ಬೆಂಗಳೂರು, ಅ. 31– ಆಡಳಿತಾನುಕೂಲ ದೃಷ್ಟಿಯಿಂದ ಕನ್ನಡವನ್ನು ಉಪವಿಭಾಗ ಮಟ್ಟದಲ್ಲಿ ಜಾರಿಗೆ ತರುವುದರ ಜೊತೆಗೆ ಕೂಡಲೆ ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲೂ ಜಾರಿಗೆ ತರಬೇಕೆಂದು ರಾಜ್ಯದ ಕನ್ನಡ ಭಾಷಾ ಸಮಿತಿ ಶಿಫಾರಸು ಮಾಡಿದೆ.
ಕನ್ನಡವನ್ನು ಉಪ ವಿಭಾಗ ಹಾಗೂ ಕ್ರಮೇಣ ಎಲ್ಲ ಹಂತಗಳಲ್ಲಿ ಜಾರಿಗೆ ತರಲು ಅಗತ್ಯವಾದ ಕ್ರಮಗಳನ್ನು ಸೂಚಿಸಲು ಸರ್ಕಾರ ನೇಮಿಸಿದ್ದ ಭಾಷಾ ಸಮಿತಿಯ ಅಂತಿಮ ವರದಿಯನ್ನು ಸರ್ಕಾರ ರಾಜ್ಯೋತ್ಸವದ ಸಂದರ್ಭದಲ್ಲಿ ಬಿಡುಗಡೆ ಮಾಡಿದೆ.
ತಾತ್ಸಾರ ತೋರುವ ಅಧಿಕಾರಿಗಳ ದಂಡನೆಗೆ ಸಲಹೆ
ಬೆಂಗಳೂರು, ಅ. 31– ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಜಾರಿಗೆ ತರುವುದರಲ್ಲಿ ತಾತ್ಸಾರ ತೋರಿಸುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕೆಂದು ಕನ್ನಡ ಭಾಷಾ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ.