ವಾಹನ ಸಂಚಾರಕ್ಕೆ, ಕೈಗಾರಿಕೆಗಳಿಗೆ, ಗೋದಾಮುಗಳಿಗೆ, ಕಟ್ಟಡಗಳಿಗೆ ಎಂದು ವಿವಿಧೋದ್ದೇಶಗಳಿಗೆ ಕೃಷಿಭೂಮಿ ಅಥವಾ ಅರಣ್ಯದ ಹಸಿರನ್ನು ಹಾಳುಗೆಡವುತ್ತಾ ಸಾಗಿದರೆ ಮುಂದೆ ಭೂಮಿಯ ಗತಿ ಏನು? ಈಗಾಗಲೇ ಕೃಷಿಯಿಂದ ವಿಮುಖರಾಗಿ ನಗರಕ್ಕೆ ವಲಸೆ ಬರುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಅಂತಹವರನ್ನು ಗುರುತಿಸಿ ಹೆಚ್ಚಿನ ಅನುಕೂಲ ಮಾಡಿಕೊಟ್ಟು ಕೃಷಿಯಲ್ಲಿ ತೊಡಗಿಕೊಳ್ಳುವಂತೆ ಪ್ರೇರೇಪಿಸಬೇಕಾದ ಸರ್ಕಾರವೇ ಕೃಷಿ ಜಮೀನನ್ನು ವಶಪಡಿಸಿಕೊಳ್ಳುತ್ತಾ ಸಾಗಿದರೆ, ಮುಂದೊಂದು ದಿನ ತುತ್ತು ಅನ್ನಕ್ಕಾಗಿ ಪರದಾಡಬೇಕಾದ ಸ್ಥಿತಿ ಎದುರಾಗುತ್ತದೆ. ಈಗಲೂ ಕಾಲ ಮಿಂಚಿಲ್ಲ. ಸರ್ಕಾರ ಮತ್ತು ಸಮಾಜ ಎಚ್ಚೆತ್ತುಕೊಳ್ಳಲಿ. ಕೇವಲ ಹಣದ ಥೈಲಿ ಹೊಟ್ಟೆ ತುಂಬಿಸದು.