<p><strong>5 ಕೋಟಿ ರೂಪಾಯಿ ಪರಿಹಾರಕ್ಕೆ ವೀರಪ್ಪನ್ ಬೇಡಿಕೆ</strong></p>.<p><strong>ಚೆನ್ನೈ, ಆ. 7 (ಯುಎನ್ಐ)–</strong> ಸಂಪೂರ್ಣ ಕ್ಷಮಾದಾನ ಬೇಡಿಕೆ ಮುಂದಿಟ್ಟಿರುವ ಕುಖ್ಯಾತ ನರಹಂತಕ ವೀರಪ್ಪನ್ ಇದೀಗ, ಕ್ಷಮಾದಾನಕ್ಕೆ ಪರ್ಯಾಯವಾಗಿ ಐದು ಕೋಟಿ ರೂಪಾಯಿಗಳ ಪರಿಹಾರ ನೀಡುವಂತೆ ಒತ್ತಾಯಿಸುವುದರೊಂದಿಗೆ<br />ಒತ್ತೆಯಾಳು ಸಮಸ್ಯೆ ಹೊಸ ತಿರುವು ಪಡೆದುಕೊಂಡಿದೆ. ಈ ಬೇಡಿಕೆ ಪೂರೈಕೆಗಾಗಿ ವೀರಪ್ಪನ್ ಒಂದು ವಾರದ ಗಡುವು ನೀಡಿದ್ದಾನೆ.</p>.<p>‘ತನಗೆ ಎಂಟು ದಿನಗಳ ಒಳಗಾಗಿ ಐದು ಕೋಟಿ ರೂಪಾಯಿ ನೀಡಿದಲ್ಲಿ ಮಾತ್ರ ಕರ್ನಾಟಕ ಅರಣ್ಯ ಇಲಾಖೆ ಸಿಬ್ಬಂದಿಯನ್ನು ಬಿಡುಗಡೆ ಮಾಡುವುದಾಗಿ ವೀರಪ್ಪನ್ ಸ್ಪಷ್ಟಪಡಿಸಿದ್ದಾನೆ’ ಎಂದು ಎರಡನೇ ಬಾರಿ ವೀರಪ್ಪನ್ನನ್ನು ಭೇಟಿಯಾಗಿ ಬಂದ<br />ಆರ್.ಆರ್.ಗೋಪಾಲ್ ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.</p>.<p>ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳು ಈ ಬಗ್ಗೆ ಚರ್ಚಿಸಿ ಆಗಸ್ಟ್ 15ರ ಒಳಗೆ ನಿರ್ಧಾರ ಪ್ರಕಟಿಸಬೇಕು,<br />ಇಲ್ಲದಿದ್ದರೆ ಎಲ್ಲ ಎಂಟು ಮಂದಿ ಒತ್ತೆಯಾಳುಗಳನ್ನು ಕೊಲ್ಲುವುದಾಗಿ ವೀರಪ್ಪನ್ ಬೆದರಿಕೆ ಹಾಕಿದ್ದಾನೆ ಎಂದು ಗೋಪಾಲ್ ಹೇಳಿದರು.</p>.<p><strong>ನೇತ್ರಾವತಿ ನದಿ ಅಪಾಯ ಮಟ್ಟದಲ್ಲಿ</strong></p>.<p><strong>ಬಂಟ್ವಾಳ, ಆ.7– </strong>ಕಳೆದ ಮೂರು, ನಾಲ್ಕು ದಿನಗಳಿಂದ ಘಟ್ಟದ ಮೇಲಿನ ಪ್ರದೇಶದಲ್ಲಿ ಭಾರಿ ಮಳೆ ಆಗುತ್ತಿರುವುದರಿಂದ<br />ನೇತ್ರಾವತಿನೀರಿನ ಮಟ್ಟ ಗಮನಾರ್ಹವಾಗಿ ಏರುತ್ತಿದ್ದು, ಅಪಾಯದ ಮಟ್ಟ ತಲುಪುವ ಎಲ್ಲ ಸಾಧ್ಯತೆಗಳು ಕಂಡುಬಂದಿವೆ.</p>.<p><strong>ದೋಣಿ ಬುಡಮೇಲಾಗಿ ಮೂವರು ನೀರುಪಾಲು</strong></p>.<p><strong>ಕಾರವಾರ, ಆ.7–</strong> ಮೀನು ಹಿಡಿಯಲು ಹೋಗಿದ್ದ ಹೊನ್ನಾವರ ತಾಲ್ಲೂಕಿನ ಹಳದೀಪುರದ ಮೂವರು ಗೋವಾದಲ್ಲಿ ಸಮುದ್ರ ಪಾಲಾಗಿದ್ದು, ಮೂವರು ಈಜಿ ಪಾರಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>5 ಕೋಟಿ ರೂಪಾಯಿ ಪರಿಹಾರಕ್ಕೆ ವೀರಪ್ಪನ್ ಬೇಡಿಕೆ</strong></p>.<p><strong>ಚೆನ್ನೈ, ಆ. 7 (ಯುಎನ್ಐ)–</strong> ಸಂಪೂರ್ಣ ಕ್ಷಮಾದಾನ ಬೇಡಿಕೆ ಮುಂದಿಟ್ಟಿರುವ ಕುಖ್ಯಾತ ನರಹಂತಕ ವೀರಪ್ಪನ್ ಇದೀಗ, ಕ್ಷಮಾದಾನಕ್ಕೆ ಪರ್ಯಾಯವಾಗಿ ಐದು ಕೋಟಿ ರೂಪಾಯಿಗಳ ಪರಿಹಾರ ನೀಡುವಂತೆ ಒತ್ತಾಯಿಸುವುದರೊಂದಿಗೆ<br />ಒತ್ತೆಯಾಳು ಸಮಸ್ಯೆ ಹೊಸ ತಿರುವು ಪಡೆದುಕೊಂಡಿದೆ. ಈ ಬೇಡಿಕೆ ಪೂರೈಕೆಗಾಗಿ ವೀರಪ್ಪನ್ ಒಂದು ವಾರದ ಗಡುವು ನೀಡಿದ್ದಾನೆ.</p>.<p>‘ತನಗೆ ಎಂಟು ದಿನಗಳ ಒಳಗಾಗಿ ಐದು ಕೋಟಿ ರೂಪಾಯಿ ನೀಡಿದಲ್ಲಿ ಮಾತ್ರ ಕರ್ನಾಟಕ ಅರಣ್ಯ ಇಲಾಖೆ ಸಿಬ್ಬಂದಿಯನ್ನು ಬಿಡುಗಡೆ ಮಾಡುವುದಾಗಿ ವೀರಪ್ಪನ್ ಸ್ಪಷ್ಟಪಡಿಸಿದ್ದಾನೆ’ ಎಂದು ಎರಡನೇ ಬಾರಿ ವೀರಪ್ಪನ್ನನ್ನು ಭೇಟಿಯಾಗಿ ಬಂದ<br />ಆರ್.ಆರ್.ಗೋಪಾಲ್ ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.</p>.<p>ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳು ಈ ಬಗ್ಗೆ ಚರ್ಚಿಸಿ ಆಗಸ್ಟ್ 15ರ ಒಳಗೆ ನಿರ್ಧಾರ ಪ್ರಕಟಿಸಬೇಕು,<br />ಇಲ್ಲದಿದ್ದರೆ ಎಲ್ಲ ಎಂಟು ಮಂದಿ ಒತ್ತೆಯಾಳುಗಳನ್ನು ಕೊಲ್ಲುವುದಾಗಿ ವೀರಪ್ಪನ್ ಬೆದರಿಕೆ ಹಾಕಿದ್ದಾನೆ ಎಂದು ಗೋಪಾಲ್ ಹೇಳಿದರು.</p>.<p><strong>ನೇತ್ರಾವತಿ ನದಿ ಅಪಾಯ ಮಟ್ಟದಲ್ಲಿ</strong></p>.<p><strong>ಬಂಟ್ವಾಳ, ಆ.7– </strong>ಕಳೆದ ಮೂರು, ನಾಲ್ಕು ದಿನಗಳಿಂದ ಘಟ್ಟದ ಮೇಲಿನ ಪ್ರದೇಶದಲ್ಲಿ ಭಾರಿ ಮಳೆ ಆಗುತ್ತಿರುವುದರಿಂದ<br />ನೇತ್ರಾವತಿನೀರಿನ ಮಟ್ಟ ಗಮನಾರ್ಹವಾಗಿ ಏರುತ್ತಿದ್ದು, ಅಪಾಯದ ಮಟ್ಟ ತಲುಪುವ ಎಲ್ಲ ಸಾಧ್ಯತೆಗಳು ಕಂಡುಬಂದಿವೆ.</p>.<p><strong>ದೋಣಿ ಬುಡಮೇಲಾಗಿ ಮೂವರು ನೀರುಪಾಲು</strong></p>.<p><strong>ಕಾರವಾರ, ಆ.7–</strong> ಮೀನು ಹಿಡಿಯಲು ಹೋಗಿದ್ದ ಹೊನ್ನಾವರ ತಾಲ್ಲೂಕಿನ ಹಳದೀಪುರದ ಮೂವರು ಗೋವಾದಲ್ಲಿ ಸಮುದ್ರ ಪಾಲಾಗಿದ್ದು, ಮೂವರು ಈಜಿ ಪಾರಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>