ಬಾಂಗ್ಲಾದೇಶ ನಿರಾಶ್ರಿತರಿಗೆ ಎಲ್ಲ ನೆರವು: ಜೆ.ಪಿ.ಗೆ ಟಿಟೋ ಆಶ್ವಾಸನೆ
ಬೆಲ್ಗ್ರೇಡ್, ಮೇ 22– ಗಡಿದಾಟಿ ಭಾರತಕ್ಕೆ ಬಂದಿರುವ ಬಾಂಗ್ಲಾದೇಶದ ನಿರಾಶ್ರಿತರಿಗೆ ಸಾಧ್ಯವಾದ ಎಲ್ಲ ನೆರವು ನೀಡುವುದಾಗಿ ಯಗೋಸ್ಲಾವಿಯ ಅಧ್ಯಕ್ಷ ಟಿಟೋ ಅವರು ತಮ್ಮನ್ನು ಭೇಟಿ ಮಾಡಿದ ಸರ್ವೋದಯ ನಾಯಕ ಜಯಪ್ರಕಾಶ್ ನಾರಾಯಣ್ ಅವರಿಗೆ ಆಶ್ವಾಸನೆ ನೀಡಿದ್ದಾರೆ.
ಪೂರ್ವ ಬಂಗಾಳದಲ್ಲಿಯ ಪರಿಸ್ಥಿತಿ ಬಗ್ಗೆ ತೀವ್ರ ಆತಂಕವನ್ನೂ ಯಗೋಸ್ಲಾವಿಯ ಅಧ್ಯಕ್ಷರು ವ್ಯಕ್ತಪಡಿಸಿದ್ದಾರೆ. ಶ್ರೀ ಜಯಪ್ರಕಾಶ್ ನಾರಾಯಣ್, ಯುಗೋಸ್ಲಾವಿಯ ಅಧ್ಯಕ್ಷರನ್ನು ಭೇಟಿಯಾಗಿ ಐವತ್ತು ನಿಮಿಷಗಳ ಕಾಲ ಮಾತನಾಡಿದರು.