<p>ರಾಷ್ಟ್ರಪಿತ ಮಹಾತ್ಮ ಗಾಂಧಿಯವರನ್ನು ಗುಂಡಿಕ್ಕಿ ಕೊಂದ ನಾಥೂರಾಂ ಗೋಡ್ಸೆಯ ಪ್ರತಿಮೆ ಸ್ಥಾಪಿಸಲು ಹಿಂದೂ ಸೇನಾ ಸಂಘಟನೆ ತೆಗೆದುಕೊಂಡಿರುವ ನಿರ್ಧಾರ (ಪ್ರ.ವಾ., ಸೆ. 13) ಹಿಂಸೆಯನ್ನು ಪ್ರಚೋದಿಸುವ ಕೃತ್ಯ. ವಿಶ್ವವನ್ನೇ ಬೆರಗುಗೊಳಿಸಿದ ಭಾರತೀಯ ಅಹಿಂಸಾ ಸಿದ್ಧಾಂತಕ್ಕೆ ತಿಲಾಂಜಲಿಯನ್ನಿಕ್ಕುವ ಘೋರ ಪ್ರಮಾದಕ್ಕೆ ಇದು ಆಸ್ಪದವನ್ನು ನೀಡುತ್ತದೆ.</p>.<p>ಗೋಡ್ಸೆ ವಿಚಾರಗಳು ದೇಶಹಿತದ ಪರವಾಗಿ ಇದ್ದವೋ ಇಲ್ಲವೋ ಆದರೆ ಆತನು ತುಳಿದ ಹಿಂಸಾಮಾರ್ಗ ಮಾತ್ರ ಎಂದೆಂದಿಗೂ ಕ್ಷಮಿಸುವಂಥದ್ದಲ್ಲ. ಇಂದಿನ ಯುವಕರಲ್ಲಿ ರಾಷ್ಟ್ರಪ್ರೇಮವನ್ನು ತುಂಬುವುದು ಪ್ರತಿಮೆ ಸ್ಥಾಪಿಸುವ ಉದ್ದೇಶ ಎಂದು ಸಂಘಟಕರು ಹೇಳಿದ್ದಾರೆ. ಗೋಡ್ಸೆ ಅಂತಹವರ ವಿಚಾರಗಳಿಂದ ರಾಷ್ಟ್ರಭಕ್ತಿಯನ್ನು<br />ಕಲಿಯುವುದು ಸರ್ವತಾ ಸಾಧ್ಯವಿಲ್ಲ. ಹಾಗೆ ಮಾಡುತ್ತೇವೆ ಎಂದುಕೊಂಡರೆ ಅದೊಂದು ಹಾಸ್ಯಾಸ್ಪದ ವಿಚಾರ. ಗಾಂಧಿ ಹಂತಕನ ಪ್ರತಿಮೆ ಸ್ಥಾಪನೆ ಪ್ರಯತ್ನ ನಿಲ್ಲಬೇಕು.</p>.<p><strong>– ಪ್ರೊ. ಶಾಶ್ವತಸ್ವಾಮಿ ಮುಕ್ಕುಂದಿಮಠ,ಸಿಂಧನೂರು</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಾಷ್ಟ್ರಪಿತ ಮಹಾತ್ಮ ಗಾಂಧಿಯವರನ್ನು ಗುಂಡಿಕ್ಕಿ ಕೊಂದ ನಾಥೂರಾಂ ಗೋಡ್ಸೆಯ ಪ್ರತಿಮೆ ಸ್ಥಾಪಿಸಲು ಹಿಂದೂ ಸೇನಾ ಸಂಘಟನೆ ತೆಗೆದುಕೊಂಡಿರುವ ನಿರ್ಧಾರ (ಪ್ರ.ವಾ., ಸೆ. 13) ಹಿಂಸೆಯನ್ನು ಪ್ರಚೋದಿಸುವ ಕೃತ್ಯ. ವಿಶ್ವವನ್ನೇ ಬೆರಗುಗೊಳಿಸಿದ ಭಾರತೀಯ ಅಹಿಂಸಾ ಸಿದ್ಧಾಂತಕ್ಕೆ ತಿಲಾಂಜಲಿಯನ್ನಿಕ್ಕುವ ಘೋರ ಪ್ರಮಾದಕ್ಕೆ ಇದು ಆಸ್ಪದವನ್ನು ನೀಡುತ್ತದೆ.</p>.<p>ಗೋಡ್ಸೆ ವಿಚಾರಗಳು ದೇಶಹಿತದ ಪರವಾಗಿ ಇದ್ದವೋ ಇಲ್ಲವೋ ಆದರೆ ಆತನು ತುಳಿದ ಹಿಂಸಾಮಾರ್ಗ ಮಾತ್ರ ಎಂದೆಂದಿಗೂ ಕ್ಷಮಿಸುವಂಥದ್ದಲ್ಲ. ಇಂದಿನ ಯುವಕರಲ್ಲಿ ರಾಷ್ಟ್ರಪ್ರೇಮವನ್ನು ತುಂಬುವುದು ಪ್ರತಿಮೆ ಸ್ಥಾಪಿಸುವ ಉದ್ದೇಶ ಎಂದು ಸಂಘಟಕರು ಹೇಳಿದ್ದಾರೆ. ಗೋಡ್ಸೆ ಅಂತಹವರ ವಿಚಾರಗಳಿಂದ ರಾಷ್ಟ್ರಭಕ್ತಿಯನ್ನು<br />ಕಲಿಯುವುದು ಸರ್ವತಾ ಸಾಧ್ಯವಿಲ್ಲ. ಹಾಗೆ ಮಾಡುತ್ತೇವೆ ಎಂದುಕೊಂಡರೆ ಅದೊಂದು ಹಾಸ್ಯಾಸ್ಪದ ವಿಚಾರ. ಗಾಂಧಿ ಹಂತಕನ ಪ್ರತಿಮೆ ಸ್ಥಾಪನೆ ಪ್ರಯತ್ನ ನಿಲ್ಲಬೇಕು.</p>.<p><strong>– ಪ್ರೊ. ಶಾಶ್ವತಸ್ವಾಮಿ ಮುಕ್ಕುಂದಿಮಠ,ಸಿಂಧನೂರು</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>