ ಸದಸ್ಯರು ಸಮಿತಿಯ ಸದಸ್ಯರ ಮೇಲೆ ದೋಷಾರೋಪಣೆ ಮಾಡಿದ ಕಾರಣ ನೊಂದ ವಿಧಾನಮಂಡಲದ ಸರ್ಕಾರಿ ಉದ್ಯಮಗಳ ಸಮಿತಿಯ ಅಧ್ಯಕ್ಷ ಬಿ.ಭಾಸ್ಕರ ಶೆಟ್ಟಿ ಅವರು, ಸಮಿತಿಯ ಸದಸ್ಯತ್ವ ಹಾಗೂ ಅಧ್ಯಕ್ಷ ಪದವಿಗೆ ರಾಜೀನಾಮೆ ನೀಡಿದ್ದಾರೆ.</p><p>ಇಂದಿನಿಂದ ಜಾರಿಗೆ ಬರುವ ರಾಜೀನಾಮೆಯನ್ನು ಶ್ರೀಯುತರು ಇಂದು ವಿಧಾನಸಭಾಧ್ಯಕ್ಷರಿಗೆ ಸಲ್ಲಿಸಿದರು.</p><p>ಕೃಷಿ– ಕೈಗಾರಿಕೆ ಕಾರ್ಪೊರೇಷನ್ ವ್ಯವಹಾರದ ಬಗ್ಗೆ ಸಮಿತಿ ಸಲ್ಲಿಸಿದ ವರದಿ ಬಗ್ಗೆ ನಿನ್ನೆ ತಾನೇ ವಿಧಾನಸಭೆಯಲ್ಲಿ ಚರ್ಚೆ ಮುಗಿಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>