ಕಂಬಳ ಕ್ರೀಡೆಯು ಇತ್ತೀಚೆಗೆ ಬುಹು ಚರ್ಚಿತ ವಿಷಯವಾಗಿದೆ. ಕಂಬಳ ಕ್ರೀಡಾಪಟು ಶ್ರೀನಿವಾಸ ಗೌಡರಿಂದ ಹಿಡಿದು ಓಟಗಾರ ಉಸೇನ್ ಬೋಲ್ಟ್ ಅವರವರೆಗೂ ಹೋಲಿಕೆ, ಚರ್ಚೆಗಳು ನಡೆಯುತ್ತಿವೆ. ಶಾಸಕರಾಗಿದ್ದ ದಿವಂಗತ ಪುಟ್ಟಣ್ಣಯ್ಯ ಅವರು ಈ ಹಿಂದೆ ಸದನದಲ್ಲಿ ಮಾತನಾಡುತ್ತಾ, ಕಂಬಳದಲ್ಲಿ ಕೋಣಗಳೊಂದಿಗೆ ಓಡುವ ಹತ್ತು ಓಟಗಾರರನ್ನು ಸರ್ಕಾರ ಗುರುತಿಸಿ, ತರಬೇತಿ ನೀಡಿದ್ದೇ ಆದರೆ, ಒಲಿಂಪಿಕ್ಸ್ನಲ್ಲಿ ಕನಿಷ್ಠ ಏಳೆಂಟು ಸ್ವರ್ಣ ಪದಕಗಳನ್ನು ಗೆಲ್ಲುವುದು ಅಸಾಧ್ಯವೇನಲ್ಲ. ಸರ್ಕಾರ ಇತ್ತ ಮನಸ್ಸು ಮಾಡಬೇಕು ಎಂದು ಸಲಹೆ ನೀಡಿದ್ದರು.