<h2>ಬಯಸಿದ್ದನ್ನೆಲ್ಲ ಹಣ ಕೊಡಿಸದು!</h2>.<p><strong>ಲಕ್ನೋ, ಜುಲೈ 30–</strong> ಉಕ್ಕಿನ ರಹದಾರಿಗಾಗಿ ಸರಬರಾಜು ಸಚಿವ ಸಿ.ಬಿ. ಗುಪ್ತ ಅವರಿಗೆ ರುಜು ಹಾಕಿದ ಖಾಲಿ ಚೆಕ್ಕನ್ನು ಕಳಿಸಿದ್ದ ಬಾರಾಬಂಕಿ ವರ್ತಕರೊಬ್ಬರು ಇಂದು ನ್ಯಾಯಾಸ್ಥಾನದಲ್ಲಿ ವಿಚಾರಣೆಗೊಳಗಾಗಿದ್ದಾರೆ.</p>.<p>ಈ ವರ್ತಕ ರಹದಾರಿಗೆ ಅರ್ಜಿ ಹಾಕಿದರಂತೆ. ವರ್ಷವಾದರೂ ಉತ್ತರ ಬರಲಿಲ್ಲ. ಆ ನಂತರ ಈತ ಸಹಿ ಹಾಕಿದ ಖಾಲಿ ಚೆಕ್ಕನ್ನು ಉತ್ತರ ಪ್ರದೇಶ ಸರ್ಕಾರದ ಹೆಸರಿಗೆ ಬರೆದು ಒಂದು ಪತ್ರವೊಂದಿಗೆ ಕಳಿಸಿದರಂತೆ.</p>.<p>ಸಚಿವರು ಈ ಸಂಗತಿಯನ್ನು ಪೊಲೀಸರಿಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<h2>ಬಯಸಿದ್ದನ್ನೆಲ್ಲ ಹಣ ಕೊಡಿಸದು!</h2>.<p><strong>ಲಕ್ನೋ, ಜುಲೈ 30–</strong> ಉಕ್ಕಿನ ರಹದಾರಿಗಾಗಿ ಸರಬರಾಜು ಸಚಿವ ಸಿ.ಬಿ. ಗುಪ್ತ ಅವರಿಗೆ ರುಜು ಹಾಕಿದ ಖಾಲಿ ಚೆಕ್ಕನ್ನು ಕಳಿಸಿದ್ದ ಬಾರಾಬಂಕಿ ವರ್ತಕರೊಬ್ಬರು ಇಂದು ನ್ಯಾಯಾಸ್ಥಾನದಲ್ಲಿ ವಿಚಾರಣೆಗೊಳಗಾಗಿದ್ದಾರೆ.</p>.<p>ಈ ವರ್ತಕ ರಹದಾರಿಗೆ ಅರ್ಜಿ ಹಾಕಿದರಂತೆ. ವರ್ಷವಾದರೂ ಉತ್ತರ ಬರಲಿಲ್ಲ. ಆ ನಂತರ ಈತ ಸಹಿ ಹಾಕಿದ ಖಾಲಿ ಚೆಕ್ಕನ್ನು ಉತ್ತರ ಪ್ರದೇಶ ಸರ್ಕಾರದ ಹೆಸರಿಗೆ ಬರೆದು ಒಂದು ಪತ್ರವೊಂದಿಗೆ ಕಳಿಸಿದರಂತೆ.</p>.<p>ಸಚಿವರು ಈ ಸಂಗತಿಯನ್ನು ಪೊಲೀಸರಿಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>