ರಾಷ್ಟ್ರಪಿತ ಮಹಾತ್ಮ ಗಾಂಧಿಯವರನ್ನು ಗುಂಡಿಕ್ಕಿ ಕೊಂದ ನಾಥೂರಾಂ ಗೋಡ್ಸೆಯ ಪ್ರತಿಮೆ ಸ್ಥಾಪಿಸಲು ಹಿಂದೂ ಸೇನಾ ಸಂಘಟನೆ ತೆಗೆದುಕೊಂಡಿರುವ ನಿರ್ಧಾರ (ಪ್ರ.ವಾ., ಸೆ. 13) ಹಿಂಸೆಯನ್ನು ಪ್ರಚೋದಿಸುವ ಕೃತ್ಯ. ವಿಶ್ವವನ್ನೇ ಬೆರಗುಗೊಳಿಸಿದ ಭಾರತೀಯ ಅಹಿಂಸಾ ಸಿದ್ಧಾಂತಕ್ಕೆ ತಿಲಾಂಜಲಿಯನ್ನಿಕ್ಕುವ ಘೋರ ಪ್ರಮಾದಕ್ಕೆ ಇದು ಆಸ್ಪದವನ್ನು ನೀಡುತ್ತದೆ.