ಕನ್ನಡ ವಿಷಯಕ್ಕಂತೂ ಏಕರೂಪಿ ಅಸಂಗತ. ಸೃಜನಶೀಲ ಸಾಹಿತ್ಯದಲ್ಲೂ ಆಯಾ ಪ್ರಾಂತ್ಯದ ನೆಲದ ಬದುಕು,ಸಂಸ್ಕೃತಿಯ ಹಿರಿಮೆಯಿದೆ. ಅವುಗಳನ್ನು ಪೀಳಿಗೆಗೆ ಹೇಳುವರಾರು? ಈ ನೆಲದ ಬಹುತ್ವ ಮತ್ತು ಬಹುಸಂಸ್ಕೃತಿ ಚಿಂತನೆಯಿಂದ ವಿದ್ಯಾರ್ಥಿಗಳು ವಂಚಿತರಾಗುವುದಷ್ಟೇ ಅಲ್ಲ, ವೈವಿಧ್ಯಮಯ ಜ್ಞಾನಾರ್ಜನೆಯಿಂದಲೂ ವಂಚಿತರಾಗಬೇಕಾಗುತ್ತದೆ. ಸಾಧ್ಯವಾದರೆ ಕಳಪೆ ಪಠ್ಯ ರಚನೆಯಾಗದಂತೆ ಒಂದು ಮಾರ್ಗಸೂಚಿ ರೂಪಿಸಲಿ. ಅದಕ್ಕೊಂದು ತಜ್ಞರ ಸಮಿತಿಯಿರಲಿ.