<p>ತಿರುಚನಾಪಳ್ಳಿ, ಡಿ.10– ಕುಮಾರ ಮಂಗಳಂ ರೈಲ್ವೆ ಸ್ಟೇಷನ್ ಮಾಸ್ಟರ್ ಶ್ರೀ ಟಿ.ಕೃಷ್ಣಮೂರ್ತಿ ಪಿಳ್ಳೆ ಎಂಬುವರು ಕೊಡುತ್ತಿರುವ ‘ಸರ್ವರೋಗ ನಿವಾರಣೆ’ ವಿಭೂತಿ ಪ್ರಸಾದವನ್ನೂ, ದಾರವನ್ನು ಸ್ವೀಕರಿಸಲು ಸಾವಿರಾರು ಜನರು ಬರುತ್ತಿದ್ದಾರೆ.</p><p>ಭಾನುವಾರ, ಶುಕ್ರವಾರಗಳಂದು ಸ್ತ್ರೀಯರಿಗೆ ಮಾತ್ರ ಪ್ರಸಾದವನ್ನು ಕೊಡಲಾಗುವುದು. ಈ ಪವಾಡ ಪುರುಷನಿಂದ ಪ್ರಸಾದವನ್ನು ಪಡೆಯಲು ಎಲ್ಲ ಜಾತಿಯ ಸಾವಿರಾರು ಮಂದಿ ಈತನ ಮನೆಯ ಮುಂದೆ ಕ್ಯೂ ನಿಲ್ಲುತ್ತಾರೆ.</p><p>ಕೆಲವು ತಿಂಗಳುಗಳಿಂದ ಅಲ್ಲಿಗೆ ಬರುವ ಜನರ ಸಂಖ್ಯೆ ಹೆಚ್ಚಿದಂತೆ ಗೂರಲು, ತೊನ್ನು ಮತ್ತು ಇತರ ವ್ಯಾಧಿಗಳು ಪ್ರಸಾದದಿಂದ ಗುಣ ವಾಗಿರುವ ಕತೆಗಳು ಹೆಚ್ಚಾಗುತ್ತಿವೆ.</p><p><strong>ಕೊರಿಯಾ ತ್ಯಜಿಸಿ ಜಪಾನಿಗೆ ಓಟ</strong></p><p>ಸಿಯೋಲ್, ಡಿ.10– ದಿಗ್ಬ್ರಾಂತರಾದ ಸಾವಿರಾರು ಕೊರಿಯಾ ನಿರಾಶ್ರಿತರು ರಾತ್ರಿಯಲ್ಲಿ ಸಣ್ಣಪುಟ್ಟ ದೋಣಿಗಳಲ್ಲಿ ಜಪಾನಿಗೆ ತಪ್ಪಿಸಿಕೊಂಡು ಹೋಗಲು ತಲೆಗೆ 200 ಡಾಲರುಗಳಷ್ಟು ತೆರುತ್ತಿದ್ದಾರೆ.</p><p>ಈ ಕಳ್ಳತನದ ಸಾಗಾಟಕ್ಕೆ ಕ್ಷಣಕ್ಷಣಕ್ಕೂ ಬೆಲೆ ಏರುತ್ತಿದೆ. ಅಮೆರಿಕಾ ಅಥವಾ ಜಪಾನಿನ ಹಣವನ್ನೇ ಕೊಡ ಬೇಕೆಂಬುದು ಒಯ್ಯುವವರ ಹಠ.</p>
<p>ತಿರುಚನಾಪಳ್ಳಿ, ಡಿ.10– ಕುಮಾರ ಮಂಗಳಂ ರೈಲ್ವೆ ಸ್ಟೇಷನ್ ಮಾಸ್ಟರ್ ಶ್ರೀ ಟಿ.ಕೃಷ್ಣಮೂರ್ತಿ ಪಿಳ್ಳೆ ಎಂಬುವರು ಕೊಡುತ್ತಿರುವ ‘ಸರ್ವರೋಗ ನಿವಾರಣೆ’ ವಿಭೂತಿ ಪ್ರಸಾದವನ್ನೂ, ದಾರವನ್ನು ಸ್ವೀಕರಿಸಲು ಸಾವಿರಾರು ಜನರು ಬರುತ್ತಿದ್ದಾರೆ.</p><p>ಭಾನುವಾರ, ಶುಕ್ರವಾರಗಳಂದು ಸ್ತ್ರೀಯರಿಗೆ ಮಾತ್ರ ಪ್ರಸಾದವನ್ನು ಕೊಡಲಾಗುವುದು. ಈ ಪವಾಡ ಪುರುಷನಿಂದ ಪ್ರಸಾದವನ್ನು ಪಡೆಯಲು ಎಲ್ಲ ಜಾತಿಯ ಸಾವಿರಾರು ಮಂದಿ ಈತನ ಮನೆಯ ಮುಂದೆ ಕ್ಯೂ ನಿಲ್ಲುತ್ತಾರೆ.</p><p>ಕೆಲವು ತಿಂಗಳುಗಳಿಂದ ಅಲ್ಲಿಗೆ ಬರುವ ಜನರ ಸಂಖ್ಯೆ ಹೆಚ್ಚಿದಂತೆ ಗೂರಲು, ತೊನ್ನು ಮತ್ತು ಇತರ ವ್ಯಾಧಿಗಳು ಪ್ರಸಾದದಿಂದ ಗುಣ ವಾಗಿರುವ ಕತೆಗಳು ಹೆಚ್ಚಾಗುತ್ತಿವೆ.</p><p><strong>ಕೊರಿಯಾ ತ್ಯಜಿಸಿ ಜಪಾನಿಗೆ ಓಟ</strong></p><p>ಸಿಯೋಲ್, ಡಿ.10– ದಿಗ್ಬ್ರಾಂತರಾದ ಸಾವಿರಾರು ಕೊರಿಯಾ ನಿರಾಶ್ರಿತರು ರಾತ್ರಿಯಲ್ಲಿ ಸಣ್ಣಪುಟ್ಟ ದೋಣಿಗಳಲ್ಲಿ ಜಪಾನಿಗೆ ತಪ್ಪಿಸಿಕೊಂಡು ಹೋಗಲು ತಲೆಗೆ 200 ಡಾಲರುಗಳಷ್ಟು ತೆರುತ್ತಿದ್ದಾರೆ.</p><p>ಈ ಕಳ್ಳತನದ ಸಾಗಾಟಕ್ಕೆ ಕ್ಷಣಕ್ಷಣಕ್ಕೂ ಬೆಲೆ ಏರುತ್ತಿದೆ. ಅಮೆರಿಕಾ ಅಥವಾ ಜಪಾನಿನ ಹಣವನ್ನೇ ಕೊಡ ಬೇಕೆಂಬುದು ಒಯ್ಯುವವರ ಹಠ.</p>