<p><strong>ಸಾಹಿತ್ಯ ಗೋಷ್ಠಿ: ಜೊಳ್ಳು ಸೃಷ್ಟಿ ಬಗ್ಗೆ ವಿಮರ್ಶಕರ ಟೀಕೆ<br />ಬೆಂಗಳೂರು, ಡಿ. 28–</strong> ಕನ್ನಡ ಸಾಹಿತ್ಯ ವೃಕ್ಷದ ವಿವಿಧ ಕೊಂಬೆಗಳ ಬೆಳವಣಿಗೆಯಲ್ಲಿ ಕಂಡ ಮಂಕು–ಮೆರಗಿನ ಚಿತ್ರವನ್ನು ಇಂದು ಬೆಳ್ಳಾವೆ ವೆಂಕಟನಾರಣಪ್ಪ ಮಂಟಪದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ನಡೆದ ಸಾಹಿತ್ಯ ಗೋಷ್ಠಿ ಬಿಚ್ಚು ಮಾತಿನಲ್ಲಿ ವಿಮರ್ಶಿಸಿತು.</p>.<p>ಶ್ರೀ ಕೆ.ಡಿ. ಕುರ್ತಕೋಟಿ ಅವರ ಅಧ್ಯಕ್ಷತೆಯಲ್ಲಿ ಶ್ರೀ ಎಲ್.ಎಸ್. ಶೇಷಗಿರಿ ರಾವ್ ಅವರ ನಿರ್ದೇಶನದಲ್ಲಿ ನಡೆದ ಈ ವಿಚಾರಶೀಲ ವಿಚಾರ ಸಂಕಿರಣದಲ್ಲಿ ಸಾಹಿತ್ಯದ ನಾನಾ ಮುಖಗಳಾದ ಕಾವ್ಯ, ನಾಟಕ, ಕಾದಂಬರಿ, ಸಣ್ಣಕತೆ, ಜನಪದ ಸಾಹಿತ್ಯ ಮತ್ತು ಸಂಶೋಧನೆಗಳ ವಿಮರ್ಶೆ ನಡೆಯಿತು.</p>.<p><strong>ಕ್ಷೀರಪ್ರಾಶನದ ಜೊತೆಗೆ ಕನ್ನಡದ ಪ್ರಾಶನವೂ ಆಗಲಿ<br />ಬೆಂಗಳೂರು, ಡಿ. 28– </strong>ಆಡಳಿತ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಕನ್ನಡಕ್ಕೆ ‘ಸಲ್ಲತೊಡಗಿರುವ’ ಅಗ್ರಪೂಜೆ, ಪರಭಾಷೆಗಳ ಯಾಜಮಾನ್ಯಕ್ಕೆ ಬಲಿಯಾಗದಿರಲಿ ಎಂಬ ಕಳಕಳಿ ಇಂದು ಸಾಹಿತ್ಯ ಸಮ್ಮೇಳನದ ಮಹಿಳಾ ಗೋಷ್ಠಿಯಿಂದ ಚಿಮ್ಮಿತು.</p>.<p>‘ಸೋದರ ಭಾಷೆಗಳನ್ನು ಕಲಿಯುವುದರಲ್ಲಿ ತಪ್ಪಿಲ್ಲ. ಆದರೆ, ಅವುಗಳು ಮಿತ್ರರಂತೆ ಬರಲಿ, ಯಜಮಾನರಂತಲ್ಲ’ ಎಂದು ಗೋಷ್ಠಿಯ ಅಧ್ಯಕ್ಷೆ ಶ್ರೀಮತಿ ವಾಣಿ ಅವರು ಸಂಜೆ ಬೆಳ್ಳಾವೆ ವೆಂಕಟನಾರಣಪ್ಪ ಮಂಟಪದಿಂದ ಹೇಳಿದರು.</p>.<p>ಮುಖ್ಯವಾಗಿ ಇಂಗ್ಲಿಷ್ ಮತ್ತು ಹಿಂದಿಗಳ ‘ಯಜಮಾನ ಪ್ರವೃತ್ತಿ’ಯನ್ನು ಪ್ರಸ್ತಾಪಿಸಿದ ಶ್ರೀಮತಿ ವಾಣಿ ಅವರು, ‘ಕನ್ನಡದಲ್ಲಿ ಯಾವುದಿಲ್ಲ? ಎಲ್ಲವೂ ಇವೆ. ಆದರೆ, ಉಪಯೋಗಿಸುವ ಮನಸ್ಸು ಬೇಕು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಾಹಿತ್ಯ ಗೋಷ್ಠಿ: ಜೊಳ್ಳು ಸೃಷ್ಟಿ ಬಗ್ಗೆ ವಿಮರ್ಶಕರ ಟೀಕೆ<br />ಬೆಂಗಳೂರು, ಡಿ. 28–</strong> ಕನ್ನಡ ಸಾಹಿತ್ಯ ವೃಕ್ಷದ ವಿವಿಧ ಕೊಂಬೆಗಳ ಬೆಳವಣಿಗೆಯಲ್ಲಿ ಕಂಡ ಮಂಕು–ಮೆರಗಿನ ಚಿತ್ರವನ್ನು ಇಂದು ಬೆಳ್ಳಾವೆ ವೆಂಕಟನಾರಣಪ್ಪ ಮಂಟಪದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ನಡೆದ ಸಾಹಿತ್ಯ ಗೋಷ್ಠಿ ಬಿಚ್ಚು ಮಾತಿನಲ್ಲಿ ವಿಮರ್ಶಿಸಿತು.</p>.<p>ಶ್ರೀ ಕೆ.ಡಿ. ಕುರ್ತಕೋಟಿ ಅವರ ಅಧ್ಯಕ್ಷತೆಯಲ್ಲಿ ಶ್ರೀ ಎಲ್.ಎಸ್. ಶೇಷಗಿರಿ ರಾವ್ ಅವರ ನಿರ್ದೇಶನದಲ್ಲಿ ನಡೆದ ಈ ವಿಚಾರಶೀಲ ವಿಚಾರ ಸಂಕಿರಣದಲ್ಲಿ ಸಾಹಿತ್ಯದ ನಾನಾ ಮುಖಗಳಾದ ಕಾವ್ಯ, ನಾಟಕ, ಕಾದಂಬರಿ, ಸಣ್ಣಕತೆ, ಜನಪದ ಸಾಹಿತ್ಯ ಮತ್ತು ಸಂಶೋಧನೆಗಳ ವಿಮರ್ಶೆ ನಡೆಯಿತು.</p>.<p><strong>ಕ್ಷೀರಪ್ರಾಶನದ ಜೊತೆಗೆ ಕನ್ನಡದ ಪ್ರಾಶನವೂ ಆಗಲಿ<br />ಬೆಂಗಳೂರು, ಡಿ. 28– </strong>ಆಡಳಿತ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಕನ್ನಡಕ್ಕೆ ‘ಸಲ್ಲತೊಡಗಿರುವ’ ಅಗ್ರಪೂಜೆ, ಪರಭಾಷೆಗಳ ಯಾಜಮಾನ್ಯಕ್ಕೆ ಬಲಿಯಾಗದಿರಲಿ ಎಂಬ ಕಳಕಳಿ ಇಂದು ಸಾಹಿತ್ಯ ಸಮ್ಮೇಳನದ ಮಹಿಳಾ ಗೋಷ್ಠಿಯಿಂದ ಚಿಮ್ಮಿತು.</p>.<p>‘ಸೋದರ ಭಾಷೆಗಳನ್ನು ಕಲಿಯುವುದರಲ್ಲಿ ತಪ್ಪಿಲ್ಲ. ಆದರೆ, ಅವುಗಳು ಮಿತ್ರರಂತೆ ಬರಲಿ, ಯಜಮಾನರಂತಲ್ಲ’ ಎಂದು ಗೋಷ್ಠಿಯ ಅಧ್ಯಕ್ಷೆ ಶ್ರೀಮತಿ ವಾಣಿ ಅವರು ಸಂಜೆ ಬೆಳ್ಳಾವೆ ವೆಂಕಟನಾರಣಪ್ಪ ಮಂಟಪದಿಂದ ಹೇಳಿದರು.</p>.<p>ಮುಖ್ಯವಾಗಿ ಇಂಗ್ಲಿಷ್ ಮತ್ತು ಹಿಂದಿಗಳ ‘ಯಜಮಾನ ಪ್ರವೃತ್ತಿ’ಯನ್ನು ಪ್ರಸ್ತಾಪಿಸಿದ ಶ್ರೀಮತಿ ವಾಣಿ ಅವರು, ‘ಕನ್ನಡದಲ್ಲಿ ಯಾವುದಿಲ್ಲ? ಎಲ್ಲವೂ ಇವೆ. ಆದರೆ, ಉಪಯೋಗಿಸುವ ಮನಸ್ಸು ಬೇಕು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>