<p id="thickbox_headline"><strong>ಸರ್ಕಾರ ರಚನೆಗೆ ಅವಕಾಶ: ರಾಷ್ಟ್ರಪತಿಗೆ ಕಾಂಗ್ರೆಸ್ ಮನವಿ</strong></p>.<p><strong>ನವದೆಹಲಿ, ಡಿ. 1– </strong>ಕೇಂದ್ರದಲ್ಲಿ ಸರ್ಕಾರ ರಚಿಸಲು ತನಗೊಂದು ಅವಕಾಶ ನೀಡುವಂತೆ ಕಾಂಗ್ರೆಸ್ ಪಕ್ಷವು ಇಂದು ರಾಷ್ಟ್ರಪತಿ ಕೆ.ಆರ್. ನಾರಾಯಣನ್ ಅವರಿಗೆ ಮನವಿ ಮಾಡಿದೆ.</p>.<p>ಪಕ್ಷದ ಅಧ್ಯಕ್ಷ ಸೀತಾರಾಂ ಕೇಸರಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ಸಿನ ಏಳು ಸದಸ್ಯರ ನಿಯೋಗವೊಂದು ರಾಷ್ಟ್ರಪತಿ ಅವರನ್ನು ಇಂದು ರಾತ್ರಿ ಭೇಟಿ ಮಾಡಿ ಸುಮಾರು 45 ನಿಮಿಷಗಳ ಕಾಲ ಚರ್ಚೆ ನಡೆಸಿತು.</p>.<p>ಸಂಯುಕ್ತರಂಗ ಮತ್ತು ಬಿಜೆಪಿಗೆ ಈ ಹಿಂದೆ ಸರ್ಕಾರ ರಚಿಸಲು ಅವಕಾಶ ನೀಡಿರುವುದರಿಂದ ಈ ಬಾರಿ ತನಗೆ ಅವಕಾಶ ನೀಡುವಂತೆ ರಾಷ್ಟ್ರಪತಿಯವರನ್ನು ಕಾಂಗ್ರೆಸ್ ಕೋರಿತು.</p>.<p><strong>ಪಕ್ಷ ಬಿಟ್ಟು ಬನ್ನಿ: ಕಾಂಗ್ರೆಸ್ ಸಂಸದರಿಗೆ ಅಟಲ್ ಕರೆ</strong></p>.<p><strong>ನವದೆಹಲಿ, ಡಿ.1 (ಯುಎನ್ಐ)– </strong>‘ಹೊಸ ಚುನಾವಣೆಯನ್ನು ತಡೆಯಬೇಕು ಅನ್ನುವುದೇ ಆದರೆ ಕಾಂಗ್ರೆಸ್ ಪಕ್ಷದ ಲೋಕಸಭಾ ಸದಸ್ಯರು ತಮ್ಮ ಮಾತೃಪಕ್ಷ ತೊರೆದು ಬಿಜೆಪಿ ನೇತೃತ್ವದ ಸರ್ಕಾರವನ್ನು ಬೆಂಬಲಿಸಬೇಕು’ ಎಂದು ಭಾರತೀಯ ಜನತಾ ಪಕ್ಷ ಇಂದು ಬಹಿರಂಗ ಕರೆ ನೀಡಿದೆ.</p>.<p>‘ಕೇಂದ್ರದಲ್ಲಿ ಸರ್ಕಾರ ರಚಿಸುವ ಬಗ್ಗೆ ಕಾಂಗ್ರೆಸ್ನ ಹಲವರು ಹಾಗೂ ಇತರೆ ಪಕ್ಷಗಳ ಕೆಲವು ಲೋಕಸಭಾ ಸದಸ್ಯರು ತಮ್ಮೊಂದಿಗೆ ಸಂಪರ್ಕವಿಟ್ಟುಕೊಂಡಿದ್ದಾರೆ’ ಎಂದು ಬಿಜೆಪಿ ನಾಯಕ ಎ.ಬಿ. ವಾಜಪೇಯಿ ಅವರು ಇಂದು ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p id="thickbox_headline"><strong>ಸರ್ಕಾರ ರಚನೆಗೆ ಅವಕಾಶ: ರಾಷ್ಟ್ರಪತಿಗೆ ಕಾಂಗ್ರೆಸ್ ಮನವಿ</strong></p>.<p><strong>ನವದೆಹಲಿ, ಡಿ. 1– </strong>ಕೇಂದ್ರದಲ್ಲಿ ಸರ್ಕಾರ ರಚಿಸಲು ತನಗೊಂದು ಅವಕಾಶ ನೀಡುವಂತೆ ಕಾಂಗ್ರೆಸ್ ಪಕ್ಷವು ಇಂದು ರಾಷ್ಟ್ರಪತಿ ಕೆ.ಆರ್. ನಾರಾಯಣನ್ ಅವರಿಗೆ ಮನವಿ ಮಾಡಿದೆ.</p>.<p>ಪಕ್ಷದ ಅಧ್ಯಕ್ಷ ಸೀತಾರಾಂ ಕೇಸರಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ಸಿನ ಏಳು ಸದಸ್ಯರ ನಿಯೋಗವೊಂದು ರಾಷ್ಟ್ರಪತಿ ಅವರನ್ನು ಇಂದು ರಾತ್ರಿ ಭೇಟಿ ಮಾಡಿ ಸುಮಾರು 45 ನಿಮಿಷಗಳ ಕಾಲ ಚರ್ಚೆ ನಡೆಸಿತು.</p>.<p>ಸಂಯುಕ್ತರಂಗ ಮತ್ತು ಬಿಜೆಪಿಗೆ ಈ ಹಿಂದೆ ಸರ್ಕಾರ ರಚಿಸಲು ಅವಕಾಶ ನೀಡಿರುವುದರಿಂದ ಈ ಬಾರಿ ತನಗೆ ಅವಕಾಶ ನೀಡುವಂತೆ ರಾಷ್ಟ್ರಪತಿಯವರನ್ನು ಕಾಂಗ್ರೆಸ್ ಕೋರಿತು.</p>.<p><strong>ಪಕ್ಷ ಬಿಟ್ಟು ಬನ್ನಿ: ಕಾಂಗ್ರೆಸ್ ಸಂಸದರಿಗೆ ಅಟಲ್ ಕರೆ</strong></p>.<p><strong>ನವದೆಹಲಿ, ಡಿ.1 (ಯುಎನ್ಐ)– </strong>‘ಹೊಸ ಚುನಾವಣೆಯನ್ನು ತಡೆಯಬೇಕು ಅನ್ನುವುದೇ ಆದರೆ ಕಾಂಗ್ರೆಸ್ ಪಕ್ಷದ ಲೋಕಸಭಾ ಸದಸ್ಯರು ತಮ್ಮ ಮಾತೃಪಕ್ಷ ತೊರೆದು ಬಿಜೆಪಿ ನೇತೃತ್ವದ ಸರ್ಕಾರವನ್ನು ಬೆಂಬಲಿಸಬೇಕು’ ಎಂದು ಭಾರತೀಯ ಜನತಾ ಪಕ್ಷ ಇಂದು ಬಹಿರಂಗ ಕರೆ ನೀಡಿದೆ.</p>.<p>‘ಕೇಂದ್ರದಲ್ಲಿ ಸರ್ಕಾರ ರಚಿಸುವ ಬಗ್ಗೆ ಕಾಂಗ್ರೆಸ್ನ ಹಲವರು ಹಾಗೂ ಇತರೆ ಪಕ್ಷಗಳ ಕೆಲವು ಲೋಕಸಭಾ ಸದಸ್ಯರು ತಮ್ಮೊಂದಿಗೆ ಸಂಪರ್ಕವಿಟ್ಟುಕೊಂಡಿದ್ದಾರೆ’ ಎಂದು ಬಿಜೆಪಿ ನಾಯಕ ಎ.ಬಿ. ವಾಜಪೇಯಿ ಅವರು ಇಂದು ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>