ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಸೂಕ್ಷ್ಮಗ್ರಹಿಕೆ ಏಕಿಲ್ಲ?

Last Updated 7 ಆಗಸ್ಟ್ 2020, 17:52 IST
ಅಕ್ಷರ ಗಾತ್ರ

ಕನ್ನಡದ ಕೆಲವು ಟಿ.ವಿ. ವಾಹಿನಿಗಳಲ್ಲಿ ಏರುಸಂಜೆ ಹೊತ್ತಿಗೆ ಕಾಂಡೋಮ್ ಜಾಹೀರಾತು ಪ್ರಸಾರಗೊಳ್ಳುತ್ತಿದೆ. ಸಾಮಾನ್ಯವಾಗಿ ಮನೆಗಳಲ್ಲಿ ಹಿರಿಯರು, ಮಕ್ಕಳು ಕುಳಿತು ಸಂಜೆ ವೇಳೆ ವಾರ್ತೆ, ಮನರಂಜನೆಯಂತಹ ಕಾರ್ಯಕ್ರಮಗಳನ್ನು ವೀಕ್ಷಿಸುತ್ತಿರುತ್ತಾರೆ. ಇಂತಹ ಅವಧಿಯಲ್ಲಿ ಕಾಂಡೋಮ್ ಜಾಹೀರಾತು ಪ್ರಸಾರ ಮಾಡುವುದು ಎಷ್ಟರಮಟ್ಟಿಗೆ ಸರಿ? ಇದರಿಂದ ಮಕ್ಕಳ ಎದುರು ಹಿರಿಯರು ಮುಜುಗರ ಅನುಭವಿಸಬೇಕಾದ ಸಂಕಷ್ಟ ಎದುರಾಗುತ್ತಿದೆ.

ಸಂಬಂಧಪಟ್ಟವರಿಗೆ ಈ ಕುರಿತಾದ ಸೂಕ್ಷ್ಮಗ್ರಹಿಕೆ ಏಕಿಲ್ಲ? ಇಷ್ಟಕ್ಕೂ ಇಂತಹ ಜಾಹೀರಾತನ್ನು ಪ್ರೈಮ್ ಟೈಮ್ ಸಮಯ ಮುಗಿದ ಬಳಿಕ, ಅಂದರೆ, ರಾತ್ರಿ 11ರ ನಂತರ ಪ್ರಸಾರ ಮಾಡಬಹುದು. ಮಕ್ಕಳ ವಯೋಸಹಜ ಕುತೂಹಲಭರಿತ ಸೋಜಿಗದ ಪ್ರಶ್ನೆಗಳಿಂದ ಮನೆಯ ಹಿರಿಯರು ಮುಜುಗರ ಅನುಭವಿಸುವಂತೆ ಆಗಬಾರದು.

-ಭಾರತಿ ಎಂ. ಕುಲಕರ್ಣಿ, ಕಲಬುರ್ಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT