ನವದೆಹಲಿ, ಮೇ 20 (ಪಿಟಿಐ)– ‘ವಿದೇಶಿ ಕಂಪೆನಿಗಳಿಂದ ಕಾಂಗ್ರೆಸ್ ಪಕ್ಷವು 3.75 ಕೋಟಿ ರೂಪಾಯಿ ಹಣ ಪಡೆದದ್ದಕ್ಕಾಗಿ ಪಕ್ಷದ ವಿರುದ್ಧ ಕ್ರಮ ಕೈಗೊಳ್ಳಲು ಕೇಂದ್ರ ಗೃಹ ಸಚಿವ ಇಂಧ್ರಜಿತ್ ಗುಪ್ತಾ ಅವರು ಮಾರ್ಚ್ 27ರಂದು ಅನುಮತಿ ನೀಡಿದರು. ಇದಾದ ಮೂರು ದಿನಗಳ ಬಳಿಕ ಕಾಂಗ್ರೆಸ್ ಪಕ್ಷವು ದೇವೇಗೌಡರ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂತೆಗೆದುಕೊಂಡಿತು’ ಎಂದು ದೆಹಲಿಯ ಹೈಕೋರ್ಟಿಗೆ ಇಂದು ಕೇಂದ್ರ ಸರ್ಕಾರ ತಿಳಿಸಿತು.