ರಾಜ್ಯ ಮಹಿಳೆಯರ ಸಮಾವೇಶ
ಬೆಂಗಳೂರು, ಅ. 6 - ರಾಜ್ಯದ ಮಹಿಳೆಯರ ಪರವಾಗಿ ಇಂದು ಇಲ್ಲಿ ಸಮಾವೇಶಗೊಂಡ ಮಹಿಳೆಯರ ಪ್ರಾತಿನಿಧಿಕ ಸಮ್ಮೇಳನ ತೃತೀಯ ಪಂಚವಾರ್ಷಿಕ ಯೋಜನೆಯ ಸಂದೇಶವನ್ನು ಜನತೆಗೆ ಸಾರಲು ಪಣತೊಟ್ಟಿತು.
ನಗರ ಭವನದಲ್ಲಿ ಸಮ್ಮೇಳನವನ್ನು ಉದ್ಘಾಟಿಸಿದ ಮುಖ್ಯಮಂತ್ರಿ ಶ್ರೀ ಬಿ. ಡಿ. ಜತ್ತಿ ಅವರು ತೃತೀಯ ಯೋಜನೆಯ ಪ್ರಮುಖ ಲಕ್ಷಣಗಳನ್ನು ವಿವರಿಸಿದರು.