<p><strong>ಎಲ್ಲ ಯಂತ್ರೋಪಕರಣ ತಯಾರಿಕೆಯಲ್ಲೂ ಸ್ವಾವಲಂಬನೆಗೆ ರಾಷ್ಟ್ರಪತಿ ಗಿರಿ ಕರೆ</strong></p>.<p><strong>ಬೆಂಗಳೂರು, ಮೇ 14– </strong>‘ನಮಗೆ ಅಗತ್ಯವಾದ ಪ್ರತಿಯೊಂದು ಯಂತ್ರೋಪಕರಣವನ್ನೂ– ಸೂಜಿಯಿಂದ ಜಹಜುವರೆಗೆ– ಇನ್ನೊಂದು ದಶಕದೊಳಗಾಗಿ ರಾಷ್ಟ್ರದಲ್ಲಿಯೇ ತಯಾರಿಸಲು’ ರಾಷ್ಟ್ರಪತಿ ವಿ.ವಿ ಗಿರಿ ಇಂದು ಇಲ್ಲಿ ಕಾರ್ಮಿಕ ಮತ್ತು ಕೈಗಾರಿಕೋದ್ಯಮಿಗಳಿಗೆ ಕರೆಯಿತ್ತರು.</p>.<p>‘ಸ್ವಾತಂತ್ರ್ಯ ಪಡೆದು 22 ವರ್ಷಗಳು ಉರುಳಿದರೂ ನಾವಿನ್ನೂ ಯಂತ್ರೋಪಕರಣಗಳಿಗೆ ಪರದೇಶಗಳನ್ನು ಅವಲಂಬಿಸಿರುವುದಕ್ಕೆ’ ಅವರು ವಿಷಾದಿಸಿ ‘ಅಗತ್ಯವಾದವುಗಳನ್ನೆಲ್ಲಾ ಇಲ್ಲೇ ಉತ್ಪಾದಿಸುವ ಹೊರತು ಭವಿಷ್ಯವಿಲ್ಲ. ಅದನ್ನು ಪ್ರತೀ ಕಾರ್ಮಿಕ ಮತ್ತು ಕೈಗಾರಿಕೋದ್ಯಮಿ ಮನಸ್ಸಿನಲ್ಲಿಟ್ಟುಕೊಳ್ಳಲಿ’ ಎಂದರು.</p>.<p><strong>ಹಿಂದುಳಿದ ಪ್ರದೇಶ: ಪುನರ್ವಿಮರ್ಶೆಗೆ ಸದಸ್ಯರ ಆಗ್ರಹ</strong></p>.<p><strong>ನವದೆಹಲಿ, ಮೇ 14– </strong>ರಾಜ್ಯ ಸರ್ಕಾರಗಳು ಆಯ್ಕೆ ಮಾಡಿರುವ ‘ಹಿಂದುಳಿದ’ ಪ್ರದೇಶಗಳ ವಿಷಯದಲ್ಲಿ ಇಂದು ರಾಜ್ಯಸಭೆ<br />ಯಲ್ಲಿ ಕೋಲಾಹಲ ಉಂಟಾಯಿತು.</p>.<p>ಇನ್ನೂ ‘ಹೆಚ್ಚು ಹಿಂದೆ ಉಳಿದಿರುವ’ ಪ್ರದೇಶಗಳನ್ನು ಕೈಬಿಡಲಾಗಿದೆ ಎಂದು ಅನೇಕ ರಾಜ್ಯಗಳ ಸದಸ್ಯರು ದೂರಿದರು.</p>.<p>ಇನ್ನೂ ಹಿಂದೆ ಬಿದ್ದಿರುವ ಪ್ರದೇಶಗಳಿರಬಹುದೆಂದೂ ಆದರೆ ಅದನ್ನು ನಿರ್ಧರಿಸುವುದು ಆಯಾ ರಾಜ್ಯ ಸರ್ಕಾರಗಳಿಗೆ ಬಿಟ್ಟಿದ್ದೆಂದೂ ಪ್ರಧಾನಿ ಅವರು ಉತ್ತರ ಕೊಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಎಲ್ಲ ಯಂತ್ರೋಪಕರಣ ತಯಾರಿಕೆಯಲ್ಲೂ ಸ್ವಾವಲಂಬನೆಗೆ ರಾಷ್ಟ್ರಪತಿ ಗಿರಿ ಕರೆ</strong></p>.<p><strong>ಬೆಂಗಳೂರು, ಮೇ 14– </strong>‘ನಮಗೆ ಅಗತ್ಯವಾದ ಪ್ರತಿಯೊಂದು ಯಂತ್ರೋಪಕರಣವನ್ನೂ– ಸೂಜಿಯಿಂದ ಜಹಜುವರೆಗೆ– ಇನ್ನೊಂದು ದಶಕದೊಳಗಾಗಿ ರಾಷ್ಟ್ರದಲ್ಲಿಯೇ ತಯಾರಿಸಲು’ ರಾಷ್ಟ್ರಪತಿ ವಿ.ವಿ ಗಿರಿ ಇಂದು ಇಲ್ಲಿ ಕಾರ್ಮಿಕ ಮತ್ತು ಕೈಗಾರಿಕೋದ್ಯಮಿಗಳಿಗೆ ಕರೆಯಿತ್ತರು.</p>.<p>‘ಸ್ವಾತಂತ್ರ್ಯ ಪಡೆದು 22 ವರ್ಷಗಳು ಉರುಳಿದರೂ ನಾವಿನ್ನೂ ಯಂತ್ರೋಪಕರಣಗಳಿಗೆ ಪರದೇಶಗಳನ್ನು ಅವಲಂಬಿಸಿರುವುದಕ್ಕೆ’ ಅವರು ವಿಷಾದಿಸಿ ‘ಅಗತ್ಯವಾದವುಗಳನ್ನೆಲ್ಲಾ ಇಲ್ಲೇ ಉತ್ಪಾದಿಸುವ ಹೊರತು ಭವಿಷ್ಯವಿಲ್ಲ. ಅದನ್ನು ಪ್ರತೀ ಕಾರ್ಮಿಕ ಮತ್ತು ಕೈಗಾರಿಕೋದ್ಯಮಿ ಮನಸ್ಸಿನಲ್ಲಿಟ್ಟುಕೊಳ್ಳಲಿ’ ಎಂದರು.</p>.<p><strong>ಹಿಂದುಳಿದ ಪ್ರದೇಶ: ಪುನರ್ವಿಮರ್ಶೆಗೆ ಸದಸ್ಯರ ಆಗ್ರಹ</strong></p>.<p><strong>ನವದೆಹಲಿ, ಮೇ 14– </strong>ರಾಜ್ಯ ಸರ್ಕಾರಗಳು ಆಯ್ಕೆ ಮಾಡಿರುವ ‘ಹಿಂದುಳಿದ’ ಪ್ರದೇಶಗಳ ವಿಷಯದಲ್ಲಿ ಇಂದು ರಾಜ್ಯಸಭೆ<br />ಯಲ್ಲಿ ಕೋಲಾಹಲ ಉಂಟಾಯಿತು.</p>.<p>ಇನ್ನೂ ‘ಹೆಚ್ಚು ಹಿಂದೆ ಉಳಿದಿರುವ’ ಪ್ರದೇಶಗಳನ್ನು ಕೈಬಿಡಲಾಗಿದೆ ಎಂದು ಅನೇಕ ರಾಜ್ಯಗಳ ಸದಸ್ಯರು ದೂರಿದರು.</p>.<p>ಇನ್ನೂ ಹಿಂದೆ ಬಿದ್ದಿರುವ ಪ್ರದೇಶಗಳಿರಬಹುದೆಂದೂ ಆದರೆ ಅದನ್ನು ನಿರ್ಧರಿಸುವುದು ಆಯಾ ರಾಜ್ಯ ಸರ್ಕಾರಗಳಿಗೆ ಬಿಟ್ಟಿದ್ದೆಂದೂ ಪ್ರಧಾನಿ ಅವರು ಉತ್ತರ ಕೊಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>