<p><strong>ನೆರವು ನಿಲ್ಲಿಸುವ ಬೆದರಿಕೆಗೆ ಭಾರತ ಮಣಿಯದು: ಇಂದಿರಾ<br />ಅಂಬಾಲಾ, ಡಿ.24–</strong> ಭಾರತದ ವ್ಯವಹಾರಗಳಲ್ಲಿ ವಿದೇಶಗಳು ಹಸ್ತಕ್ಷೇಪ ಮಾಡಿದರೆ ಅದನ್ನು ಎಂದಿಗೂ ಸಹಿಸಲಾಗದು ಎಂದು ಪ್ರಧಾನಿ ಇಂದಿರಾಗಾಂಧಿ ಅವರು ಇಂದು ಎಚ್ಚರಿಕೆ ನೀಡಿದರು.</p>.<p>ಇಲ್ಲಿ ಬೃಹತ್ ಸಾರ್ವಜನಿಕ ಸಭೆಯೊಂದನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು, ‘ಕೆಲವು ವಿದೇಶ ಸರ್ಕಾರಗಳು ಭಾರತದ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುತ್ತಿವೆ. ಆದರೆ ಈಗ ಕಾಲ ಬದಲಾಗಿದೆ. ಈ ಹಸ್ತಕ್ಷೇಪವನ್ನು ಭಾರತ ಸಹಿಸುವುದಿಲ್ಲ’ ಎಂದರು. ವಿದೇಶಿ ನೆರವು ನಿಲ್ಲಿಸುವ ಬೆದರಿಕೆ ಭಾರತದ ಮೇಲೆ ಯಾವ ಪರಿಣಾಮವನ್ನೂ ಬೀರದು ಎಂದೂ ಅವರು ಸ್ಪಷ್ಟಪಡಿಸಿದರು.</p>.<p>ಇತ್ತೀಚಿನ ಭಾರತ– ಪಾಕ್ ಘರ್ಷಣೆಯ ಸಂದರ್ಭದಲ್ಲಿ ಮತ್ತು ಆನಂತರದ ಪರಿಸ್ಥಿತಿಯ ಬೆಳವಣಿಗೆ ದೃಷ್ಟಿಯಿಂದ ತನ್ನ ಅಂತರರಾಷ್ಟ್ರೀಯ ಬಾಂಧವ್ಯದ ಸ್ವರೂಪವನ್ನು ಭಾರತವು ಪುನರ್ ವಿಮರ್ಶಿಸಬೇಕಾಗುತ್ತದೆ ಎಂದೂ ಇಂದಿರಾ ಗಾಂಧಿ ಅವರು ಸೂಚಿಸಿದರು.</p>.<p><strong>ಬಾಂಗ್ಲಾ ದೇಶಕ್ಕಾಗಿ ಕಾಶ್ಮೀರ ಬಿಟ್ಟುಕೊಡುವ ಪ್ರಶ್ನೆ ಇಲ್ಲ: ಸ್ವರಣ್ ಸಿಂಗ್ ಸ್ಪಷ್ಟನೆ<br />ಲಂಡನ್, ಡಿ. 24–</strong> ಬಾಂಗ್ಲಾದೇಶಕ್ಕಾಗಿ ಕಾಶ್ಮೀರವನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲವೆಂದು ಭಾರತದ ವಿದೇಶಾಂಗ ಸಚಿವ ಸ್ವರಣ್ ಸಿಂಗ್ ಅವರು ಇಲ್ಲಿ ತಿಳಿಸಿದರು.</p>.<p>ಜಮ್ಮು–ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಪಶ್ಚಿಮ ಪಾಕಿಸ್ತಾನ ಇದನ್ನು ಒಪ್ಪಿಕೊಳ್ಳಬೇಕು ಎಂದು ಅವರು ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದರು.</p>.<p>ಪಾಕಿಸ್ತಾನದಲ್ಲಿ ವಯಸ್ಕರ ಮತದಾನ ಪದ್ಧತಿ ಆಧಾರದ ಮೇಲೆ ಅನೇಕ ಚುನಾವಣೆಗಳು ನಡೆದಿವೆ. ಪಶ್ಚಿಮ ಪಾಕಿಸ್ತಾನಕ್ಕೆ ಕಾಶ್ಮೀರದ ಮೇಲೆ ನೈತಿಕ ಅಥವಾ ಕಾನೂನಿನ ಹಕ್ಕೇನೂ ಇಲ್ಲವೆಂದು ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನೆರವು ನಿಲ್ಲಿಸುವ ಬೆದರಿಕೆಗೆ ಭಾರತ ಮಣಿಯದು: ಇಂದಿರಾ<br />ಅಂಬಾಲಾ, ಡಿ.24–</strong> ಭಾರತದ ವ್ಯವಹಾರಗಳಲ್ಲಿ ವಿದೇಶಗಳು ಹಸ್ತಕ್ಷೇಪ ಮಾಡಿದರೆ ಅದನ್ನು ಎಂದಿಗೂ ಸಹಿಸಲಾಗದು ಎಂದು ಪ್ರಧಾನಿ ಇಂದಿರಾಗಾಂಧಿ ಅವರು ಇಂದು ಎಚ್ಚರಿಕೆ ನೀಡಿದರು.</p>.<p>ಇಲ್ಲಿ ಬೃಹತ್ ಸಾರ್ವಜನಿಕ ಸಭೆಯೊಂದನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು, ‘ಕೆಲವು ವಿದೇಶ ಸರ್ಕಾರಗಳು ಭಾರತದ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುತ್ತಿವೆ. ಆದರೆ ಈಗ ಕಾಲ ಬದಲಾಗಿದೆ. ಈ ಹಸ್ತಕ್ಷೇಪವನ್ನು ಭಾರತ ಸಹಿಸುವುದಿಲ್ಲ’ ಎಂದರು. ವಿದೇಶಿ ನೆರವು ನಿಲ್ಲಿಸುವ ಬೆದರಿಕೆ ಭಾರತದ ಮೇಲೆ ಯಾವ ಪರಿಣಾಮವನ್ನೂ ಬೀರದು ಎಂದೂ ಅವರು ಸ್ಪಷ್ಟಪಡಿಸಿದರು.</p>.<p>ಇತ್ತೀಚಿನ ಭಾರತ– ಪಾಕ್ ಘರ್ಷಣೆಯ ಸಂದರ್ಭದಲ್ಲಿ ಮತ್ತು ಆನಂತರದ ಪರಿಸ್ಥಿತಿಯ ಬೆಳವಣಿಗೆ ದೃಷ್ಟಿಯಿಂದ ತನ್ನ ಅಂತರರಾಷ್ಟ್ರೀಯ ಬಾಂಧವ್ಯದ ಸ್ವರೂಪವನ್ನು ಭಾರತವು ಪುನರ್ ವಿಮರ್ಶಿಸಬೇಕಾಗುತ್ತದೆ ಎಂದೂ ಇಂದಿರಾ ಗಾಂಧಿ ಅವರು ಸೂಚಿಸಿದರು.</p>.<p><strong>ಬಾಂಗ್ಲಾ ದೇಶಕ್ಕಾಗಿ ಕಾಶ್ಮೀರ ಬಿಟ್ಟುಕೊಡುವ ಪ್ರಶ್ನೆ ಇಲ್ಲ: ಸ್ವರಣ್ ಸಿಂಗ್ ಸ್ಪಷ್ಟನೆ<br />ಲಂಡನ್, ಡಿ. 24–</strong> ಬಾಂಗ್ಲಾದೇಶಕ್ಕಾಗಿ ಕಾಶ್ಮೀರವನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲವೆಂದು ಭಾರತದ ವಿದೇಶಾಂಗ ಸಚಿವ ಸ್ವರಣ್ ಸಿಂಗ್ ಅವರು ಇಲ್ಲಿ ತಿಳಿಸಿದರು.</p>.<p>ಜಮ್ಮು–ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಪಶ್ಚಿಮ ಪಾಕಿಸ್ತಾನ ಇದನ್ನು ಒಪ್ಪಿಕೊಳ್ಳಬೇಕು ಎಂದು ಅವರು ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದರು.</p>.<p>ಪಾಕಿಸ್ತಾನದಲ್ಲಿ ವಯಸ್ಕರ ಮತದಾನ ಪದ್ಧತಿ ಆಧಾರದ ಮೇಲೆ ಅನೇಕ ಚುನಾವಣೆಗಳು ನಡೆದಿವೆ. ಪಶ್ಚಿಮ ಪಾಕಿಸ್ತಾನಕ್ಕೆ ಕಾಶ್ಮೀರದ ಮೇಲೆ ನೈತಿಕ ಅಥವಾ ಕಾನೂನಿನ ಹಕ್ಕೇನೂ ಇಲ್ಲವೆಂದು ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>