<p><strong>ಬೆಂಗಳೂರು, ಜ. 18</strong>– ರಾಷ್ಟ್ರದ ಪ್ರತಿಷ್ಠಿತ ಇನ್ಫೋಸಿಸ್ ಸಂಸ್ಥೆ ತನ್ನ ಸಮುದಾಯದ ಅತ್ಯಂತ ದೊಡ್ಡ ಸಾಫ್ಟ್ವೇರ್ ಸಂಕೀರ್ಣವನ್ನು ಸುಮಾರು 619 ಕೋಟಿ ರೂಪಾಯಿ ವೆಚ್ಚದಲ್ಲಿ ಬೆಂಗಳೂರಿನ ಹೊರವಲಯದಲ್ಲಿ ಸ್ಥಾಪಿಸಲಿದೆ.</p><p>ಇನ್ಫೋಸಿಸ್ ಸಂಸ್ಥೆಯ ಈ ಕೇಂದ್ರ ವಿಶ್ವದಲ್ಲಿಯೇ ದೊಡ್ಡದೆಂದು ಹೇಳಲಾಗಿದೆ. ಈ ಯೋಜನೆ ಸೇರಿದಂತೆ ಒಟ್ಟು 4,501 ಕೋಟಿ ರೂಪಾಯಿ ಬಂಡವಾಳದ ಐದು ಯೋಜನೆಗಳಿಗೆ ಸರ್ಕಾರ ಅನುಮತಿ ನೀಡಿದೆ. ಈ ಯೋಜನೆಗಳು ಒಟ್ಟು 20,326 ಮಂದಿಗೆ ಉದ್ಯೋಗ ಒದಗಿಸುತ್ತವೆ ಎಂದು ಭಾರಿ ಕೈಗಾರಿಕಾ ಸಚಿವ ಆರ್.ವಿ. ದೇಶಪಾಂಡೆ ಅವರು, ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.</p><p>ಇನ್ಫೋಸಿಸ್ ಸಂಸ್ಥೆ ಸ್ಥಾಪಿಸುವ ಈ ಕೇಂದ್ರದಲ್ಲಿ 7,000 ಸಾಫ್ಟ್ವೇರ್ ಎಂಜಿನಿಯರ್ಗಳಿಗೆ ಒಂದೇ ಸೂರಿನಡಿ ಉದ್ಯೋಗ ಒದಗಿಸಲಿದೆ ಎಂದರು.</p>.<p><strong>ಭರತ್ ಷಾ 22ರವರೆಗೆ ಪೊಲೀಸ್ ವಶಕ್ಕೆ</strong></p><p><strong>ಮುಂಬೈ, ಜ. 18 (ಯುಎನ್ಐ)–</strong> ಭೂಗತ ಜಗತ್ತಿನೊಂದಿಗೆ ಅಕ್ರಮ ವ್ಯವಹಾರ ಹೊಂದಿರುವ ಆರೋಪಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಚಿತ್ರೋದ್ಯಮದ ಲೇವಾದೇವಿಗಾರ ಭರತ್ ಷಾ ಜಾಮೀನು ಅರ್ಜಿಯನ್ನು ಮುಂಬೈ ಹೈಕೋರ್ಟ್ ತಿರಸ್ಕರಿಸಿತು.</p><p>ಇದಕ್ಕೆ ಸಂಬಂಧಿಸಿದ ಬೆಳವಣಿಗೆಯಲ್ಲಿ ವಿಶೇಷ ನ್ಯಾಯಾಲಯವೊಂದು ಭರತ್ ಷಾ ಅವರನ್ನು ಜನವರಿ 22ರವರೆಗೆ ಪೊಲೀಸ್ ವಶಕ್ಕೆ ಒಪ್ಪಿಸಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು, ಜ. 18</strong>– ರಾಷ್ಟ್ರದ ಪ್ರತಿಷ್ಠಿತ ಇನ್ಫೋಸಿಸ್ ಸಂಸ್ಥೆ ತನ್ನ ಸಮುದಾಯದ ಅತ್ಯಂತ ದೊಡ್ಡ ಸಾಫ್ಟ್ವೇರ್ ಸಂಕೀರ್ಣವನ್ನು ಸುಮಾರು 619 ಕೋಟಿ ರೂಪಾಯಿ ವೆಚ್ಚದಲ್ಲಿ ಬೆಂಗಳೂರಿನ ಹೊರವಲಯದಲ್ಲಿ ಸ್ಥಾಪಿಸಲಿದೆ.</p><p>ಇನ್ಫೋಸಿಸ್ ಸಂಸ್ಥೆಯ ಈ ಕೇಂದ್ರ ವಿಶ್ವದಲ್ಲಿಯೇ ದೊಡ್ಡದೆಂದು ಹೇಳಲಾಗಿದೆ. ಈ ಯೋಜನೆ ಸೇರಿದಂತೆ ಒಟ್ಟು 4,501 ಕೋಟಿ ರೂಪಾಯಿ ಬಂಡವಾಳದ ಐದು ಯೋಜನೆಗಳಿಗೆ ಸರ್ಕಾರ ಅನುಮತಿ ನೀಡಿದೆ. ಈ ಯೋಜನೆಗಳು ಒಟ್ಟು 20,326 ಮಂದಿಗೆ ಉದ್ಯೋಗ ಒದಗಿಸುತ್ತವೆ ಎಂದು ಭಾರಿ ಕೈಗಾರಿಕಾ ಸಚಿವ ಆರ್.ವಿ. ದೇಶಪಾಂಡೆ ಅವರು, ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.</p><p>ಇನ್ಫೋಸಿಸ್ ಸಂಸ್ಥೆ ಸ್ಥಾಪಿಸುವ ಈ ಕೇಂದ್ರದಲ್ಲಿ 7,000 ಸಾಫ್ಟ್ವೇರ್ ಎಂಜಿನಿಯರ್ಗಳಿಗೆ ಒಂದೇ ಸೂರಿನಡಿ ಉದ್ಯೋಗ ಒದಗಿಸಲಿದೆ ಎಂದರು.</p>.<p><strong>ಭರತ್ ಷಾ 22ರವರೆಗೆ ಪೊಲೀಸ್ ವಶಕ್ಕೆ</strong></p><p><strong>ಮುಂಬೈ, ಜ. 18 (ಯುಎನ್ಐ)–</strong> ಭೂಗತ ಜಗತ್ತಿನೊಂದಿಗೆ ಅಕ್ರಮ ವ್ಯವಹಾರ ಹೊಂದಿರುವ ಆರೋಪಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಚಿತ್ರೋದ್ಯಮದ ಲೇವಾದೇವಿಗಾರ ಭರತ್ ಷಾ ಜಾಮೀನು ಅರ್ಜಿಯನ್ನು ಮುಂಬೈ ಹೈಕೋರ್ಟ್ ತಿರಸ್ಕರಿಸಿತು.</p><p>ಇದಕ್ಕೆ ಸಂಬಂಧಿಸಿದ ಬೆಳವಣಿಗೆಯಲ್ಲಿ ವಿಶೇಷ ನ್ಯಾಯಾಲಯವೊಂದು ಭರತ್ ಷಾ ಅವರನ್ನು ಜನವರಿ 22ರವರೆಗೆ ಪೊಲೀಸ್ ವಶಕ್ಕೆ ಒಪ್ಪಿಸಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>