ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗಂತೂ ಹಲವು ಸಂದೇಶಗಳನ್ನು ಫೋಟೊಶಾಪ್ ಮಾಡಿ ವಿವಿಧ ನಾಯಕರ, ಪಕ್ಷಗಳ ತೇಜೋವಧೆ ಮಾಡಲಾಗುತ್ತಿದೆ. ಇದನ್ನು ಅವರವರ ಐ.ಟಿ ಸೆಲ್ಗಳು ಮಾಡುತ್ತಿರಬಹುದು. ಅವುಗಳನ್ನು ವ್ಯವಸ್ಥಿತವಾಗಿ ಅಭಿಮಾನಿಗಳು, ಭಕ್ತರು, ಕಾರ್ಯಕರ್ತರು ಹರಿಯಬಿಡುತ್ತಿದ್ದಾರೆ. ವಿಪರ್ಯಾಸವೆಂದರೆ, ಸಾಧನೆಗಳಿಗಿಂತ ಸುಳ್ಳನ್ನೇ ಸತ್ಯವೆಂಬಂತೆ ಬಿಂಬಿಸಲಾಗುತ್ತಿದೆ. ಕೀಳುಮಟ್ಟದ ಭಾಷೆಯನ್ನು ಸಹ ಬಳಸಲಾಗುತ್ತಿದೆ. ಅಂಗೈಯಲ್ಲಿ ವಿಶ್ವವನ್ನು ಕಾಣಿಸುವ ಮೊಬೈಲ್ಗಳು ಮನುಕುಲಕ್ಕೆ ಉತ್ತಮ ಸಂದೇಶ, ಮಾಹಿತಿ ಕೊಡುವುದಕ್ಕಿಂತ ಯುವಜನಾಂಗಕ್ಕೆ ಮಾರಕ ಸಂದೇಶಗಳನ್ನು ನೀಡುತ್ತಿರುವುದು ವಿಷಾದದ ಸಂಗತಿ.